ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷರ ವಿಷಾದದ ಟ್ವೀಟ್
ಕೋಲ್ಕತಾ, ಜೂನ್ 13: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರೋಡ್ ಶೋ ವೇಳೆ ಆರಂಭವಾದ, ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮಾರಾಮಾರಿಯಿಂದ ತೀವ್ರ ನೊಂದಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ವಿಷಾದದ ಟ್ವೀಟ್ ಒಂದನ್ನು ಮಾಡಿದ್ದಾರೆ. ಅದನ್ನು ತಮ್ಮ ಟ್ವೀಟ್ ನಲ್ಲಿ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಉಲ್ಲೇಖಿಸಿದ್ದಾರೆ.
ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪೊಲೀಸರ ಮೇಲೆ ಕಲ್ಲು ತೂರಾಟ
ದಿಲೀಪ್ ಘೋಷ್ ನೋವಿನ ನುಡಿ ಹೀಗಿದೆ, " ನನ್ನ ರಾಜಕೀಯ ವೃತ್ತಿ ಜೀವನದಲ್ಲಿ ಎದುರಿಸುತ್ತಿರುವ ಅತ್ಯಂತ ಕಠಿಣ ಸಮಯವಿದು. ಪ್ರತೀ ದಿನ ಒಂದಲ್ಲಾ ಒಂದು ನನ್ನ ಕಾರ್ಯಕರ್ತರ ಅಂತ್ಯಕ್ರಿಯೆಯಲ್ಲಿ ಹೂವು ಹಿಡಿದುಕೊಂಡು ಭಾಗವಹಿಸಬೇಕಿದೆ".
ಪ್ರತೀದಿನ ಮಗನನ್ನು ಕಳೆದುಕೊಂಡ ತಾಯಂದಿರನ್ನು ನಾನು ಸಂತೈಸಬೇಕಿದೆ. ನಾನು ಏನೂಂತಾ ಅವರನ್ನು ಸಮಾಧಾನ ಪಡಿಸಲಿ" ಇದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ನೋವಿನ ಟ್ವೀಟ್.
The words of BJP WB President @DilipGhoshBJP
— B L Santhosh (@blsanthosh) June 12, 2019
'This is the toughest phase of my political career. Everyday I have to attend multiple funerals & garland my dead workers.Everyday I have to console a mother who has lost his son.What consolation can I give? ‘@BJP4India @amitmalviya
ಮಂಗಳವಾರ (ಜೂ 11) ಕೂಡಾ ಇಬ್ಬರು ಬಿಜೆಪಿ ಕಾರ್ಯಕರ್ತರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಟಿಎಂಸಿ ಕಾರ್ಯಕರ್ತರು ನಮ್ಮ ಮಕ್ಕಳನ್ನು ಕೊಂದಿದ್ದಾರೆಂದು ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಬಂಗಾಳಕ್ಕೆ ಅವಮಾನವಾಗುವುದನ್ನು ಸಹಿಸೋಲ್ಲ, ರಾಜ್ಯಪಾಲರಿಗೂ ದೀದಿ ಎಚ್ಚರಿಕೆ!
ಇವರಿಬ್ಬರೂ, ಬಿಜೆಪಿಯ ಬೂತ್ ಮಟ್ಟದ ಕಾರ್ಯಾಕರ್ತರಾಗಿದ್ದು, ಲೋಕಸಭಾ ಚುನಾವಣೆಯ ವೇಳೆ 'ಜೈಶ್ರೀರಾಂ' ರ್ಯಾಲಿಗಳ ಮುಂದಾಳತ್ವವನ್ನು ವಹಿಸಿಕೊಂಡಿದ್ದವರು ಎಂದು ತಿಳಿದುಬಂದಿದೆ.