ಬಿಟ್ಟು ಹೋಗುವವರು ಹೋಗಲಿ, ಡೋಂಟ್ ಕೇರ್: ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜೂನ್ 18: "ಯಾವುದೇ ಶಾಸಕರಿಗೆ ಟಿಎಂಸಿ ಬಿಟ್ಟು ಹೋಗಬೇಕು ಎನ್ನಿಸಿದರೆ ಅವರು ಹೋಗಬಹುದು. ನಾವು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ" ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಸೋಮವಾರದಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗಿಯ, ಹಿರಿಯ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಟಿಎಂಸಿಯ ನೌಪರ ಶಾಸಕ ಸುನಿಲ್ ಸಿಂಗ್ ಬಿಜೆಪಿ ಸೇರಿದರು. ಅವರೊಂದಿಗೆ 12 ಕೌನ್ಸಲರ್ ಗಳೂ ಬಿಜೆಪಿ ಸೇರಿದ್ದರು.
ಬಿಜೆಪಿಗೆ ಟಿಎಂಸಿ ನಾಯಕ, ಮಮತಾ ಮೇಲೆರಗಿದ ಮತ್ತೊಂದು ಬರಸಿಡಿಲು!
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ಒಬ್ಬ ಕೌನ್ಸಲರ್ ಪಕ್ಷ ತೊರೆದರೆ 500 ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತಾಕತ್ತು ನನಗಿದೆ ಎಂದು ಅವರು ಹೇಳಿದರು.
"ತೃಣಮೂಲ ಕಾಂಗ್ರೆಸ್ ದುರ್ಬಲ ಪಕ್ಷವಲ್ಲ. 15-20 ಕೌನ್ಸೆಲರ್ ಗಳು ಹಣಕ್ಕಾಗಿ ಪಕ್ಶಃ ತೊರೆದರೆ ನಾವು ತಲೆ ಕೆಡಿಸಿಕೊಳ್ಳುವುದೂ ಇಲ್ಲ. ಪಕ್ಷದ ಶಾಸಕರಿಗೆ ಪಕ್ಷ ತೊರೆಯಬೇಕೆನ್ನಿಸಿದರೆ ತೊರೆಯಬಹುದು. ನಮಗೆ ಕಳ್ಳರನ್ನು ಪಕ್ಷದಲ್ಲಿರಿಸಿಕೊಳ್ಳಲು ಇಷ್ಟವೂ ಇಲ್ಲ. ಒಬ್ಬರು ಬಿಟ್ಟು ಹೋದರೆ 500 ಜನರನ್ನು ಸೇರಿಸೊಳ್ಳುವ ತಾಕತ್ತು ನನಗಿದೆ" ಎಂದು ಮತಾ ಬ್ಯಾನರ್ಜಿ ಹೇಳಿದರು.