ಚಿತ್ತೂರಿನಲ್ಲಿ ಸಿಡಿಲು ಬಡಿದು ಒಂದೇ ಕುಟುಂಬದ ಮೂವರ ಸಾವು
ಕೋಲಾರ, ಮೇ 31: ಸಿಡಿಲು ಬಡಿದು ಒಂದೇ ಕುಟುಂಬದ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೋಲಾರದ ಗಡಿ ಸಮೀಪದ ಚಿತ್ತೂರಿನಲ್ಲಿ ನಡೆದಿದೆ.
ಕೋಲಾರದ ಗಡಿ ಆಂಧ್ರ ಪ್ರದೇಶದ ಚಿತ್ತೂರಿನ ಪೆದ್ದಪಂಜಾಣಿ ಮಂಡಲಂನ ತಿಪ್ಪಿರೆಡ್ಡಿಪಲ್ಲಿಯಲ್ಲಿ ನಿನ್ನೆ, ಮೇ 30ರ ರಾತ್ರಿ ಈ ಘಟನೆ ನಡೆದಿದ್ದು, ಸಿಡಿಲು ಬಡಿದು ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಬಾಗಲಕೋಟೆ; ಮಕ್ಕಳನ್ನು ಕಾಪಾಡಿ ಸಿಡಿಲಿಗೆ ತಾನು ಬಲಿಯಾದ ತಾಯಿ
ತಂದೆ ಮಕ್ಕಳು ತೋಟಕ್ಕೆ ಹೋಗಿದ್ದು, ಹಸುವಿನ ಹಾಲು ಕರೆಯುತ್ತಿದ್ದರು. ಈ ಸಂದರ್ಭ ಮಳೆ ಆರಂಭವಾದಂತಾಗಿ ಜೋರಾಗಿ ಸಿಡಿಲು ಬಡಿದಿದೆ. ಸಿಡಿಲು ಬಡಿದು ರೈತ ರಾಮಕೃಷ್ಣ (52), ಮಕ್ಕಳಾದ ರಮಾದೇವಿ (24), ಮೀನಾ (22) ಸಾವನ್ನಪ್ಪಿದ್ದಾರೆ. ಹಸುವೂ ಮೃತಪಟ್ಟಿದೆ. ಸಿಡಿಲಾಘಾತದಿಂದ ಸಂಭವಿಸಿದ ಈ ಸಾವಿನಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
Comments
English summary
Three members of same family died by lightning strike in chittur of kolar district border yesterday night,
Story first published: Sunday, May 31, 2020, 9:44 [IST]