ಪ್ರಶ್ಚಿಮ ಬಂಗಾಳಕ್ಕೆ ಮೂವರು ಕೇಂದ್ರ ಸಚಿವರ ನಿಯೋಜನೆ: ಉದ್ದೇಶ ಏನು ಎಂಬ ಪ್ರಶ್ನೆ
ಕೋಲ್ಕತ್ತಾ, ಆಗಸ್ಟ್ 12: ಈ ವರ್ಷದ ಡಿಸೆಂಬರ್ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರವನ್ನು ಕೊನೆಗಾಣಿಸುತ್ತೇವೆ ಎಂದು ಪದೇ ಪದೇ ಹೇಳುತ್ತಿರುವ ಬಿಜೆಪಿ ತನ್ನ ಮೂವರು ಪ್ರಮುಖ ಕೇಂದ್ರ ಸಚಿವರನ್ನು ಈಗಾಗಲೇ ಪಶ್ಚಿಮ ಬಂಗಾಳದ ಮೇಲೆ ಕಣ್ಣಿಡಲು ನಿಯೋಜಿಸಿದೆ.
ಪಶ್ಚಿಮ ಬಂಗಾಳದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸದಂತೆ ಹಾಗೂ ಮುಂದಿನ ಚುನಾವಣೆಯಲ್ಲಿ ಟಿಎಂಸಿ ಆಡಳಿತವನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಹೀಗಾಗಿ ರಾಜ್ಯದಲ್ಲಿ ತನ್ನ ಹಿಡಿತ ಸಾಧಿಸಲು ಬಿಜೆಪಿ ಮೂವರು ಕೇಂದ್ರ ಸಚಿವರನ್ನು ನಿಯೋಜಿಸಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪಕ್ಷದ ಹೈಕಮಾಂಡ್ನಿಂದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಸ್ಮೃತಿ ಇರಾನಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರಾಜ್ಯದಲ್ಲಿ ನಿಯೋಜಿಸಿದೆ. ಅಲ್ಲಿ ಬಿಜೆಪಿ 2019 ರಲ್ಲಿ 42 ಸಂಸದರ ಪೈಕಿ 18 ಸ್ಥಾನಗಳನ್ನು ಗೆದ್ದಿದೆ.
ಮೂವರು ಕೇಂದ್ರ ಸಚಿವರ ನೇಮಕ
ರಾಜ್ಯದಲ್ಲಿ ಬಿಜೆಪಿ ಹಿಡಿತವನ್ನು ಕಳೆದುಕೊಂಡಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಮಮತಾ ಬ್ಯಾನರ್ಜಿಯವರ ಪಕ್ಷವು ಪ್ರಚಂಡ ವಿಜಯವನ್ನು ದಾಖಲಿಸಿದೆ. ಇದರಿಂದಾಗಿ ಈಗಾಗಲೇ ಪಕ್ಷ ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಸಚಿವರು ಪ್ರಾರಂಭಿಸಿದ್ದಾರೆ.
42 ಲೋಕಸಭಾ ಸ್ಥಾನಗಳ ಮೇಲ್ವಿಚಾರಣೆ
ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧಂಖರ್ ಅವರು ಉಪಾಧ್ಯಕ್ಷರಾಗಲು ರಾಜ್ಯದಿಂದ ಹೊರಬಂದ ನಂತರ, ಪಕ್ಷವು ಈಗ ಟಿಎಂಸಿ ಸರ್ಕಾರದ ಮೇಲೆ ವಿವಿಧ ಮಾರ್ಗಗಳ ಮೂಲಕ ಒತ್ತಡವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಪಕ್ಷದ ವಿರೋಧ ಪಕ್ಷದ ನಾಯಕ ಸುವೇಂಧ ಅಧಿಕಾರಿ ಅವರೊಂದಿಗೆ ಉತ್ತಮ ಕೆಲಸದ ಸಂಬಂಧವನ್ನು ಹೊಂದಿರುವ ಪ್ರಧಾನ್ ಅವರಿಗೆ ರಾಜ್ಯದ ಎಲ್ಲಾ 42 ಲೋಕಸಭಾ ಸ್ಥಾನಗಳ ಮೇಲ್ವಿಚಾರಣೆಯ ಉಸ್ತುವಾರಿ ನೀಡಲಾಗಿದೆ.
ದೀದಿ ಮಹಿಳಾ ಓಟ್ ಬ್ಯಾಂಕ್ ಮೇಲೆ ಇರಾನಿ ಕಣ್ಣು
ಮಹಿಳಾ ಮತದಾರರು ಪ್ರಬಲ ಅಂಶವಾಗಿರುವ ಮತ್ತು 2021 ರ ಅಸೆಂಬ್ಲಿ ಚುನಾವಣೆಯಲ್ಲಿ ಬ್ಯಾನರ್ಜಿಗೆ ದೊಡ್ಡ ರೀತಿಯಲ್ಲಿ ಮತ ಚಲಾಯಿಸಿದ ಸ್ಥಾನಗಳಲ್ಲಿ ಇರಾನಿ ಅವರನ್ನು ನಿಯೋಜಿಸುವ ಸಾಧ್ಯತೆಯಿದೆ. 2024 ರಲ್ಲಿ ಲೋಕಸಭೆ ಚುನಾವಣೆಯೊಂದಿಗೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.
'ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರದಲ್ಲಿರುವುದಿಲ್ಲ'
"ಕೆಲವು ತಿಂಗಳು ಕಾಯಿರಿ, ಈ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಅಧಿಕಾರವನ್ನು ಪಡೆಯುತ್ತದೆ. ನನ್ನ ಮಾತುಗಳನ್ನು ನೆನಪಿಡಿ ಈ ವರ್ಷದ ಡಿಸೆಂಬರ್ ವೇಳೆಗೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರದಲ್ಲಿರುವುದಿಲ್ಲ. 2024 ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮತ್ತು ಸಂಸತ್ತಿನ ಚುನಾವಣೆಗಳು ಏಕಕಾಲದಲ್ಲಿ ನಡೆಯಲಿದೆ" ಎಂದು ಬಿಜೆಪಿ ನಾಯಕ ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪ್ರತಿಪಕ್ಷಗಳ ಆಡಳಿತವಿರುವ ಜಾರ್ಖಂಡ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿ ಮಹಾರಾಷ್ಟ್ರದಂತಹ ಪರಿಸ್ಥಿತಿ ಇರುತ್ತದೆ ಎಂದು ಬಿಜೆಪಿಯ ಸುವೇಂಧು ಅಧಿಕಾರಿ ಪದೇ ಪದೇ ಹೇಳುತ್ತಿದ್ದಾರೆ.