ರವಿಶಂಕರ್ ಗುರೂಜಿ ಕಟ್ಟಡ ನೆಲಸಮಕ್ಕೆ ಸುಪ್ರೀಂ ಆದೇಶ
Recommended Video
ಕೋಲ್ಕತಾ, ನವೆಂಬರ್ 09: ಆರ್ಟ್ ಆಫ್ ಲಿವಿಂಗ್ ಖ್ಯಾತಿಯ ರವಿಶಂಕರ್ ಗುರೂಜಿ ಅವರ ಟ್ರಸ್ಟಿಗೆ ಸೇರಿರುವ ಕಟ್ಟಡವನ್ನು ನೆಲಸಮಗೊಳಿಸಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಆರ್ಟ್ ಆಫ್ ಲಿವಿಂಗ್ ನ 3 ಅಂತಸ್ತಿನ ಕಟ್ಟಡ ನೆಲಸಮ ಮಾಡಲು ಕೋಲ್ಕತಾ ನಗರ ಪಾಲಿಕೆಗೆ ಅನುಮತಿ ನೀಡಬಾರದು ಎಂದು ಆರ್ಟ್ ಆಫ್ ಲಿವಿಂಗ್ನ ಭಾಗವಾಗಿರುವ ವೈದಿಕ್ ಧರ್ಮ ಸಂಸ್ಥಾನ ಟ್ರಸ್ಟ್ಮನವಿ ಮಾಡಿತ್ತು.
'ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಬಂಧಿಸಿ': ಅಗ್ನಿ
ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮದನ್ ಬಿ ಲೋಕುರ್ ನೇತೃತ್ವದ ನ್ಯಾಯಪೀಠವು, ಪರಿಸರ ಸೂಕ್ಷ್ಮ ಪ್ರದೇಶದ ಸಂರಕ್ಷಣೆ ದೃಷ್ಟಿಯಿಂದ ಈ ಕಟ್ಟಡವನ್ನು ನೆಲಸಮಗೊಳಿಸುವುದು ಸೂಕ್ತ ಎಂದು ಹೇಳಿದೆ.
ಕೋಲ್ಕತಾದ ಪೂರ್ವಭಾಗದಲ್ಲಿ ಜಲಾನಯನ ಪ್ರದೇಶದಲ್ಲಿರುವ ಈ ಕಟ್ಟಡದಿಂದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಧಕ್ಕೆಯಾಗುತ್ತದೆ ಎಂದು 'ಪೀಪಲ್ಸ್ ಯುನೈಟೆಡ್ ಫಾರ್ ಬೆಟರ್ ಲಿವಿಂಗ್ ಇನ್ ಕಲ್ಕತ್ತ (ಪಬ್ಲಿಕ್) ಎಂಬ ಎನ್ ಜಿಒವೊಂಡು ಎನ್ಜಿಟಿಗೆ ದೂರು ಸಲ್ಲಿಸಿತ್ತು. ಕಟ್ಟಡ ನೆಲಸಮಕ್ಕೆ ಎನ್ಜಿಟಿ ಆದೇಶ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ವೈದಿಕ ಧರ್ಮ ಸಂಸ್ಥಾನ ಟ್ರಸ್ಟ್ ಮೇಲ್ಮನವಿ ಸಲ್ಲಿಸಿತ್ತು.