ಕೊರೊನಾ ಎಫೆಕ್ಟ್ನಿಂದ ಕೃಷಿ ಕಡೆ ಮುಖ ಮಾಡಿದ ಮಾಜಿ ಶಾಸಕ
ಕೋಲಾರ, ಜುಲೈ 4: ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೊರೊನಾ ಎಫೆಕ್ಟ್ನಿಂದ ಕೃಷಿ ಕಡೆ ಮುಖ ಮಾಡಿದ್ದಾರೆ. ರಾಜಕೀಯ ಜಂಜಾಟ, ಕೊರೊನಾ ಹಾವಳಿ ನಡುವೆ ಕೃಷಿ ಭೂಮಿಗೆ ಇಳಿದಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ತಮ್ಮ ಜಮೀನಿನಲ್ಲಿ ನೇಗಿಲು ಹಿಡಿದು ಬಿತ್ತನೆ ಮಾಡಿದ್ದಾರೆ. ಸ್ವಗ್ರಾಮದ ತಮ್ಮ ಜಮೀನಿನಲ್ಲಿ ನೆಲಗಡಲೆ ಬಿತ್ತನೆ ಮಾಡಲು ನೇಗಿಲು ಹಿಡಿದು ಉಳುಮೆ ಮಾಡಿದ್ದಾರೆ.
ರೈತರಿಂದ ಕುಂಬಳಕಾಯಿ ಖರೀದಿ ಮಾಡಿ, ಬಡವರಿಗೆ ನೀಡಿದ ಶಿಕ್ಷಕ
ಕೊರೊನಾದಿಂದಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ತಮ್ಮ ಹಳ್ಳಿಗಳಿಗೆ ವಾಪಸ್ ಆಗಿ ಕೃಷಿಯಲ್ಲಿ ತೊಡಗಿದ್ದಾರೆ. ಅದೇ ರೀತಿ ಮಾಜಿ ಶಾಸಕರು ಕೂಡ ಕೃಷ್ಣ ಮಾಡಿದ್ದಾರೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎನ್ನುವ ಹಾಗೆ ನಡೆದುಕೊಂಡಿದ್ದಾರೆ.
ಚಿತ್ರ ನಟರು, ರಾಜಕೀಯ ವ್ಯಕ್ತಿಗಳು ಈಗಾಗಲೇ ಕೃಷಿ ಮಾಡಿ ಖುಷಿ ಕಂಡಿದ್ದಾರೆ. ಇದೀಗ ಮಾಜಿ ಶಾಸಕರ ಸರದಿಯಾಗಿದೆ. ಕೊತ್ತೂರು ಮಂಜುನಾಥ್ ತಾವೇ ನೇಗಿಲು ಹಿಡಿದು ಹೊಲದಲ್ಲಿ ಬಿತ್ತುದ್ದಿದ್ದು, ಈ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.