ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಕುಡಿದ ನಶೆಯಲ್ಲಿ ಹಾವು ಕಚ್ಚಿ ಕೊಂದವ ಅರೆಸ್ಟ್

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 06: ಕಂಠಪೂರ್ತಿ ಕುಡಿದು, ಆ ಕುಡಿದ ಮತ್ತಿನಲ್ಲಿ, ದಾರಿಯಲ್ಲಿ ಬೈಕಿಗೆ ಅಡ್ಡಲಾಗಿ ಸಿಕ್ಕಿದ ಹಾವನ್ನೇ ಕಚ್ಚಿ ಕೊಂದಿದ್ದ ವ್ಯಕ್ತಿಯನ್ನು ಮುಳಬಾಗಿಲು ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಮೇ 4ರಂದು ಕೋಲಾರದ ಮುಳಬಾಗಿಲಿನಲ್ಲಿ, ಕುಡಿದ ನಶೆಯಲ್ಲಿ ಹಾವನ್ನೇ ಈತ ಕಚ್ಚಿ ಸಾಯಿಸಿದ್ದ. ಈತ ಹಾವನ್ನು ಕಚ್ಚಿ ಕೊಂದಿದ್ದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹೀಗಾಗಿ ಆರೋಪಿಯ ಸೆರೆಗಾಗಿ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು. ಇದೀಗ ಆರೋಪಿ ಎಂ.ವಿ. ಸತೀಶ್ ಕುಮಾರ್ ಅರಣ್ಯಾಧಿಕಾರಿಗಳ ಸೆರೆಯಲ್ಲಿದ್ದಾನೆ.

ಕೋಲಾರ; ಕುಡಿದ ಮತ್ತಲ್ಲಿ ಹಾವನ್ನೇ ಕಚ್ಚಿ ಸಾಯಿಸಿದ!ಕೋಲಾರ; ಕುಡಿದ ಮತ್ತಲ್ಲಿ ಹಾವನ್ನೇ ಕಚ್ಚಿ ಸಾಯಿಸಿದ!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರು ಗ್ರಾಮದ ಎಂ ವಿ ಸತೀಶ್ ಕುಮಾರ್, ಮೇ.4ರಂದು ಬಾರ್ ತೆರೆದ ಖುಷಿಯಲ್ಲಿ ಕಂಠ ಪೂರ್ತಿ ಕುಡಿದು ಬೈಕ್ ಏರಿ ಬರುವಾಗ ದಾರಿ ಮಧ್ಯೆ ಹಾವು ಹಾದುಹೋಗುತ್ತಿತ್ತು. ಆ ಹಾವನ್ನು ಹಿಡಿದು, ಕೊರಳಿಗೆ ಸುತ್ತಿಕೊಂಡು ಈತ ಕಚ್ಚಿ ಹಾಕಿದ್ದ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಆ ನಂತರ ವಿಡಿಯೋ ವೈರಲ್ ಆಗಿತ್ತು.

Man Who Bitten Snake In Mulabagilu Arrested Today

ಈ ಸಂಬಂಧ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದ ಮುಳಬಾಗಿಲು ಅರಣ್ಯಾಧಿಕಾರಿಗಳು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

English summary
Forest department arrested man who bitten snake in mulabagilu of kolar district,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X