ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಫಾನ್: ಬಂಗಾಳದಲ್ಲಿ ಮೋದಿ ವೈಮಾನಿಕ ಸಮೀಕ್ಷೆ, 1000 ಕೋಟಿ ನೆರವು

|
Google Oneindia Kannada News

ಕೊಲ್ಕತ್ತಾ, ಮೇ 22: ಅಂಪಾನ್ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದು, 1000 ಕೋಟಿ ಪರಿಹಾರ ಘೋಷಿಸಿದ್ದಾರೆ.

Recommended Video

ಭಾಸ್ಕರ್ ರಾವ್ ತೆರವಿಗೆ ಚಿಂತಿಸುತ್ತಿದೆಯಾ ರಾಜ್ಯ ಸರ್ಕಾರ ? | Bhaskar Rao

ಪಶ್ಚಿಮ ಬಂಗಾಳ ರಾಜ್ಯವನ್ನು ಮತ್ತೆ ಪುನರ್‌ನಿರ್ಮಿಸಲು ಕಂದ್ರ ಸರ್ಕಾರ ಜೊತೆಯಲ್ಲಿರಲಿದೆ. ಕೊರೊನಾ ವೈರಸ್‌ ಜೊತೆಯಲ್ಲಿ ಚಂಡಮಾರುತದ ವಿರುದ್ಧ ಹೋರಾಟ ಮಾಡಬೇಕಾದ ಪರಿಸ್ಥಿತಿ. ಮಮತಾ ಬ್ಯಾನರ್ಜಿಯವರು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.

ಘರ್ಜಿಸಿದ ಅಂಫಾನ್ ಚಂಡಮಾರುತ: ತತ್ತರಿಸಿದ ಪಶ್ಚಿಮ ಬಂಗಾಳ, ಒಡಿಶಾದ ಚಿತ್ರಣಘರ್ಜಿಸಿದ ಅಂಫಾನ್ ಚಂಡಮಾರುತ: ತತ್ತರಿಸಿದ ಪಶ್ಚಿಮ ಬಂಗಾಳ, ಒಡಿಶಾದ ಚಿತ್ರಣ

ಆಂಫಾನ್ ಚಂಡಮಾರುತದಿಂದ ಉಂಟಾದ ಹಾನಿ ಮತ್ತು ಪೀಡಿತ ಪ್ರದೇಶಗಳ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರವಾದ ಸಮೀಕ್ಷೆ ನಡೆಸಲು ಕೇಂದ್ರದ ತಂಡವು ರಾಜ್ಯಕ್ಕೆ ಭೇಟಿ ನೀಡಲಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.

PM Narendra Modi Announces Rs 1,000cr Immediate Relief for Cyclone Amphan-Hit West Bengal

ಇಂದು ಬೆಳಿಗ್ಗೆ ಕೊಲ್ಕತ್ತಾಗೆ ಬಂದಿಳಿದ ಮೋದಿ ಅವರನ್ನು ಸಿಎಂ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್‌ ಸ್ವಾಗತಿಸಿದರು. ಅಲ್ಲಿಂದ ಮೂವರು ವಾಯುಪಡೆಯ ಹೆಲಿಕಾಫ್ಟರ್ ಮೂಲಕ ವೈಮಾನಿಕ ಸಮೀಕ್ಷೆ ಆರಂಭಿಸಿದರು. ಅಂಫಾನ್‌ಗೆ ಹೆಚ್ಚು ತುತ್ತಾಗಿರುವ ದಕ್ಷಿಣ ಬಂಗಾಳದಲ್ಲಿ ಮೋದಿ ಗಮನ ಹರಿಸಿದರು.

ಈ ವೇಳೆ ಅಂಪಾನ್ ಚಂಡಮಾರುತಿಂದ ಉತ್ತರ ಹಾಗೂ ದಕ್ಷಿಣ ಬಂಗಾಳದ ಜಿಲ್ಲೆಗಳು ಹೆಚ್ಚು ಹಾನಿಯಾಗಿದ್ದು, ರಾಜ್ಯದಲ್ಲಿ ಈವರೆಗೂ ಸುಮಾರು 80 ಜನರು ಬಲಿಯಾಗಿರುವ ಬಗ್ಗೆ ಮಮತಾ ಅವರು ಮೋದಿಗೆ ಮಾಹಿತಿ ನೀಡಿದರು.

English summary
Prime Minister Narendra Modi friday Announces 1000 crore For west bengal to fight Amphan cyclone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X