ವಿಡಿಯೋ: ಕೋಲಾರದಲ್ಲಿ ಮಾನಸಿಕ ಅಸ್ವಸ್ಥನಿಗೆ ಅನ್ನ ಕೊಟ್ಟ ಪೊಲೀಸ್
ಕೋಲಾರ, ಮಾರ್ಚ್ 24: ಮಾನಸಿಕ ಅಸ್ವಸ್ಥನಿಗೆ ಅನ್ನ ಕೊಡುವ ಮೂಲಕ ಪೊಲೀಸರು ಮಾನವೀಯತೆ ಮೆರೆದ ಘಟನೆ ಕೋಲಾರ ನಗರದ ಟಮಕ ಬಳಿ ನಡೆದಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೋಲಾರ ನಗರದಲ್ಲಿ ಕರ್ಫ್ಯೂ ಇದ್ದಿದ್ದರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅದರ ನಡುವೆಯೂ ಮಾನಸಿಕ ಅಸ್ವಸ್ಥನಿಗೆ ಆಹಾರ ನೀಡಿ ಪೊಲೀಸರು ಮಾನವೀಯತೆ ಮೆರೆದಿದ್ದು, ವಿಡಿಯೋ ಎಲ್ಲ ಕಡೆ ವೈರಲ್ ಆಗಿದೆ.
ಕೋಲಾರದ ಟಮಕ ಬಳಿ ತಿನ್ನಲು ಅನ್ನ, ನೀರಿಲ್ಲದೆ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಬಂದೋಬಸ್ತ್ ನಲ್ಲಿದ್ದ ಎಎಸ್ಐ ನಾಗರಾಜ್ ಅವರು ಅನ್ನ ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ#Kolar #Lockdown #Police pic.twitter.com/WaeQZIGUwK
— Oneindia Kannada (@OneindiaKannada) March 24, 2020
ತಿನ್ನಲು ಅನ್ನ ನೀರಿಲ್ಲದೆ ಪರದಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಎಎಸ್ಐ ನಾಗರಾಜ್, ಅನ್ನ ನೀರು ನೀಡಿದರು. ಮುಂಜಾನೆಯಿಂದ ಲಾಕ್ ಡೌನ್ ನಿಯಮ ಮೀರಿ ರಸ್ತೆಯಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು.
ಲಾಠಿ ಹಿಡಿದ ಪೊಲೀಸರನ್ನು ನೋಡಿದವರಿಗೆ ಈ ದೃಶ್ಯ ಪೊಲೀಸರ ಮತ್ತೊಂದು ಮುಖ ದರ್ಶನ ಮಾಡಿಸಿದ್ದು, ಪೊಲೀಸರಲ್ಲೂ ಮಾನವೀಯ ಹೃದಯ ಪ್ರದರ್ಶನವಾಗಿದೆ.