ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳದಲ್ಲಿ ದೀದಿ ಪರ ಅಖಾಡಕ್ಕಿಳಿದ ಪ್ರಶಾಂತ್ ಕಿಶೋರ್

|
Google Oneindia Kannada News

ಕೋಲ್ಕತ್ತಾ, ಜುಲೈ 10: ಪ್ರಖ್ಯಾತ ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಪ್ರಶಾಂತ್ ಕಿಶೋರ್ ಅವರು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು 2021 ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಲೇಬೇಕೆಂಬ ಪಣತೊಟ್ಟಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 5 ಲಕ್ಷ ಯುವಕರನ್ನು ರಾಜಕೀಯಕ್ಕೆ ಸೇರಿಸುವ ಪ್ರಯತ್ನಕ್ಕೆ ಅವರು ಕೈ ಹಾಕಿದ್ದಾರೆ. ದಿನಕ್ಕೆ ಐದು ಸಾವಿರ ಯುವಕರನ್ನು ರಾಜಕೀಯಕ್ಕೆ ಸೇರಿಸಲು ಕಿಶೋರ್ ತಂಡ ಮುಂದಾಗಿದ್ದು, ಎರಡು ವರ್ಷದ ನಂತರ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಭದ್ರ ಬುನಾದಿ ಹಾಕಲು ಮುಂದಾಗಿದೆ.

ಕುತೂಹಲ ಹುಟ್ಟಿಸಿರುವ ದೀದಿ, ಪ್ರಶಾಂತ್ ಕಿಶೋರ್ ಎರಡನೆಯ ಭೇಟಿ ಕುತೂಹಲ ಹುಟ್ಟಿಸಿರುವ ದೀದಿ, ಪ್ರಶಾಂತ್ ಕಿಶೋರ್ ಎರಡನೆಯ ಭೇಟಿ

ಮೊದಲು ಐದು ಲಕ್ಷ ಸದಸ್ಯರನ್ನು ಈ ಅಭಿಯಾನದಡಿ ದಾಖಲಿಸಿ, ನಂತರ ಅವರಿಗೆ ತರಬೇತಿ ನೀಡಿ, ಅವರಿಗೆ ಇಷ್ಟವಿರುವ ರಾಜಕಿಯ ಪಕ್ಷವನ್ನು ಸೇರಲು ಸ್ವಾತಂತ್ರ್ಯ ನೀಡಲಾಗುತ್ತದೆ.

Strategist Prashant Kishor to woo 5 lakh youth to join politics in WB

ಇವರಲ್ಲಿ ಬಹುತೇಕ ಜನರು ಟಿಎಂಸಿ ಗೇ ಬೆಂಬಲನೀಡಬಹುದಾದ ಸಾಧ್ಯತೆ ಇರುವುದರಿಂದ ಇದರಿಂದ ಪಕ್ಷಕ್ಕೇ ಲಾಭವಾಗಲಿದೆ.

ಚುನಾವಣಾ ತಂತ್ರಗಾರಿಕೆ: ಅಮಿತ್ ಶಾ ಪ್ರಿನ್ಸಿಪಾಲ್, ಪ್ರಶಾಂತ್ ಕಿಶೋರ್ ಇನ್ನೂ ವಿದ್ಯಾರ್ಥಿಚುನಾವಣಾ ತಂತ್ರಗಾರಿಕೆ: ಅಮಿತ್ ಶಾ ಪ್ರಿನ್ಸಿಪಾಲ್, ಪ್ರಶಾಂತ್ ಕಿಶೋರ್ ಇನ್ನೂ ವಿದ್ಯಾರ್ಥಿ

ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವನೆಯ ನಂತರ ತೃಣಮೂಲ ಕಾಂಗ್ರೆಸ್ ನ ಭದ್ರಕೋಟೆಯನ್ನು ಬಿಜೆಪಿ ಭೇದಿಸುತ್ತಿರುವುದು ಸಾಬೀತಾಗಿದೆ. 2014 ರ ಲೋಕಸಭೆ ಚುನಾವಣೆಯಲ್ಲಿ ಕೇಲವ ಎರಡು ಕ್ಷೇತ್ರಗಳಲ್ಲಿ ಗೆಲುವು ಸಸಾಧಿಸಿದ್ದ ಬಿಜೆಪಿ ಈ ಬಾರಿ ಅಚ್ಚರಿ ಎಂಬಂತೆ ಬರೋಬ್ಬರಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವಿದ್ದಿದ್ದರಿಂದ ಮಮತಾ ಬ್ಯಾನರ್ಜಿ ಅವರು ಪ್ರಶಾಂತ್ ಕಿಶೋರ್ ಅವರ ಮೊರೆಹೋಗಿದ್ದಾರೆ. ಲೋಕಸಭೆ ಚುನಾವಣೆಯ ನಂತರ ಬಂಗಾಳ ರಾಜಕೀಯದಲ್ಲೂ ಬದಲಾವಣೆಯಾಗುತ್ತಿದ್ದು, ಹಲವು ಟಿಎಂಸಿ ಸದಸ್ಯರು ಈಗಾಗಲೇ ಬಿಜೆಪಿ ಸೇರಿದ್ದಾರೆ.

English summary
Political strategist Prashant Kishor to woo 5 lakh youth to join politics in West Bengal, aims to create additional force for TMC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X