ಕೋಲಾರದ ವೈದ್ಯಕೀಯ ಕಾಲೇಜಿನಲ್ಲಿ 30 ಮಂದಿಗೆ ಕೊರೊನಾ, ಓಮಿಕ್ರಾನ್ ಪರೀಕ್ಷೆಗೆ ಮಾದರಿ ರವಾನೆ
ಕೋಲಾರ,
ಡಿಸೆಂಬರ್
25:
ಕರ್ನಾಟಕದಲ್ಲಿ
ಕೊರೊನಾವೈರಸ್
ಸೋಂಕಿತ
ಪ್ರಕರಣಗಳ
ಸಂಖ್ಯೆ
ಏರಿಕೆ
ಜೊತೆಗೆ
ಓಮಿಕ್ರಾನ್
ರೂಪಾಂತರಿ
ಭೀತಿಯು
ಹೆಚ್ಚುತ್ತಿದೆ.
ಕೋಲಾರದ
ವೈದ್ಯಕೀಯ
ಕಾಲೇಜುವೊಂದರಲ್ಲೇ
30
ವಿದ್ಯಾರ್ಥಿಗಳಿಗೆ
ಕೊವಿಡ್-19
ಸೋಂಕು
ತಗುಲಿರುವುದು
ವೈದ್ಯಕೀಯ
ಪರೀಕ್ಷೆಯಲ್ಲಿ
ದೃಢಪಟ್ಟಿದೆ.
ಕೋಲಾರದ
ವೈದ್ಯಕೀಯ
ಕಾಲೇಜಿನಲ್ಲಿ
ಕಳೆದ
ನಾಲ್ಕು
ದಿನಗಳಲ್ಲಿ
30
ವಿದ್ಯಾರ್ಥಿಗಳಲ್ಲಿ
ಕೊರೊನಾವೈರಸ್
ಸೋಂಕು
ಪತ್ತೆಯಾಗಿದೆ.
ಜಿಲ್ಲಾಡಳಿತವು
ಕೋಲಾರದ
ದೇವರಾಜ
ಅರಸು
ವೈದ್ಯಕೀಯ
ಕಾಲೇಜಿನ
1,160
ವಿದ್ಯಾರ್ಥಿಗಳು
ಮತ್ತು
ಸಿಬ್ಬಂದಿಯನ್ನು
ಕೊವಿಡ್-19
ಪರೀಕ್ಷೆಗೆ
ಒಳಪಡಿಸಿದೆ.
ಓಮಿಕ್ರಾನ್ ಅಂಟಿದರೆ ಮನೆಯಲ್ಲೇ ಚಿಕಿತ್ಸೆ: ಹೀಗಿದೆ ವಿಧಾನ
ಕೊರೊನಾವೈರಸ್ ಸೋಂಕು ಪತ್ತೆಯಾದ ಎಲ್ಲಾ ಸೋಂಕಿತ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೋಂಕಿತರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕೊವಿಡ್-19 ಸೋಂಕು ಪತ್ತೆಯಾದವರಲ್ಲಿ ಯಾರೊಬ್ಬರೂ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲ. ಅದಾಗ್ಯೂ, ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಓಮಿಕ್ರಾನ್ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಕರ್ನಾಟಕದಲ್ಲಿ
31
ಓಮಿಕ್ರಾನ್
ಪ್ರಕರಣ:
ರಾಜ್ಯದಲ್ಲಿ
ಕೊರೊನಾವೈರಸ್
ಸೋಂಕಿನ
ಪಾಸಿಟಿವಿಟಿ
ದರವು
ಶೇ.0.35ರಷ್ಟಿದೆ.
ಇದರ
ಮಧ್ಯೆ
ಕರ್ನಾಟಕದಲ್ಲಿ
ಇದುವರೆಗೂ
31
ಓಮಿಕ್ರಾನ್
ಸೋಂಕಿತ
ಪ್ರಕರಣಗಳು
ವರದಿಯಾಗಿದ್ದು,
ಈ
ಪೈಕಿ
15
ಸೋಂಕಿತರು
ಗುಣಮುಖರಾಗಿ
ಡಿಸ್ಚಾರ್ಜ್
ಆಗಿದ್ದಾರೆ.
ಇದರ
ಹೊರತಾಗಿ
ರಾಜ್ಯದಲ್ಲಿ
ಒಟ್ಟು
7,251
ಕೊರೊನಾವೈರಸ್
ಸಕ್ರಿಯ
ಪ್ರಕರಣಗಳಿವೆ
ಎಂದು
ಕರ್ನಾಟಕ
ಆರೋಗ್ಯ
ಮತ್ತು
ಕುಟುಂಬ
ಕಲ್ಯಾಣ
ಇಲಾಖೆ
ತಿಳಿಸಿದೆ.
