ಕೋಲಾರ : ಮದುವೆಯಲ್ಲಿ ಮತದಾನ ಜಾಗೃತಿ ಮೂಡಿಸಿದ ವಧು, ವರ
ಕೋಲಾರ, ಮಾರ್ಚ್ 26 : ಮದುವೆ ಮಂಟಪದಲ್ಲಿ ನೂತನ ವಧು-ವರರು ಮತದಾನದ ಅರಿವು ಮೂಡಿಸಿದರು. ಕೋಲಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮುಳಬಾಗಿಲು ನಗರಸಭೆ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾರ್ವಜನಿಕರಿಗೆ ಕಡ್ಡಾಯ ಮತದಾನದ ಕುರಿತು ಮದುವೆ ಮಂಟಪದಲ್ಲಿ ಅರಿವು ಮೂಡಿಸಲಾಯಿತು. 600ಕ್ಕೂ ಅಧಿಕ ಜನರು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕೋಲಾರ : ಬಿಜೆಪಿಗೆ ಬಂಡಾಯದ ಬಿಸಿ, ಡಿ.ಎಸ್.ವೀರಯ್ಯ ನಾಮಪತ್ರ!
ನಗರಸಭೆಯ ಪೌರಯುಕ್ತರಾದ ಜಿ ಶ್ರೀನಿವಾಸ ಮೂರ್ತಿ, ನಗರಸಭೆಯ ಕಂದಾಯ ಅಧಿಕಾರಿ ವಠಾರ, ಕಂದಾಯ ನಿರೀಕ್ಷಕರಾದ ಶ್ರೀನಿವಾಸ್ ಹಾಗೂ ಸಿಬ್ಬಂದಿ ವರ್ಗದವರು ಈ ಅಭಿಯಾನದಲ್ಲಿ ಪಾಲ್ಗೊಂಡು ಜನರಿಗೆ ಅರಿವು ಮೂಡಿಸಿದರು.
ಕಲಬುರಗಿ : ಬಾನಂಗಳದಲ್ಲಿ ಮತದಾನ ಜಾಗೃತಿ ಅಭಿಯಾನ
ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಲು ಮಾ.26 ಕೊನೆಯ ದಿನವಾಗಿತ್ತು. ಇಂದು ಒಟ್ಟು 12 ನಾಮಪತ್ರಗಳು ಸಲ್ಲಿಕೆಯಾಗಿವೆ.
ಕೋಲಾರ ಕ್ಷೇತ್ರದಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ. ಬಿಜೆಪಿಯಿಂದ ಎಸ್.ಮುನಿಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಡಿ.ಎಸ್.ವೀರಯ್ಯ, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾಗಿ ಕೆ.ಎಚ್.ಮುನಿಯಪ್ಪ ಅವರು ಕಣದಲ್ಲಿದ್ದಾರೆ. ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.