ಕುರಾನ್ ಬಗ್ಗೆ ಅವಹೇಳನ: ಹಿಂಜಾವೇ ಮುಖಂಡನ ವಿರುದ್ಧ ಪ್ರಕರಣ ದಾಖಲು
ಕೋಲಾರ, ಜು.7: ಕುರಾನ್ ಮತ್ತು ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಹಿಂದೂ ಜಾಗರಣ ವೇದಿಕೆ ಸಂಘಟನೆಯ ರಾಜ್ಯ ಸಂಚಾಲಕ ಕೇಶವ ಮೂರ್ತಿ ಮತ್ತು ಇತರರ ವಿರುದ್ಧ ಕೋಲಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ಸಂಘಟನೆಯ ರಾಜ್ಯ ಸಂಚಾಲಕ ಕೇಶವ ಮೂರ್ತಿ ಮತ್ತು ಇತರರ ವಿರುದ್ಧ ಅಂಜುಮನ್- ಎ- ಇಸ್ಲಾಮಿಯಾ ಸಂಘಟನೆಯ ಅಧ್ಯಕ್ಷ ಜಮೀರ್ ಅಹಮದ್ ಅವರು ದೂರು ದಾಖಲಿಸಿದ್ದರು.
Breaking: ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಗೆ ಚಾಕು ಇರಿತ
ಜುಲೈ 1ರಂದು ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯನ್ನು ಪ್ರತಿಭಟನೆ ವೇಳೆ ಹಿಂಜಾವೇ ಮುಖಂಡ ಕೇಶವ ಮೂರ್ತಿ ಮಾಡಿದ ಭಾಷಣದಲ್ಲಿ ಕುರಾನ್ ಜನರನ್ನು ಕೊಲ್ಲು ಎಂದು ಹೇಳುತ್ತದೆ. ಆದ್ದರಿಂದ, ಕುರಾನ್ ಅನ್ನು ಓದುವವರು ಅದನ್ನು ಅನುಸರಿಸುತ್ತಾರೆ ಎಂದು ನೀವು ಭಾವಿಸುವುದಿಲ್ಲವೇ? ಅದೇ? ಕುರಾನ್ ಓದುವವರು ಭಯೋತ್ಪಾದಕರು ಎಂದಿದ್ದರು.
"ಕುರಾನ್ ಅನ್ನು ಯಾರು ಓದುತ್ತಾರೆ ಅವರೆಲ್ಲರೂ ಭಯೋತ್ಪಾದಕರಾಗುತ್ತಾರೆ. ಅವರು ಯಾರು ಅಂತಾ ಹೇಳಲಿಕ್ಕೆ ಸಾಧ್ಯ ಇಲ್ಲ. ನಮ್ಮ ಅನೇಕ ಜನ ಬುದ್ಧಿಜೀವಿಗಳು ಹೇಳುತ್ತಾರೆ. ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ ಎಂದು. ಹೌದು ನಾವೂ ಒಪ್ಪಿಕೊಳ್ಳುತ್ತೇವೆ, ಆದರೆ ಎಲ್ಲ ಭಯೋತ್ಪಾದಕರು ಮುಸ್ಲಿಮರೇ ಯಾಕಾಗಿರುತ್ತಾರೆ. ಯಾವತ್ತಾದರೂ ನೀವು ಪ್ರಶ್ನೇ ಹಾಕಿಕೊಂಡಿದ್ದೀರಾ? ಎಲ್ಲ ಭಯೋತ್ಪಾದಕರು ಮುಸಲ್ಮಾನರೇ. ನೀವು ನ್ಯೂಸ್ ಪೇಪರ್ಗಳನ್ನು ತೆಗೆದು ನೋಡಿ 98% ಜನ ಕೊಲೆಗಡುಕರು, ದರೋಡೆ ಮಾಡಿದವರು ಇವರನ್ನು ಮುಸ್ಲಿಮರೇ ಹಿಡಿದು ಪೊಲೀಸರಿಗೆ ನೀಡಲಿ ಎಂದು ಹೇಳಿದ್ದರು. ನಮ್ಮ ಶಾಸಕನ ಮನೆಗೆ ಬೆಂಕಿ ಹಾಕೋರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವವರು ಇವರನ್ನು ನಾವು ಏನೆಂದು ಹೇಳಬೇಕು. ಇವರನ್ನು ಭಯೋತ್ಪಾದಕರೇ ಬೇರೆ ಮುಸ್ಲಿಮರೇ ಬೇರೆ," ಎಂದು ಹೇಳಬೇಕಾ ಎಂದು ಕೇಶವಮೂರ್ತಿ ಹೇಳಿದ್ದರು.
ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಟೈಲರ್ ಕನ್ಹಯ್ಯಾ ಲಾಲ್ ಅವರನ್ನು ಕಳೆದ ತಿಂಗಳು ಇಬ್ಬರು ವ್ಯಕ್ತಿಗಳು ಹತ್ಯೆ ಮಾಡಿದ್ದರು.
ಕೇಶವ ಮೂರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 153 ಬಿ (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Recommended Video