15,588
ಪ್ರಯಾಣಿಕರು
ರಾಜ್ಯಕ್ಕೆ
ಆಗಮನ:
ಕೊರೊನಾವೈರಸ್
ಹೊಸ
ರೂಪಾಂತರಿ
ಓಮಿಕ್ರಾನ್
ಅಪಾಯವನ್ನು
ಎದುರಿಸುತ್ತಿರುವ
ರಾಷ್ಟ್ರಗಳನ್ನು
ಈಗಾಗಲೇ
ಗುರುತಿಸಲಾಗಿದೆ.
ಅಂಥ
ರಾಷ್ಟ್ರಗಳಿಂದ
ರಾಜ್ಯಕ್ಕೆ
ಇದುವರೆಗೂ
15,588
ಪ್ರಯಾಣಿಕರು
ಕರ್ನಾಟಕಕ್ಕೆ
ಆಗಮಿಸಿದ್ದಾರೆ
ಎಂದು
ತಿಳಿದು
ಬಂದಿದೆ.
ಕೋವಿಡ್
ಪ್ರಕರಣಗಳು
ಮತ್ತು
ಓಮಿಕ್ರಾನ್
ಬೆದರಿಕೆಯನ್ನು
ಗಮನದಲ್ಲಿಟ್ಟುಕೊಂಡು,
ಕರ್ನಾಟಕ
ಸರ್ಕಾರ
ಮಂಗಳವಾರ
ಡಿಸೆಂಬರ್
30ರಿಂದ
ಜನವರಿ
2
ರವರೆಗೆ
ರಾಜ್ಯದಲ್ಲಿ
ಯಾವುದೇ
ಪಕ್ಷಗಳು
ಅಥವಾ
ಸಾಮೂಹಿಕ
ಸಭೆಗಳಿಗೆ
ಅನುಮತಿ
ನೀಡುವುದಿಲ್ಲ
ಎಂದು
ಹೇಳಿದೆ.
Recommended Video
ಕೊವಿಡ್-19
ಕ್ಲಸ್ಟರ್ಗಳಲ್ಲಿ
ಕಟ್ಟುನಿಟ್ಟಿನ
ಕ್ರಮ:
ಕೇಂದ್ರ
ಆರೋಗ್ಯ
ಕಾರ್ಯದರ್ಶಿ
ರಾಜೇಶ್
ಭೂಷಣ್
ನೇತೃತ್ವದಲ್ಲಿ
ಇತ್ತೀಚಿಗೆ
ನಡೆದ
ಸಭೆಯಲ್ಲಿ
ಕೋವಿಡ್
-19
ಅನ್ನು
ಎದುರಿಸುವ
ನಿಟ್ಟಿನಲ್ಲಿ
ಸಲಹೆ
ಸೂಚನೆಗಳನ್ನು
ನೀಡಲಾಯಿತು.
ರಾಜ್ಯಗಳು
ಮತ್ತು
ಕೇಂದ್ರಾಡಳಿತ
ಪ್ರದೇಶಗಳಲ್ಲಿ
ಲಸಿಕೆ
ವಿತರಣೆಯನ್ನು
ಹೆಚ್ಚಿಸುವುದರ
ಜೊತೆಗೆ
ಓಮಿಕ್ರಾನ್
ರೂಪಾಂತರ
ವೈರಸ್
ಹರಡದಂತೆ
ಮುನ್ನೆಚ್ಚರಿಕೆ
ಕ್ರಮಗಳನ್ನು
ಜಾರಿಗೊಳಿಸುವುದಕ್ಕೆ
ಸೂಚಿಸಲಾಗಿತ್ತು.
"ಕರ್ನಾಟಕಕ್ಕೆ
ಸಂಬಂಧಿಸಿದಂತೆ,
ಕ್ಲಸ್ಟರ್ಗಳ
ಸಂಖ್ಯೆ
ಹೆಚ್ಚಳದ
ಬಗ್ಗೆ
ಗಮನ
ಹರಿಸಲು
ನಮಗೆ
ತಿಳಿಸಲಾಗಿದೆ.
ಈ
ಪ್ರದೇಶಗಳಲ್ಲಿ
ಕಟ್ಟುನಿಟ್ಟಿನ
ಕ್ರಮಗಳನ್ನು
ಜಾರಿಗೊಳಿಸಲು
ಮತ್ತು
ಕ್ಲಸ್ಟರ್ಗಳಲ್ಲಿ
ಮುನ್ನೆಚ್ಚರಿಕೆ
ಕ್ರಮಗಳನ್ನು
ನೋಡಿಕೊಳ್ಳಲು
ನಮಗೆ
ತಿಳಿಸಲಾಗಿದೆ,"
ಎಂದು
ರಾಷ್ಟ್ರೀಯ
ವ್ಯವಸ್ಥಾಪಕ
ನಿರ್ದೇಶಕಿ
ಅರುಂದತಿ
ಚಂದ್ರಶೇಖರ್
ಹೇಳಿದ್ದಾರೆ.