ಸ್ಪೀಕರ್ ಮಾಡಿರೆಂದು ಕೇಳಿರಲಿಲ್ಲ, ಅದು ವರಿಷ್ಠರ ಆದೇಶ: ರಮೇಶ್ ಕುಮಾರ್
ಕೋಲಾರ, ಮೇ 30: 'ನನ್ನನ್ನು ಸಭಾಧ್ಯಕ್ಷನನ್ನಾಗಿ ಮಾಡಿರೆಂದು ನಾನು ಯಾವ ಕಾಂಗ್ರೆಸ್ ಮುಖಂಡರನ್ನೂ ಕೇಳಿರಲಿಲ್ಲ, ಅದು ಹೈಕಮಾಂಡ್ ಆದೇಶ ಹಾಗಾಗಿ ಪಾಲಿಸಿದ್ದೇನೆ ಎಂದು ಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಮಾಡುವ ಮೂಲಕ ನನ್ನ ಕೈ-ಬಾಯಿ ಕಟ್ಟಿಹಾಕ ಬಹುದು ಎಂದು ಯಾದರೂ ಅಂದು ಕೊಂಡಿದ್ದರೆ ಅದು ಸುಳ್ಳು, ಆ ರೀತಿಯ ಪ್ರಯತ್ನ ಮಾಡಿದವರನ್ನೇ ಕಟ್ಟಿ ಹಾಕುತ್ತೇನೆ ಎಂದು ಅವರು ಹೇಳಿದರು.
ಸ್ಪೀಕರ್ ಚುನಾವಣೆ:ಹಿಂದೆ ಸರಿದ ಸುರೇಶ್ ಕುಮಾರ್, ರಮೇಶ್ ಕುಮಾರ್ ಆಯ್ಕೆ
ಸಚಿವ ಸ್ಥಾನ ಬಿಟ್ಟು ಸ್ಪೀಕರ್ ಸ್ಥಾನ ಸ್ವೀಕರಿಸಿದಕ್ಕೆ ಬೇಸರವಿಲ್ಲ ಎಂದ ಅವರು, ಸ್ಪೀಕರ್ ಆದ ತಕ್ಷಣ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂಬುದು ಸುಳ್ಳು, ಇನ್ನೂ ಹೆಚ್ಚಿನ ಅಭಿವೃದ್ಧಿಯಾಗುತ್ತದೆ, ಜೂನ್ 7 ರಂದು ಕೆ.ಸಿ.ವ್ಯಾಲಿಯನ್ನು ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದೇ ಕೆ.ಸಿ.ವ್ಯಾಲಿಯನ್ನು ಈ ಹಿಂದೆ ಕುಮಾರಸ್ವಾಮಿ ಅವರು ವಿರೋಧಿಸಿದ್ದರು ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ. ಈಗ ಅವರು ವಿರೋಧಿಸುವಂತಿಲ್ಲ ಎಂದು ಹೇಳಿದರು.