ಬಿಜೆಪಿ ಮುಖಂಡರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ: ರಾಹುಲ್ ಗಾಂಧಿ
ಕೋಲಾರ, ಏಪ್ರಿಲ್ 07: ಚುನಾವಣಾ ಪ್ರಚಾರಕ್ಕಾಗಿ ಕೋಲಾರದ ಮುಳುಬಾಗಿಲಿನಲ್ಲಿ ಜನಾಶೀರ್ವಾದ ಯಾತ್ರೆ ಆರಂಭಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಂಗಾರ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ
*
ಪ್ರಧಾನಿ
ನರೇಂದ್ರ
ಮೋದಿ
ಸಿರಿವಂತ
ಉದ್ಯಮಿಗಳ
ಗೆಳೆಯ.
ಆದರೆ
ರೈತರಿಗೆ
ಸಹಾಯ
ಮಾಡಲು
ಅವರಲ್ಲಿ
ಹೃದಯವಿಲ್ಲ.
*
ಮೋದಿ
ಅವರ
ಅಧಿಕಾರಾವಧಿಯಲ್ಲಿ
15-20
ಉದ್ಯಮಿಗಳ
ಲಕ್ಷಾಂತರ
ಕೋಟಿ
ಸಾಲ
ಮನ್ನಾ
ಮಾಡಲಾಗಿದೆ.
ಆದರೆ,
ಯುವಜನರು
ಮತ್ತು
ರೈತರಿಗೆ
ಏನೂ
ಸಿಕ್ಕಿಲ್ಲ.
ಕೋಲಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರೋಡ್ ಶೋ
* ವಾಸ್ತವವೆಂದರೆ ಬಿಜೆಪಿ ಮುಖಂಡರು ದಲಿತರನ್ನು ಇಷ್ಟಪಡುವುದಿಲ್ಲ. ಅವರ ಸಚಿವರು ಸಂವಿಧಾನ ಬದಲಿಸುತ್ತೇವೆ ಎನ್ನುತ್ತಾರೆ. ಈ ಬಗ್ಗೆ ಪ್ರಧಾನಿ ಮೋದಿ ತುಟಿಪಿಟಕ್ ಎನ್ನುವುದಿಲ್ಲ.
* ಬಿಜೆಪಿಯವರಿಗೆ ಧೈರ್ಯವಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ನೀಡಿರುವ ಸಂವಿಧಾನವನ್ನು ಮುಟ್ಟಲಿ. ಬಳಿಕ ನೋಡಿ ಕಾಂಗ್ರೆಸ್ ಪಕ್ಷ ಏನು ಮಾಡುತ್ತದೆ ಎಂದು.
* ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕಾಂಗ್ರೆಸ್ನ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ಅನ್ನು ಯಾರೂ ಸೋಲಿಸಲಾರರು ಎಂಬ ಬಗ್ಗೆ ನಮ್ಮಲ್ಲಿ ಅತೀವ ವಿಶ್ವಾಸವಿದೆ.
* ನಾವು ಮತ್ತೆ ಭರವಸೆಗಳನ್ನು ಕೊಡುತ್ತೇವೆ. ಮತ್ತಷ್ಟು ಉತ್ತಮ ಸರ್ಕಾರವನ್ನು ನೀಡುತ್ತೇವೆ.
ಚಿತ್ರಗಳು : ಕರ್ನಾಟಕದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
*
ಕರ್ನಾಟಕದಲ್ಲಿ
ನಾವು
ಬಿಜೆಪಿ
ಮತ್ತು
ಆರ್ಎಸ್ಎಸ್
ಸಿದ್ಧಾಂತಗಳನ್ನು
ಮಣಿಸುತ್ತೇವೆ.
ಬಳಿಕ
ಅವರನ್ನು
ರಾಜಸ್ಥಾನ,
ಮಧ್ಯಪ್ರದೇಶ
ಮತ್ತು
ಛತ್ತೀಸಗಡದಲ್ಲಿಯೂ
ಸೋಲಿಸುತ್ತೇವೆ.
*
ಕಾಂಗ್ರೆಸ್
2019ರಲ್ಲಿ
ಅಧಿಕಾರಕ್ಕೆ
ಬರಲಿದೆ
ಎನ್ನುವುದು
ಪ್ರಧಾನಿ
ನರೇಂದ್ರ
ಮೋದಿ
ಅವರಿಗೆ
ತಿಳಿದಿದೆ.
ಹಗರಣದಲ್ಲಿ ಸಿಕ್ಕಿಬಿದ್ದಿರುವ ಸಚಿವ
"ಪ್ರಧಾನಿ ಮೋದಿ ಸಂಪುಟದ ರೈಲ್ವೇ ಸಚಿವ ಪಿಯೂಷ್ ಗೋಯೆಲ್ ದೊಡ್ಡ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಬಿಜೆಪಿ ಸರ್ಕಾರದ ಪ್ರತಿಯೊಬ್ಬ ಮಂತ್ರಿಯೂ ಒಂದೊಲ್ಲಾ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರ ಸಮಯ ಮುಗಿಯುತ್ತಾ ಬಂದಿದೆ": @RahulGandhi#JanaAashirwadaYatre
— Karnataka Congress (@INCKarnataka) 7 April 2018
ಪ್ರಧಾನಿ ಮೋದಿ ಸಂಪುಟದ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ದೊಡ್ಡ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಬಿಜೆಪಿ ಸರ್ಕಾರದ ಪ್ರತಿಯೊಬ್ಬ ಮಂತ್ರಿಯೂ ಒಂದಲ್ಲಾ ಒಂದು ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇವರ ಸಮಯ ಮುಗಿಯುತ್ತಾ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.