ನಿಧಿಯಾಸೆಗೆ ಕೋಲಾರದಲ್ಲಿ ಶಿವಲಿಂಗ ಅಗೆದ ದುಷ್ಕರ್ಮಿಗಳು
ಕೋಲಾರ, ಜನವರಿ 22: ನಿಧಿ ಆಸೆಗಾಗಿ ಜಮೀನಿನಲ್ಲಿದ್ದ ಶಿವಲಿಂಗವನ್ನು ಅಗೆದು ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
ನಿಧಿ ಆಸೆಗೆ ಮನೆಯನ್ನೆಲ್ಲ ಅಗೆದ; ಕೊನೆಗಾದ ಗತಿ ಯಾರಿಗೂ ಬೇಡ...
ಕೋಲಾರದ ಶ್ರೀನಿವಾಸ ತಾಲೂಕಿನಲ್ಲಿ ಪಂಚಲಿಂಗ ಕ್ಷೇತ್ರ ಎಂದೇ ಪ್ರಖ್ಯಾತಿ ಆಗಿರುವ ನಂಬಿಹಳ್ಳಿ ಗ್ರಾಮದ ಬಯನ್ನರವರ ಚೌಡಪ್ಪರವರಿಗೆ ಸೇರಿದ ಜಮೀನಿನಲ್ಲಿ ಪಂಚಲಿಂಗಗಳಲ್ಲಿ ಒಂದಾದ ಶಿವಲಿಂಗವಿದೆ. ಆ ಶಿವಲಿಂಗದ ಅಡಿಯಲ್ಲಿ ನಿಧಿಯಿದೆ ಎಂದು ನಿಧಿಯ ಆಸೆಯಿಂದ ವಾಮಾಚಾರ ಮಾಡಿಸಿ ಅಗೆಯಲು ಪ್ರಯತ್ನಿಸಿದ್ದಾರೆ.
ನಂತರ ಅಗೆಯಲು ತಂದಿದ್ದ ಕಬ್ಬಿಣದ ವಸ್ತುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. "ನಮ್ಮ ಪೂರ್ವಜರ ಕಾಲದಿಂದಲೂ ಈ ಲಿಂಗಕ್ಕೆ ಪೂಜೆ ಮಾಡಿಕೊಂಡು ಬಂದಿದ್ದೇವೆ. ನಮ್ಮ ಊರಿನಲ್ಲಿ 5 ಲಿಂಗಗಳಿವೆ. ಅದರಲ್ಲಿ ಒಂದು ಇಲ್ಲಿದೆ. ಮೊದಲು ಇದೇ ರೀತಿಯಾಗಿ ನಿಧಿ ಆಸೆಗಾಗಿ ಲಿಂಗವನ್ನು ಕೆಡವಿದ್ದರು. ಹಾಗೆ ನೆನ್ನೆ ರಾತ್ರಿ ಕೂಡ ನಿಧಿಯ ಆಸೆಗಾಗಿ ಬಂದಿದ್ದಾರೆ. ನಂತರ ಏನಾಯಿತೋ ಗೊತ್ತಿಲ್ಲ. ತಾವು ತಂದಿದ್ದ ವಸ್ತುಗಳನ್ನ ಬಿಟ್ಟು ಪರಾರಿಯಾಗಿದ್ದಾರೆ" ಎಂದು ಹೇಳಿದ್ದಾರೆ ಚೌಡಪ್ಪನವರು.