'ನನ್ನ ಪ್ರೀತಿಯ ಕಾಪಾಡೊ ಗೊವಿಂದ' ದೇವರಿಗೆ ಯುವತಿ ಪತ್ರ
ಕೋಲಾರ, ಮಾರ್ಚ್ 23: ದೇವರ ಹುಂಡಿಯಲ್ಲಿ ಹಣ ಸಿಗುವುದು ಮಾಮೂಲಿ ಆದರೆ ಕೋಲಾರದ ಮಾಲೂರಿನ ಚಿಕ್ಕತಿರುಪತಿ ವೆಂಕಟರಮಣ ಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ ಲವ್ ಲೆಟರ್ ಸಿಕ್ಕಿದೆ!
ಪಾಪಿ ಯುವತಿಯೊಬ್ಬಳು ತನ್ನ ಏಳು ವರ್ಷದ ಪ್ರೇಮವನ್ನು ದಡ ಸೇರಿಸುವಂತೆ ತಿಮ್ಮಪ್ಪನ ಮೊರೆ ಹೋಗಿದ್ದಾಳೆ. ಬರೀ ಬೇಡಿಕೊಂಡರೆ ಆಗದು ಎಂದು ತನ್ನ ಮೊರೆಯನ್ನೆಲ್ಲಾ ಪತ್ರದಲ್ಲಿ ಬರೆದು ಹುಂಡಿಗೆ ಹಾಕಿದ್ದಾಳೆ. ನಿನ್ನೆ (ಮಾರ್ಚ್ 23) ಮುಜರಾಯಿ ಇಲಾಖೆಯವರ ನೇತೃತ್ವದಲ್ಲಿ ಹುಂಡಿ ತೆಗೆದು ಕಾಣಿಕೆ ಎಣಿಸಬೇಕಾದರೆ ಈ ಲವ್ ಲೆಟರ್ ಸಿಕ್ಕಿದೆ.
ಪ್ರೇಯಸಿ ಗಮನ ಸೆಳೆಯಲು ರಸ್ತೆ ಮೇಲೆ ಪ್ರೇಮ ಸಂದೇಶ!
ಚೈತ್ರ ಎಂಬ ಯುವತಿ ಈ ಪ್ರೇಮ ಪತ್ರ ಬರೆದಿದ್ದು 'ನಾನು ಎಂಟು ವರ್ಷದಿಂದ ಗಣೇಶ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು, ನಮ್ಮಿಬ್ಬರ ಪ್ರೀತಿಗೆ ಯಾವುದೇ ತೊಂದರೆ ಆಗದಂತೆ ಆದಷ್ಟು ಬೇಗ ನಿನ್ನ ಸನ್ನಿಧಿಯಲ್ಲೇ ವಿವಾಹವಾಗುವಂತೆ ಮಾಡು ದೇವರೇ' ಎಂದು ಪತ್ರದಲ್ಲಿ ಅಂಗಲಾಚಿದ್ದಾಳೆ.
ಬನಶಂಕರಿ ದೇವಿಗೆ ಪ್ರೇಮನಿವೇದನೆ, ವಿರಹ ವಿಮೋಚನೆಗೆ ಪತ್ರ
ಪತ್ರದ ಕೊನೆಯಲ್ಲಿ 'ಕಾಪಾಡು ತಂದೆ ವೆಂಕಟೇಶ್ವರನೇ, ಗೋವಿಂದಾ.. ಗೋವಿಂದಾ...' ಎಂದು ಮೊರೆ ಇಟ್ಟಿದ್ದಾಳೆ ಆ ಯುವ ಪ್ರೇಮಿ. ಚೈತ್ರಾಳ ಮೊರೆಯನ್ನು ಗೋವಿಂದಾ ಕೇಳುತ್ತಾನೊ ಅಥವಾ ಆಕೆಯ ಪ್ರೀತಿಯೇ ಗೋವಿಂದಾ ಎನ್ನುತ್ತದೆಯೋ ಗೋವಿಂದನೇ ಬಲ್ಲ.