ಬಂಗಾಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೋರಿ ಮೋದಿಗೆ ದೀದಿ ಪತ್ರ
ಕೋಲ್ಕತ್ತಾ, ಅಕ್ಟೋಬರ್ 06: ಪಶ್ಚಿಮ ಬಂಗಾಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕೋರಿ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಆಗಸ್ಟ್ 4 ರಂದು ಅವರು ಬರೆದ ಹಿಂದಿನ ಪತ್ರವನ್ನು ಉಲ್ಲೇಖಿಸಿರುವ ಮಮತಾ ಬ್ಯಾನರ್ಜಿ, "ದಕ್ಷಿಣ ಬಂಗಾಳದಲ್ಲಿ ಪದೇ ಪದೇ, ಮಾನವ ನಿರ್ಮಿತ ಪ್ರವಾಹ ಪರಿಸ್ಥಿತಿಗೆ ಜನ್ಮ ನೀಡುವ ರಚನಾತ್ಮಕ ಅಂಶಗಳನ್ನು ನಾನು ಹೈಲೈಟ್ ಮಾಡಿದ್ದೇನೆ" ಎಂದು ಹೇಳಿದ್ದಾರೆ.
ಭವಾನಿಪುರ ಉಪ ಚುನಾವಣೆ; ಮಮತಾ ಬ್ಯಾನರ್ಜಿ ಜಯಭೇರಿ
ಕೇಂದ್ರ ಸರ್ಕಾರವು ಮೂಲಭೂತವಾದ ರಚನಾತ್ಮಕ ಮತ್ತು ವ್ಯವಸ್ಥಾಪಕ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಮತ್ತು ದೀರ್ಘಾವಧಿಯಲ್ಲಿ ಪರಿಹರಿಸದ ಹೊರತು ಕೆಳಮಟ್ಟದಲ್ಲಿರುವ ನಮ್ಮ ರಾಜ್ಯಗಳಲ್ಲಿ ವಿಪತ್ತುಗಳು ನಿರಂತರವಾಗಿ ಮುಂದುವರಿಯುತ್ತವೆ ಎಂದು ದೀದಿ ಹೇಳಿದ್ದಾರೆ.
ಜಾರ್ಖಂಡ್ನ ಅಣೆಕಟ್ಟುಗಳು ಮತ್ತು ಬ್ಯಾರೇಜ್ಗಳಿಂದ ನೀರ ಹರಿಬಿಟ್ಟಿದ್ದರಿಂದ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಮತಾ ಬ್ಯಾನರ್ಜಿ ಅವರು, 'ಮಾನವ ನಿರ್ಮಿತ' ಬಂಗಾಳ ಪ್ರವಾಹಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಧಾನಿಗೆ
ಬರೆದ
ನಾಲ್ಕು
ಪುಟಗಳ
ಪತ್ರದಲ್ಲಿ,
ಪಶ್ಚಿಮ
ಬಂಗಾಳ
ಪ್ರವಾಹ
"ಮಾನವ
ನಿರ್ಮಿತ"
ಮತ್ತು
"ಅನಿಯಂತ್ರಿತ.
ಯೋಜಿತವಲ್ಲದ"
ಜಾರ್ಖಂಡ್
ನ
ಪಂಚೆಟ್
ಮತ್ತು
ಮೈಥಾನ್
ನಲ್ಲಿರುವ
ಡಿವಿಸಿ
ಅಣೆಕಟ್ಟುಗಳಿಂದ
ನೀರು
ಹೊರ
ಬಿಡುತ್ತಿರುವುದರಿಂದ
ಈ
ಪ್ರವಾಹ
ಉಂಟಾಗಿದೆ
ಎಂದು
ಮಮತಾ
ಬ್ಯಾನರ್ಜಿ
ಆರೋಪಿಸಿದ್ದಾರೆ.
ಭವಾನಿಪುರ
ವಿಧಾನಸಭಾ
ಕ್ಷೇತ್ರಕ್ಕೆ
ಸೆಪ್ಟೆಂಬರ್
30ರಂದು
ನಡೆದ
ಉಪ
ಚುನಾವಣೆಯಲ್ಲಿ
ಗೆಲುವು
ಸಾಧಿಸಿರುವ
ಪಶ್ಚಿಮ
ಬಂಗಾಳ
ಮುಖ್ಯಮಂತ್ರಿ
ಮಮತಾ
ಬ್ಯಾನರ್ಜಿ
ಅಕ್ಟೋಬರ್
07ರಂದು
ವಿಧಾನಸಭೆ
ಸದಸ್ಯೆಯಾಗಿ
ಪ್ರಮಾಣವಚನ
ಸ್ವೀಕರಿಸಲಿದ್ದಾರೆ.
ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಈ ಕುರಿತು ಮಾಹಿತಿ ನೀಡಿದ್ದು, ಉಪ ಚುನಾವಣೆಯಲ್ಲಿ ಹೊಸದಾಗಿ ಆಯ್ಕೆಯಾಗಿರುವ ಇಬ್ಬರು ಟಿಎಂಸಿ ಶಾಸಕರೂ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದರು.,
ಶಾಸಕರಿಗೆ ಪ್ರಮಾಣವಚನ ಬೋಧಿಸುವ ಸ್ಪೀಕರ್ ಅಧಿಕಾರವನ್ನು ಹಿಂಪಡೆದ ಬಂಗಾಳ ರಾಜ್ಯಪಾಲರುಶಾಸಕರಿಗೆ ಪ್ರಮಾಣವಚನ ಬೋಧಿಸುವ ಸ್ಪೀಕರ್ ಅಧಿಕಾರವನ್ನು ಹಿಂಪಡೆದ ಬಂಗಾಳ ರಾಜ್ಯಪಾಲರು
ಮಮತಾ ಬ್ಯಾನರ್ಜಿ ಅವರು ಭವಾನಿಪುರ ಉಪ ಚುನಾವಣೆಯಲ್ಲಿ 58,835 ಮತಗಳಿಂದ ಜಯಗಳಿಸಿದ್ದರು. ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಚುನಾವಣೆಯಲ್ಲಿ ಗೆಲ್ಲುವುದು ಅವರಿಗೆ ಅನಿವಾರ್ಯವಾಗಿತ್ತು. ಭಾನುವಾರ ಉಪ ಚುನಾವಣಾ ಫಲಿತಾಂಶ ಘೋಷಣೆಯಾಗಿತ್ತು.
ಜಾಕಿರ್ ಹುಸೇನ್ ಜಂಗೀಪುರ ಕ್ಷೇತ್ರ ಹಾಗೂ ಅಮಿರುಲ್ ಇಸ್ಲಾಂ ಅವರು ಸಂಸರ್ಗಂಜ್ ಕ್ಷೇತ್ರಗಳಿಂದ ಜಯ ಸಾಧಿಸಿದ್ದಾರೆ. ಚುನಾಯಿತ ಸದಸ್ಯರಾದ ಮಮತಾ ಬ್ಯಾನರ್ಜಿ, ಜಾಕಿರ್ ಹುಸೇನ್ , ಅಮಿರುಲ್ ಇಸ್ಲಾಂ ಅವರು ಅಕ್ಟೋಬರ್ 7 ರಂದು ಬೆಳಗ್ಗೆ 11.45ಕ್ಕೆ ಪ್ರಮಾಣವಚನ ಬೋಧಿಸಲಾಗುವುದು ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ.
ಕೋಲ್ಕತ್ತಾದ ಟಿಎಂಸಿ ಕಚೇರಿ ಮುಂದೆ ಮತ್ತು ಸಿಎಂ ಮಮತಾ ನಿವಾಸದ ಹೊರಗೆ ಸಂಭ್ರಮ ಮನೆಮಾಡಿದೆ. ಕಳೆದ ಬಾರಿ ಪಶ್ಚಿಮ ಬಂಗಾಳಕ್ಕೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪರಾಭವಗೊಂಡಿದ್ದರು. ಆದರೂ ಟಿಎಂಸಿಗೆ ಬಹುಮತ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾದರು.
ಅದಾಗಿ ಆರು ತಿಂಗಳ ಬಳಿಕ ಭವಾನಿಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ಗೆಲುವು ಮಮತಾ ಬ್ಯಾನರ್ಜಿಗೆ ಸಿಎಂ ಖುರ್ಚಿ ಉಳಿಸಿಕೊಳ್ಳಲು ಅನಿವಾರ್ಯವಾಗಿತ್ತು. ಪಶ್ಚಿಮ ಬಂಗಾಳದಲ್ಲಿ ವಿಧಾನ ಪರಿಷತ್ ಇಲ್ಲದ ಹಿನ್ನೆಲೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಉಪ ಚುನಾವಣೆ ನಡೆದಿತ್ತು.