'ಮಹಾರಾಷ್ಟ್ರ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ, ಉತ್ತಮ ಆತಿಥ್ಯ ನೀಡುತ್ತೇವೆ': ಮಮತಾ ಲೇವಡಿ
ಕೋಲ್ಕತ್ತಾ ಜೂನ್ 23: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು 'ಅನೈತಿಕ ರೀತಿಯಲ್ಲಿ' ಬೀಳಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಯತ್ನಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಆರೋಪಿಸಿದ್ದಾರೆ. ಈ ವಿಷಯದ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ. ಮಹಾರಾಷ್ಟ್ರದ ಶಾಸಕರನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿದರೆ ಅವರ ಸರ್ಕಾರ ಅವರಿಗೆ ಉತ್ತಮ ಆತಿಥ್ಯವನ್ನು ನೀಡುತ್ತದೆ ಎಂದು ಹೇಳಿ ಕುಟುಕಿದ್ದಾರೆ.
"ಬಿಜೆಪಿಯು ಮಹಾರಾಷ್ಟ್ರ ಸರ್ಕಾರವನ್ನು ಅನೈತಿಕ ರೀತಿಯಲ್ಲಿ ಉರುಳಿಸಲು ಪ್ರಯತ್ನಿಸುತ್ತಿದೆ... ಮಹಾರಾಷ್ಟ್ರದ ಶಾಸಕರನ್ನು ಬಂಗಾಳಕ್ಕೆ ಕಳುಹಿಸಿ, ನಾವು ಅವರಿಗೆ ಉತ್ತಮ ಆತಿಥ್ಯ ನೀಡುತ್ತೇವೆ" ಎಂದು ಅವರು ಹೇಳಿದರು. "ನಾವು ಉದ್ಧವ್ ಠಾಕ್ರೆ ಮತ್ತು ಎಲ್ಲರಿಗೂ ನ್ಯಾಯವನ್ನು ಬಯಸುತ್ತೇವೆ. ಇಂದು (ಬಿಜೆಪಿ) ನೀವು ಅಧಿಕಾರದಲ್ಲಿದ್ದೀರಿ ಮತ್ತು ಹಣ, ಮಾಂಸ ಮತ್ತು ಮಾಫಿಯಾ ಶಕ್ತಿಯನ್ನು ಬಳಸುತ್ತಿದ್ದೀರಿ. ಆದರೆ ಒಂದು ದಿನ ನೀವು ಹೋಗಬೇಕು. ನಿಮ್ಮ ಪಕ್ಷವನ್ನೂ ಯಾರಾದರೂ ಒಡೆಯಬಹುದು. ಇದು ತಪ್ಪು. ನಾನು ಅಲ್ಲ ಇದನ್ನು ಯಾರೂ ಕೂಡ ಬೆಂಬಲಿಸುವುದಿಲ್ಲ" ಎಂದು ಬ್ಯಾನರ್ಜಿ ಭಾಷಣದಲ್ಲಿ ಹೇಳಿದರು.
ದೂರದ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವು ಪತನಗೊಳ್ಳುತ್ತಿರುವ ಸಮಯದಲ್ಲಿ ಬಿಜೆಪಿಯ ಮೇಲೆ ಬ್ಯಾನರ್ಜಿಯವರ ವಾಗ್ದಾಳಿ ಮಾಡಿದ್ದಾರೆ. ಸುಮಾರು 40 ಶಿವಸೇನೆ ಶಾಸಕರು, ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ಜೊತೆಗಿನ ಸಂಬಂಧವನ್ನು ಮುರಿಯಲು ಸಂಚು ರೂಪಿಸಲಾಗಿದೆ. ಜೊತೆಗೆ ಅಸ್ಸಾಂನಲ್ಲಿ ಪ್ರವಾಹದ ಮಧ್ಯೆ, ಸಂತ್ರಸ್ತ ಜನರಿಗೆ ತೊಂದರೆ ನೀಡಲು ಮಹಾರಾಷ್ಟ್ರದ ಶಾಸಕರನ್ನು ಆ ರಾಜ್ಯಕ್ಕೆ ಕಳುಹಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಿವಸೇನಾ ಶಾಸಕ ಏಕನಾಥ್ ಶಿಂಧೆ ನೇತೃತ್ವದಲ್ಲಿ ಒಗ್ಗೂಡಿದ ಶಾಸಕರು ಬಿಜೆಪಿ ಆಡಳಿತವಿರುವ ಅಸ್ಸಾಂನ ಪಂಚತಾರಾ ಹೋಟೆಲ್ನಲ್ಲಿ ಬೀಡುಬಿಟ್ಟಿದ್ದಾರೆ. ಕಳೆದ ಕೆಲವು ದಿನಗಳ ಬೆಳವಣಿಗೆಗಳಲ್ಲಿ, ಶಿವಸೇನೆ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಅಧಿಕೃತ ನಿವಾಸದಿಂದ ಹೊರಬಂದು ಬುಧವಾರ ಮಾತೋಶ್ರೀಗೆ ಸ್ಥಳಾಂತರಗೊಂಡರು.