ಮೋದಿ ಜೊತೆ ಪರೀಕ್ಷಾ ಚರ್ಚೆಗೆ ಉತ್ತರ ಕನ್ನಡದ ಏಕೈಕ ವಿದ್ಯಾರ್ಥಿನಿ ಆಯ್ಕೆ
ಕಾರವಾರ, ಜನವರಿ 24: ದೆಹಲಿಯಲ್ಲಿ ಜ29 ರಂದು ನಡೆಯುವ ಪರೀಕ್ಷಾ ಕಿ ಬಾತ್ ಪಿಎಂ ಕೆ ಸಾಥ್ ಕಾರ್ಯಕ್ರಮಕ್ಕೆ ಉತ್ತರ ಕನ್ನಡ ಜಿಲ್ಲೆಯ ನವೋದಯ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ.
ಪೂರ್ವಿ ಸುಂದರ್ ಶಾನಭಾಗ್ ಆಯ್ಕೆಯಾಗಿರುವ ಏಕೈಕ ವಿದ್ಯಾರ್ಥಿನಿ. ಪರೀಕ್ಷೆ ಎದುರಿಸಲು ತಯಾರಿ ಹಾಗೂ ಪರೀಕ್ಷೆ ನಂತರದ ವಿಷಯಗಳನ್ನು ಪ್ರಧಾನಿಯವರೊಂದಿಗೆ ಚರ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ.
ಅರ್ಧಕ್ಕಿಂತ ಹೆಚ್ಚಿನ 8ನೇ ಕ್ಲಾಸ್ನ ವಿದ್ಯಾರ್ಥಿಗಳಿಗೆ, ಸಾಮಾನ್ಯ ಗಣಿತವೂ ಬರಲ್ಲ: ಸಮೀಕ್ಷೆ
ದೆಹಲಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕಾಗಿ ಪೂರ್ವಿ ತಮ್ಮ ಪೋಷಕರೊಂದಿಗೆ ಇಂದು ದೆಹಲಿಗೆ ಹೊರಟಿರುವುದಾಗಿ ಶಾಲೆಯ ಪ್ರಾಚಾರ್ಯ ವಿ.ಬಿ.ಲಮಾಣಿ ತಿಳಿಸಿದ್ದಾರೆ.
ಗುಜರಾತ್ ವಿದ್ಯಾರ್ಥಿಗಳು 'ಎಸ್ ಸಾರ್' ಅನ್ನೊಂಗಿಲ್ಲ, 'ಜೈ ಹಿಂದ್' ಅನ್ಬೇಕು
ಶಾಲೆಯ ಒಟ್ಟು 110 ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅದರಲ್ಲಿ ಪೂರ್ವಿ ಸುಂದರ್ ಶಾನಭಾಗ್ ಮಾತ್ರ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.