ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಜೆಡಿಎಸ್ ಪ್ರತಿಭಟನೆ
ಗಂಗಾ ಕಲ್ಯಾಣ ಯೋಜನೆಯ ಸವಲತ್ತುಗಳನ್ನು ಫಲಾನುಭವಿಗಳಿಗೆ ತಮ್ಮ ನಿವಾಸದಲ್ಲಿ ವಿತರಿಸುತ್ತಿದ್ದ ಕಾರಣಕ್ಕಾಗಿ ಪ್ರತಿಭಟನೆ
ಕೋಲಾರ, ಫೆಬ್ರವರಿ 28: ಗಂಗಾ ಕಲ್ಯಾಣ ಯೋಜನೆಯ ಸೌವಲತ್ತುಗಳನ್ನು ತಮ್ಮ ಮನೆಯಲ್ಲಿ ವಿತರಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಕೋಲಾರ ನಗರದ ಬೈರೇಗೌಡ ನಗರದಲ್ಲಿರುವ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಶಾಸಕರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಕ್ಷೇತ್ರದ ದಲಿತ ಫಲಾನುಭವಿಗಳನ್ನು ತಮ್ಮ ಮನೆ ಬಾಗಿಲ ಮುಂದೆ ನಿಲ್ಲಿಸುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ಶಾಸಕರ ಹಾಗೂ ಜೆಡಿಎಸ್ ಕಾಯ೯ಕತ೯ರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೆ, ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವೆಂದು ಮೂಲಗಳು ತಿಳಿಸಿವೆ.
Comments
English summary
Kolar JDS activists protested against MLA Varthur Prakash for issuing the provisions to the Ganga Kalyan scheme beneficiaries in his residence on February 28, 2017.
Story first published: Tuesday, February 28, 2017, 15:50 [IST]