ಮಮತಾ ಬ್ಯಾನರ್ಜಿಯ ಮತ್ತೊಬ್ಬ ಆಪ್ತನನ್ನು ಸೆಳೆದ ಬಿಜೆಪಿ
ಕೊಲ್ಕತ್ತ, ಆಗಸ್ಟ್ 15: ಕೊಲ್ಕತ್ತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಮತ್ತೊಬ್ಬ ಆಪ್ತನನ್ನು ಬಿಜೆಪಿ ಸೆಳೆದಿದೆ.
ಲೋಕಸಭಾ ಚುನಾವಣೆ ತಯಾರಿಗಾಗಿ ಮಮತಾ ದೀದಿಯ ಪರಮಾಪ್ತ ಹಾಗೂ ಟಿಎಂಸಿಯ ಅಗ್ರಗಣ್ಯ ನಾಯಕರಾಗಿದ್ದ ಮುಕುಲ್ ರಾಯ್ ಅವರನ್ನು ಬಿಜೆಪಿ ಸೆಳೆದಿತ್ತು. ಈಗ ಸೋವನ್ ಚಟರ್ಜಿಯವರನ್ನು ತನ್ನತ್ತ ಸೆಳೆದಿದೆ.
ಜನರನ್ನು ಬಿಜೆಪಿಯಿಂದ ದೂರವಿಡಲು ಮಮತಾ ಮಾಡಿದ ಪ್ಲ್ಯಾನ್ ಸಕ್ಸಸ್
ಸೋವನ್ ಚಟರ್ಜಿ ಎರಡು ಬಾರಿ ಕೊಲ್ಕತ್ತ ಮೇಯರ್ ಆಗಿದ್ದರು. ಮತ್ತು ಮಮತಾ ಬ್ಯಾನರ್ಜಿ ಅವರಿಗೆ ಅತ್ಯಾಪ್ತರಾಗಿದ್ದವರು. ಅಷ್ಟೇ ಅಲ್ಲದೇ, ತೃಣಮೂಲ ಕಾಂಗ್ರೆಸ್ ಆರಂಭದಿಂದ ಜೊತೆಗೆ ಇದ್ದವರು.
2017ರಲ್ಲಿ ಪತ್ರಕರ್ತರು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಸೋವನ್ ಚಟರ್ಜಿ ಹಣ ಪಡೆದ ನಾರಾದ ಸ್ಟಿಂಗ್ ಆಪರೇಷನ್ನಲ್ಲಿ ಸಿಕ್ಕಿಬಿದ್ದಿದ್ದರಿಂದ ಇ.ಡಿ. ಮತ್ತು ಸಿಬಿಐ ಸಮನ್ಸ್ ನೀಡಿತ್ತು.
ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಬಳಿಕ ಆರು ಮಂದಿ ಟಿಎಂಸಿ ಶಾಸಕರು, ಕಾಂಗ್ರೆಸ್ - ಸಿಪಿಐಎಂನಿಂದ ಒಬ್ಬರಂತೆ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಧಿಕಾರ ಗದ್ದುಗೆಗೇರಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಅದಕ್ಕಾಗಿಯೇ ಬೇರೆ ಪಕ್ಷಗಳಿಂದ ನಾಯಕರನ್ನು ತನ್ನತ್ತ ಸೆಳೆಯುತ್ತಿದೆ.
ಕಾಶ್ಮೀರದ ಬಗ್ಗೆ ಅಂತೂ ಹೊರಬಂತು ದೀದಿ ಪ್ರತಿಕ್ರಿಯೆ!
ಮಮತಾ ಬ್ಯಾನರ್ಜಿ ಮುಖ್ಯಮಂತ್ರಿ ಹುದ್ದೆಗೇರಲು ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಈಗ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟಪಡುತ್ತೇನೆ. ಟಿಎಂಸಿ ಮುಂದಿನ ಬಾರಿ ಅಧಿಕೃತ ವಿರೋಧ ಪಕ್ಷವಾಗಿಯೂ ಉಳಿಯಲು ಸಾಧ್ಯವಿಲ್ಲ ಎಂದು ಮುಕುಲ್ ರಾಯ್ ಅಭಿಪ್ರಾಯ ವ್ಯಕ್ತಪಡಿಸಿದರು.