ಕಾಲುವೆಯಲ್ಲಿ ಬಿಜೆಪಿ ಕಾರ್ಯಕರ್ತನ ಶವ, ಆಡಳಿತ ಪಕ್ಷದ ಮೇಲೆ ಗುಮಾನಿ?
ಕೋಲ್ಕತ್ತಾ, ಜುಲೈ 28: ಹೂಗ್ಲಿ ಜಿಲ್ಲೆಯ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಕಾರ್ಯಕರ್ತನೊಬ್ಬನ ಶವ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕೈವಾಡ ಇರಬಹುದು ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಬೆಂಗಾಳ ಘಟಕದ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮೃತ ಕಾರ್ಯಕರ್ತನ ವಿವರ ಬಹಿರಂಗವಾಗಿದೆ. ಮೃತ ವ್ಯಕ್ತಿಯನ್ನು ಕಾಶಿನಾಥ್ ಘೋಶ್ ಎಂದು ಗುರುತಿಸಲಾಗಿದೆ. ಕಾಶಿನಾಥ್ ನನ್ನು ಹುತಾತ್ಮ ಎಂದು ಕರೆದಿರುವ ಬೆಂಗಾಳದ ಬಿಜೆಪಿ ಘಟಕ, ಬಿಜೆಪಿ ಏಳಿಗೆಯನ್ನು ಟಿಎಂಸಿ ಸಹಿಸಲು ಆಗುತ್ತಿಲ್ಲ ಎಂದು ಆರೋಪಿಸಿದೆ.
ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ನಿರಂತರವಾಗಿ ದ್ವೇಷಪೂರಿತ ವಾಕ್ಸಮರ ನಡೆಯುತ್ತಿದ್ದು, ಹಲವು ಬಾರಿ ಗಲಭೆ, ಸಾವು ನೋವಿಗೆ ಕಾರಣವಾಗಿದೆ.
Kashinath Ghosh, BJP Booth President of Arambagh was brutally murdered by TMC goons.BJP's vote share was 44% in LS election & TMC goons created a hit list of BJP workers in Arambagh. TMC can’t stop BJP’s growth in West Bengal. Writing on the wall for 2021 is clear! Martyr no 74. pic.twitter.com/7PFIo9LAst
— BJP Bengal (@BJP4Bengal) July 28, 2019
"ಕಾಶಿನಾಥ್ ಘೋಶ್- ಆರಂಭಾಗ್ ಬಿಜೆಪಿ ಬೂತ್ ಅಧ್ಯಕ್ಷರಾಗಿದ್ದರು. ಅವರನ್ನು ಟಿಎಂಸಿ ಗೂಂಡಾಗಳು ಭೀಕರವಾಗಿ ಕೊಂದು ಹಾಕಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇಕಡಾವಾರು ಮತ ಗಳಿಕೆ 44%ರಷ್ಟಿತ್ತು. ಆರಂಭಾಗದಲ್ಲಿನ ಬಿಜೆಪಿ ನಾಯಕರ ಹಿಟ್ ಲಿಸ್ಟ್ ತಯಾರಿಸಿರುವ ಟಿಎಂಸಿ, ಬಿಜೆಪಿ ಏಳಿಗೆ ಸಹಿಸದೆ ಇಂಥ ಮಾರ್ಗಕ್ಕೆ ಇಳಿದಿದೆ. 2021ಕ್ಕೆ ಬರುವ ಫಲಿತಾಂಶವನ್ನು ತಡೆಯಲು ಸಾಧ್ಯವಿಲ್ಲ, ಹುತಾತ್ಮ ಸಂಖ್ಯೆ 74" ಎಂದು ಬಿಜೆಪಿ ಟ್ವೀಟ್ ಮಾಡಿದೆ.