ಮಮತಾ ಬ್ಯಾನರ್ಜಿ ತಲೆಗೆ 1 ಕೋಟಿ ರೂ. ಶಾಕಿಂಗ್ ಪತ್ರಕ್ಕೆ TMCಯಲ್ಲಿ ನಡುಕ
Recommended Video
ಕೋಲ್ಕತ್ತಾ, ಜೂನ್ 10: "ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಜೀವಂತವಾಗಿ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 1 ಕೋಟಿ ರೂ ಬಹುಮಾನ ನೀಡಲಾಗುವುದು" ಎಂಬ ಒಕ್ಕಣೆಯ ಆಘಾತಕಾರಿ ಪತ್ರವೊಂದು ತೃಣಮೂಲ ಕಾಂಗ್ರೆಸ್ ಕಚೇರಿ ಸೇರಿದ್ದು, ಈ ಕುರಿತು ಪಕ್ಷಾಧ್ಯಕ್ಷೆ ಅಪರೂಪ ಪೊದ್ದರ್ ಕಳವಳ ವ್ಯಕ್ತಪಡಿಸಿದ್ದಾರೆ.
ಮಮತಾ ಬ್ಯಾನರ್ಜಿಗೆ ಕಿಮ್ ಜಾಂಗ್ ಉನ್ ಎಂದ ಗಿರಿರಾಜ್ ಸಿಂಗ್!
ಈ ಪತ್ರವನ್ನು ಈಗಾಗಲೇ ಸೆರಾಂಪುರ ಪೊಲೀಸ್ ಠಾಣೆಗೆ ಕಳಿಸಲಾಗಿದ್ದು, ರಾಜೀವ್ ಕಿಲ್ಲಾ ಎಂಬುವವರ ಸಹಿ ಪತ್ರದ ಮೇಲಿದೆ. ಪತ್ರದಲ್ಲಿ ಮೂರು ಫೋನ್ ನಂಬರ್ ಗಳಿದ್ದು, ಬರೆದವರ ವಿಳಾಸವನ್ನೂ ಉಲ್ಲೇಖಿಸಲಾಗಿದೆ!
ಮತ್ತೆ ರಣಕಹಳೆ ಊದಿದ ಮಮತಾ, ಬಿಜೆಪಿ ವಿಜಯಯಾತ್ರೆಗೆ ನಿಷೇಧ
"ಮಮತಾ ಬ್ಯಾನರ್ಜಿ ಒಬ್ಬ ರಾಕ್ಷಸಿ, ಅವರೊಬ್ಬ ಜಿಹಾದಿ. ಅವರ ಬಗ್ಗೆ ಯಾರಾದರೂ ಮಾಹಿತಿ ನೀದಿದರೆ, ಅವರನ್ನು ಜೀವಂತ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗುವುದು" ಎಂದು ಈ ಪತ್ರದಲ್ಲಿ ಬರೆಯಲಾಗಿದೆ.
ಲೋಕಸಭೆ ಚುನಾವಣೆಗೆ ಮುನ್ನ ಮತ್ತು ಫಲಿತಾಂಶದ ನಂತರ ಮಮತಾ ಬ್ಯಾನರ್ಜಿ ಅವರು ನಿರಂತರವಾಗಿ ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿವಾದಾತ್ಮಕ ಹೇಳಿಕೆ ನೀಡುತ್ತ ಬಂದಿದ್ದು, 'ನಮ್ಮ ತಂಟೆಗೆ ಬಂದವರನ್ನು ಮುಗಿಸಿಬಿಡುತ್ತೇವೆ' ಎಂದು ಅಬ್ಬರಿಸಿದ್ದರು. ಜೊತೆಗೆ ಇತ್ತೀಚೆಗೆ ನಡೆಯಬೇಕಿದ್ದ ಬಿಜೆಪಿ ವಿಜಯ ಯಾತ್ರೆಗೆ ನಿಷೇಧ ಒಡ್ಡಿದ್ದರು.