ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಕಲ್ಲು ತೂರಾಟ

By ಅನಿಲ್ ಆಚಾರ್
|
Google Oneindia Kannada News

ಕೋಲ್ಕತ್ತಾ (ಪಶ್ಚಿಮ ಬಂಗಾಲ), ಜೂನ್ 12: ಬಿಜೆಪಿ ಕಾರ್ಯಕರ್ತರು ಪೊಲೀಸರ ಮಧ್ಯೆ ಬುಧವಾರ ಹೊಡೆದಾಟ ನಡೆದಿದೆ. ಬಿಜೆಪಿಯವರ ಭಾರೀ ಮೆರವಣಿಗೆ ವೇಳೆ ಈ ಘಟನೆ ಸಂಭವಿಸಿದೆ. ಲೋಕಸಭಾ ಚುನಾವಣೆ ನಂತರ ನಡೆದ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲಿನ ಹಿಂಸಾಚಾರ ಹಾಗೂ ದಾಳಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿತ್ತು.

'ಎದುರಲ್ಲೇ ಪತಿಯನ್ನು ಕೊಂದರು', ಬಂಗಾಳ ಗಲಭೆಯ ಭೀಕರತೆ ತೆರೆದಿಟ್ಟ ಮಹಿಳೆ 'ಎದುರಲ್ಲೇ ಪತಿಯನ್ನು ಕೊಂದರು', ಬಂಗಾಳ ಗಲಭೆಯ ಭೀಕರತೆ ತೆರೆದಿಟ್ಟ ಮಹಿಳೆ

ಬಿಜೆಪಿ ಕಾರ್ಯಕರ್ತರು ಬೌಬಜಾರ್ ದಾಟುವ ವೇಳೆ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಬಳಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಸಹ ಘೋಷಣೆಗಳನ್ನು ಕೂಗಿದ್ದಾರೆ. ಅಧಿಕಾರಿಗಳ ಮೇಲೆ ಕಲ್ಲು ಹಾಗೂ ಬಾಟಲಿಗಳನ್ನು ತೂರಿದ್ದಾರೆ. ಪಕ್ಷದ ಕೆಲವು ಕಾರ್ಯಕರ್ತರು ಸ್ಥಳದಲ್ಲಿ ಕುಳಿತು ಧರಣಿ ನಡೆಸಿದ್ದಾರೆ.

Clash between BJP workers and Police officers in West Bengal

ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗಿಂತ ಎರಡು ಸ್ಥಾನವಷ್ಟೇ ಕಡಿಮೆ ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗೆ ಬಂದಿದೆ. ಆ ನಂತರ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ವಿವಿಧೆಡೆ ಹಿಂಸಾಚಾರದ ಘಟನೆಗಳು ವರದಿ ಆಗಿದ್ದು, ಕೇಂದ್ರವು ಈ ಬಗ್ಗೆ ವರದಿ ಕೇಳಿದೆ.

English summary
Clash between BJP workers and Police officers in West Bengal while organising protest against recent violence and attack incidents against BJP supporters and workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X