ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯ ಬಿಟ್ಟು ಕೌನ್ಸಿಲಿಂಗ್ ತೆಗೆದುಕೊಳ್ಳಿ ಎಂದ ಅಬಕಾರಿ ಸಚಿವರು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಏಪ್ರಿಲ್ 25: ಲಾಕ್ ಡೌನ್ ಆದಾಗಿನಿಂದ ಮದ್ಯದಂಗಡಿಗಳಿಗೆ ನಿಷೇಧ ಹೇರಲಾಗಿದೆ. ಏಪ್ರಿಲ್ 14ರ ನಂತರ ಮದ್ಯದ ಮಳಿಗೆಗಳು ತೆರೆಯಬಹುದೆಂಬ ನಿರೀಕ್ಷೆ ಮದ್ಯಪ್ರಿಯರಲ್ಲಿತ್ತು. ಆದರೆ ಮೇ 3ರವರೆಗೂ ಮತ್ತೆ ಲಾಕ್ ಡೌನ್ ವಿಸ್ತರಣೆಯಾದ್ದರಿಂದ ಆ ನಿರೀಕ್ಷೆಯೂ ಸುಳ್ಳಾಯಿತು.

ಮೇ 3ರವರೆಗೂ ಮದ್ಯದಂಗಡಿಗಳನ್ನು ತೆರೆಯಲು ಸಾಧ್ಯವಿಲ್ಲ ಎಂದು ಅಬಕಾರಿ ಸಚಿವ ಎಚ್.ನಾಗೇಶ ಅವರು ಹೇಳಿದ್ದರು. ಇದೀಗ ಅವರು ಮತ್ತೊಂದು ಸಲಹೆಯನ್ನು ನೀಡಿದ್ದಾರೆ. ವೈದ್ಯರಿಂದ ಸಲಹೆ ಪಡೆದುಕೊಂಡು ಈ ಚಟವನ್ನು ಬಿಟ್ಟುಬಿಡಿ ಎಂದು ಮದ್ಯವ್ಯಸನಿಗಳಿಗೆ ಸಚಿವರು ಕಿವಿ ಮಾತು ಹೇಳಿದ್ದಾರೆ.

 ಬಾರ್ ಬಾಗಿಲು ಸೀಲ್; ಕೋಲಾರದಲ್ಲಿ ಹಿಂಬಾಗಿಲಿನಿಂದ ಮದ್ಯ ವ್ಯವಹಾರ ಬಾರ್ ಬಾಗಿಲು ಸೀಲ್; ಕೋಲಾರದಲ್ಲಿ ಹಿಂಬಾಗಿಲಿನಿಂದ ಮದ್ಯ ವ್ಯವಹಾರ

"ವೈದ್ಯರಿಂದ ಸಲಹೆ ಪಡೆದುಕೊಂಡು ಚಟವನ್ನು ಬಿಟ್ಟು ಬಿಡಿ. ಮದ್ಯವ್ಯಸನಿಗಳೇ ಬೇರೆ ಮದ್ಯಪ್ರಿಯರೇ ಬೇರೆ" ಎಂದು ವಿಶ್ಲೇಷಣೆ ನೀಡಿದ್ದಾರೆ. ಇದೇ ಸಮಯದಲ್ಲಿ ತಾಳ್ಮೆಯಿಂದ ಇದ್ದು, ಚಟ ತ್ಯಜಿಸಿ ವೈದ್ಯರ ಜೊತೆ ಕೌನ್ಸಿಲಿಂಗ್ ಮಾಡಿಸಿಕೊಳ್ಳಿ" ಎಂದು ಹೇಳಿದ್ದಾರೆ.

Excise Minister Nagesh Adviced To Leave Alcohol Addiction

"ಮೇ 3 ವರೆಗೂ ಪ್ರಧಾನಿಗಳ ಮಾತಿಗೆ ಗೌರವಿಸಿ ಸಹಕರಿಸಿ. ಜನರ ಸುರಕ್ಷತೆಗಾಗಿಯೇ ಮದ್ಯ ಬಂದ್ ತೀರ್ಮಾನ ಮಾಡಲಾಗಿದೆ. ಮದ್ಯ ಬಿಟ್ಟು ಕುಟುಂಬದ ಜೊತೆ ಚೆನ್ನಾಗಿ ಆರೋಗ್ಯವಾಗಿರಿ" ಎಂದು ಬುದ್ಧಿಮಾತು ಹೇಳಿದ್ದಾರೆ. ಇನ್ನು ಈ ಸಮಯದಲ್ಲಿ ಹೆಚ್ಚಿರುವ ಕಳ್ಳಭಟ್ಟಿ ದಂಧೆಯನ್ನೂ ಹತೋಟಿಗೆ ತರಲು ಕಠಿಣ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

English summary
Excise Minister Nagesh has adviced to leave alcohol addiction and take counselling from doctors,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X