ನಟಿ ಕಮ್ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಆಸ್ಪತ್ರೆಗೆ ದಾಖಲು
ಕೋಲ್ಕತಾ, ನವೆಂಬರ್ 18: ಬೆಂಗಾಲಿ ನಟಿ, ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರದಂದು ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು ಎಂದು ಕುಟುಂಬಸ್ಥರು ಹೇಳಿದರು.
ತೃಣಮೂಲ
ಕಾಂಗ್ರೆಸ್
ನಾಯಕಿ
ಬಸಿರ್
ಹಾತ್
ಕ್ಷೇತದ
ಸಂಸದೆ
ಜಹಾನ್
ಅವರನ್ನು
ಭಾನುವಾರ
ರಾತ್ರಿ
9.30ಕ್ಕೆ
ಆಸ್ಪತ್ರೆಗೆ
ದಾಖಲಿಸಲಾಯಿತು.
ಆಕೆಗೆ
ಕೆಲಕಾಲದಿಂದ
ಆಸ್ತಮಾದಿಂದ
ಬಳಲುತ್ತಿದ್ದರು.
ಸದ್ಯ
ಆಕೆಗೆ
ಐಸಿಯುನಲ್ಲಿ
ಚಿಕಿತ್ಸೆ
ಕೊಡಿಸಲಾಗುತ್ತಿದ್ದು,
ಆತಂಕ
ಪಡಬೇಕಾಗಿಲ್ಲ
ಎಂದು
ಕುಟುಂಬದವರು
ಹೇಳಿದ್ದಾರೆ.
2019ರಲ್ಲಿ ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಟ್ಟ ನುಸ್ರತ್ ಅವರು ಲೋಕಸಭೆ ಚುನಾವಣೆಯಲ್ಲಿ ಬಸಿರ್ ಹಾತ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯ ದಾಖಲಿಸಿದರು. ತಮ್ಮ ಬಹುಕಾಲದ ಗೆಳೆಯ ನಿಖಿಲ್ ಜೈನ್ ರನ್ನು ಟರ್ಕಿಯಲ್ಲಿ ವಿವಾಹವಾದರು.
ದುರ್ಗಾ ಮಾತೆ ಪೂಜಿಸಿದ ಸಂಸದೆ ನುಸ್ರತ್ ಜಹಾನ್ ವಿರುದ್ಧ ಮೌಲ್ವಿ ಕಿಡಿ
ಲೋಕಸಭೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಹಣೆಗೆ ಸಿಂಧೂರ ಇಟ್ಟುಕೊಂಡು, ಮಂಗಳಸೂತ್ರ ಧರಿಸಿ ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿದರು. ಇದರಿಂದ ಮುಸ್ಲಿಂ ಮೌಲ್ವಿಗಳ ಕೆಂಗಣ್ಣಿಗೆ ಗುರಿಯಾದರು. ಸ್ನೇಹಿತೆಯರಾದ ನುಸ್ರತ್ ಪಶ್ಚಿಮ ಬಂಗಾಳದ ಬಸಿರ್ಹತ್ ಕ್ಷೇತ್ರದಿಂದ ಗೆದ್ದಿದ್ದರೆ, ಮಿಮಿ ಜಾದವಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸಂಸತ್ಗೆ ಮೊದಲ ದಿನ ಪ್ರವೇಶಿಸಿದ ಸಂದರ್ಭದಲ್ಲಿ ಇಬ್ಬರೂ ಆಧುನಿಕ ಉಡುಗೆ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು. ಮೊದಲ ಬಾರಿಗೆ ಸಂಸದೆಯರಾಗಿ ಆಯ್ಕೆಯಾದ ಬಳಿಕ ಸಂಸತ್ ಮುಂದೆ ಚಿತ್ರಗಳನ್ನು ತೆಗೆಸಿಕೊಂಡಿದ್ದ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪ್ರಜಾಪ್ರಭುತ್ವದ ದೇಗುಲ ಎಂದೇ ಪರಿಗಣಿಸಿರುವ ಸಂಸತ್ ಒಳಗೆ ಪ್ರವೇಶಿಸುವಾಗ ಸಭ್ಯ ಹಾಗೂ ಸೂಕ್ತ ಉಡುಪುಗಳನ್ನು ಧರಿಸಬೇಕು ಎಂದು ಅಸಮಾಧಾನ ವ್ಯಕ್ತವಾಗಿತ್ತು.