ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆ.ಸಿ.ವ್ಯಾಲಿ ಎಂಬ ಭೂತ ಕೋಲಾರಕ್ಕೆ ಬಿಟ್ಟವರೆಲ್ಲ ಎಲ್ಲಿ ಹೋದರು?

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಕೋಲಾರ, ಜುಲೈ 18: ಬಯಸಿ ಬಯಸಿ ಸಮಸ್ಯೆ ತಂದುಕೊಳ್ಳುವುದು ಅಂದರೆ ಇದೇ ಇರಬೇಕು. ಕೋಲಾರ ಜಿಲ್ಲೆ ಪಾಲಿಗೆ ಇದೇನೋ ಮಹಾನ್ ಒಳ್ಳೆ ಸುದ್ದಿ ಅಂತ ಯಾವುದೋ ಅಂದುಕೊಳ್ಳುತ್ತಿದ್ದರೋ ಅದರದೇ ಭೂತವನ್ನು ಈಗ ಅನುಭವಿಸುವಂತಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅದರದೇ ಚರ್ಚೆ. ಶಿವಪ್ರಕಾಶ್ ರೆಡ್ಡಿ ಎಂಬುವವರು ಹಂಚಿಕೊಂಡಿದ್ದ ವಿಡಿಯೋ ಸಹಿತ ಈ ವರದಿಯಲ್ಲಿ ಕೊಡಲಾಗಿದೆ.

ಈ ವರದಿಯಲ್ಲಿ ಹೇಳುತ್ತಿರುವುದು ಕೆ.ಸಿ.ವ್ಯಾಲಿ ಯೋಜನೆ ಬಗ್ಗೆ. ಬೆಂಗಳೂರಿನ ತ್ಯಾಜ್ಯ ನೀರನ್ನು ಕೋಲಾರಕ್ಕೆ ಹರಿಸಿದರೆ ಅದರಿಂದ ಅಂತರ್ಜಲ ವೃದ್ಧಿ ಸೇರಿದಂತೆ ಇತರ ಅನುಕೂಲಗಳಿವೆ ಎಂದು ದೊಡ್ಡ ಮಟ್ಟದಲ್ಲಿ ಧ್ವನಿ ಮಾಡಲಾಯಿತು. ಈ ಯೋಜನೆಯನ್ನು ವಿರೋಧಿಸಿದ್ದ ನೀರಾವರಿ ಹೋರಾಟಗಾರರ ಬಗ್ಗೆ ಕೂಡ ಲಘುವಾಗಿ ಮಾತನಾಡಲಾಯಿತು.

How KC Valley project becoming dangerous to Kolar

ಕೋಲಾರದ ಕೆರೆ ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಗೆ ಚಾಲನೆ ಕೋಲಾರದ ಕೆರೆ ತುಂಬಿಸುವ ಕೆ.ಸಿ.ವ್ಯಾಲಿ ಯೋಜನೆಗೆ ಚಾಲನೆ

ಈಗ ಏನಾಗಿದೆ ಅಂದರೆ ಕೋಲಾರದ ಲಕ್ಷ್ಮೀಸಾಗರದ ಬಳಿ ಹೋದರೆ ಈ ಯೋಜನೆಯ ಫಲಶ್ರುತಿ ಗೊತ್ತಾಗುತ್ತದೆ. ನೊರೆನೊರೆಯಾಗಿ ನೀರು ಹರಿಯುತ್ತಿದೆ. ಈ ನೊರೆಯಿಂದ ಅದ್ಯಾವುದೇ ಸಮಯದಲ್ಲಾದರೂ ಬೆಂಕಿ ಹೊತ್ತಿಕೊಳ್ಳಬಹುದು ಎಂಬ ಆತಂಕ ಎದುರಾಗಿದೆ. ಕೆ.ಸಿ.ವ್ಯಾಲಿ ಯೋಜನೆ ಬೆಂಬಲಿಸಿದ್ದವರೆಲ್ಲ ಈಗ ಎಲ್ಲಿ ಹೋದರು ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

English summary
KC valley project of Kolar now most discussing topic. Because Bengaluru sewage water flowing to Kolar in this project, now it looks like Bellandur lake. Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X