ರೇವಣ್ಣ ಬಿಸ್ಕೇಟ್ ಎಸೆತಕ್ಕೆ, ದೇಶಪಾಂಡೆ ಕಿಟ್ ಎಸೆತದ ಸಾಥ್!
ಹಳಿಯಾಳ, ನವೆಂಬರ್ 01: ಪ್ರವಾಹ ಸಂತ್ರಸ್ತರಿಗೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರು ಬಿಸ್ಕೇಟ್ ಎಸೆದ ವಿಡಿಯೋವೊಂದು ಎರಡು ತಿಂಗಳ ಹಿಂದೆ ಸಾಕಷ್ಟು ಸುದ್ದಿ ಮಾಡಿತ್ತು.
ಇದೀಗ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರ ಸರದಿ! ಉತ್ತರ ಕನ್ನಡ ಜಿಲ್ಲೆಯ ತಮ್ಮ ಕ್ಷೇತ್ರವಾದ ಹಳಿಯಾಳದಲ್ಲಿ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ಸ್ಪೋರ್ಟ್ಸ್ ಕಿಟ್ ಗಳನ್ನು ನೀಡುತ್ತಿದ್ದ ಆರ್ ವಿ ದೇಶಪಾಂಡೆ ಅವರು, ವೇದಿಕೆಯಲ್ಲಿ ನಿಂತು ಕಿಟ್ ಗಳನ್ನು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ!
ವೈರಲ್ ವಿಡಿಯೋ: ನೆರೆ ಸಂತ್ರಸ್ತರಿಗೆ ಬಿಸ್ಕೇಟ್ ಎಸೆದ ರೇವಣ್ಣ!
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಳಿಯಾಳ ಶಾಸಕ ದೇಶಪಾಂಡೆ, 'ದುರದೃಷ್ಟದ ಸಂಗತಿ ಎಂದರೆ ಕೆಲವು ಮಾಧ್ಯಮ ಮಿತ್ರರು ವಿಡಿಯೋದ ಒಂದು ತುಣುಕನ್ನಷ್ಟೇ ಕತ್ತರಿಸಿ ಆ ಸನ್ನಿವೇಶಕ್ಕೆ ಬೇರೆ ಅರ್ಥ ನೀಡಿದ್ದಾರೆ. ಆದರೆ ಸಂಪೂರ್ಣ ವಿಡಿಯೋ ನೋಡಿದರೆ ನನ್ನ ಉದ್ದೇಶ ಏನಾಗಿತ್ತು ಎಂಬುದು ಗೊತ್ತಾಗುತ್ತದೆ ' ಎಂದು ದೇಶಪಾಂಡೆ ಪ್ರತಿಕ್ರಿಯೆ ನೀಡಿದ್ದಾರೆ.
#WATCH Karnataka Revenue Minister RV Deshpande throws sports kits from a stage at national, state and district level athletes, in Karwar's Haliyala. (31.10.18) pic.twitter.com/m82LYSh9wL
— ANI (@ANI) November 1, 2018