Video: ದೇವರೇ ಮದುವೆ ನಿಲ್ಲಿಸಪ್ಪಾ ಎಂದು ಚಿಕ್ಕ-ತಿರುಪತಿಗೆ ಪತ್ರ!
ಕೋಲಾರ, ಜುಲೈ 28: ದೇವ್ರೇ ನಮಗೆ ನಮ್ಮ ಕುಟುಂಬಕ್ಕೆ ಒಳ್ಳೆಯದನ್ನು ಮಾಡಪ್ಪ. ಎಲ್ಲ ಕಷ್ಟಗಳನ್ನು ನಿವಾರಿಸು. ಒಳ್ಳೆಯ ದುಡಿಮೆ ಮೂಲಕ ಸಾಕಷ್ಟು ಹಣ ಸಂಪಾದಿಸುವಂತೆ ಆಶೀರ್ವದಿಸು. ಹೀಗೆ ದೇವರಿಗೆ ಭಕ್ತರು ಸಲ್ಲಿಸುವ ಬೇಡಿಕೆಗಳು ಒಂದು ಎರಡಲ್ಲ. ಆದರೆ ಇಲ್ಲಿನ ಭಕ್ತರು ದೇವರಿಗೆ ಸಲ್ಲಿಸುವ ಮನವಿ ಪತ್ರಗಳು ಸ್ವಲ್ಪ ವಿಭಿನ್ನ ಹಾಗೂ ವಿಶೇಷವಾಗಿವೆ.
Recommended Video
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಮೊದಲಿನಿಂದಲೂ ಒಂದು ಪದ್ಧತಿ ರೂಢಿಯಲ್ಲಿದೆ. ದೇವಸ್ಥಾನದ ಹುಂಡಿಗೆ ಹಣ ಹಾಕುವ ಭಕ್ತರು ಅದರ ಜೊತೆಗೆ ಕೆಲವು ಬೇಡಿಕೆಯ ಪತ್ರಗಳನ್ನೂ ಹಾಕುತ್ತಾರೆ. ಹೀಗೆ ಭಕ್ತರು ಹಾಕಿರುವ ಬೇಡಿಕೆ ಪತ್ರಗಳೇ ಓದುಗರು ಹುಬ್ಬೇರಿಸುವಂತೆ ಮಾಡಿವೆ.
ಪ್ರಸಿದ್ಧ ಚಿಕ್ಕತಿರುಪತಿ ದೇವಾಲಯ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಎಷ್ಟು?
ಕೋಲಾರದ ಪ್ರಸಿದ್ಧ ಚಿಕ್ಕತಿರುಪತಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಆರಂಭಿಸಲಾಗಿದೆ. ಮುಜರಾಯಿ ಇಲಾಖೆ ನಡೆಸುತ್ತಿರುವ ಹುಂಡಿ ಎಣಿಕೆ ಕಾರ್ಯದ ಸಂದರ್ಭದಲ್ಲಿ ಕಾಣಿಕೆ ಹಣದ ಜೊತೆಗೆ ಕಲವು ಪತ್ರಗಳು ಸಿಕ್ಕಿವೆ. ಈ ಪತ್ರಗಳಲ್ಲಿ ಉಲ್ಲೇಖವಾಗಿರುವ ಭಕ್ತರ ಬೇಡಿಕೆಗಳು ಸಾಮಾಜಿಕ ಜಾಲತಾಣಗಳಲ್ಲೂ ಸಖತ್ ಸುದ್ದಿ ಆಗುತ್ತಿವೆ. ಹಾಗಾದರೆ ಭಕ್ತರ ಬೇಡಿಕೆ ಪತ್ರದಲ್ಲಿ ಏನು ಬರೆದಿದ್ದರು ಎನ್ನುವ ಕುತೂಹಲಕ್ಕೆ ಉತ್ತರಕ್ಕಾಗಿ ಮುಂದೆ ಓದಿ.
ಭಕ್ತರು
ಬರೆದ
ಪತ್ರದಲ್ಲಿ
ಏನಿತ್ತು?:
"ಈಗಾಗಲೇ ನಿಶ್ಚಯವಾಗಿರುವ ಮದುವೆಯು ರದ್ದಾಗಲಿ. ವಧುವಿನ ಹೆಸರು ಬರೆದು ಇಂಥವರಿಗೆ ಶಿಕ್ಷೆ ಕೊಡು ಸ್ವಾಮಿ. ನನಗಾಗಲಿ ನನ್ನ ಕುಟುಂಬಸ್ಥರಿಗಾಗಲಿ ಅವರಿಂದ ತೊಂದರೆ ಆಗದಿರಲಿ. ನಿಶ್ಚಿತಾರ್ಥ ಮುರಿದು ಬೀಳಲಿ.
* ನ್ಯಾಯಾಲಯದಲ್ಲಿ ಹೂಡಿರುವ ಕೇಸ್ ಸಂಧಾನಕ್ಕೆ ಬರಲಿ.
* ಜೀವನದಲ್ಲಿ ನಾವು ಯಾವತ್ತೂ ಅವರ ಮುಖವನ್ನು ನೋಡಬಾರದು.
* ನಿಶ್ಚಿತಾರ್ಥದ ಖರ್ಚು ಬಂದು ತೆಗೆದುಕೊಂಡು ಹೋಗಲಿ.