ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉ.ಕ.ಜಿಲ್ಲೆಯಲ್ಲಿ ಭಾರೀ ಮಳೆ, 5 ತಾಲೂಕುಗಳ ಶಾಲೆಗಳಿಗೆ ಆ.13ರಂದು ರಜಾ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಆಗಸ್ಟ್.13: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಸೋಮವಾರವೂ ಮಳೆ ಮುಂದುವರಿದಿದೆ.

ಮುನ್ನೆಚ್ಚರಿಕೆಯಾಗಿ ಮಲೆನಾಡು ಭಾಗದ ಐದು ತಾಲೂಕುಗಳ ಜಿಲ್ಲಾಧಿಕಾರಿಗಳು ಶಾಲೆಗಳಿಗೆ ಮಂಗಳವಾರ ರಜಾ ಘೋಷಿಸಲಾಗಿದೆ.

ಆಯಾ ತಾಲ್ಲೂಕಿನ ಶಿಕ್ಷಣಾಧಿಕಾರಿಗಳಿಗೆ ರಜಾ ಘೋಷಣೆಗೆ ಅಧಿಕಾರವನ್ನು ನೀಡಲಾಗಿತ್ತು. ಅದರಂತೆ, ಇದೀಗ ಕಾರವಾರ ಹಾಗೂ ಅಂಕೋಲಾ ತಾಲ್ಲೂಕುಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಅಧಿಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಜಾ ಘೋಷಿಸಲಾಗಿದೆ.

ದ.ಕನ್ನಡ ಭಾರಿ ಮಳೆ: ಆಗಸ್ಟ್‌ 11ರಂದು ಶಾಲಾ-ಕಾಲೇಜು ರಜೆದ.ಕನ್ನಡ ಭಾರಿ ಮಳೆ: ಆಗಸ್ಟ್‌ 11ರಂದು ಶಾಲಾ-ಕಾಲೇಜು ರಜೆ

ಶಾಲೆಯ ಮೇಲೆ ಬಿದ್ದ ಮರದ ಟೊಂಗೆ
ಯಲ್ಲಾಪುರ ಪಟ್ಟಣದ ಕಾಳಮ್ಮನಗರ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಜೋರು ಮಳೆಗೆ ಮರದ ಟೊಂಗೆಯೊಂದು ಬಿದ್ದು, ತರಗತಿ ಕೊಠಡಿ ಹಾಗೂ ಶೌಚಾಲಯಕ್ಕೆ ಭಾಗಶಃ ಹಾನಿಯಾಗಿದೆ.

Tuesday vacation has been announced for three taluk schools in Uttara Kannada

ಮಧ್ಯಾಹ್ನ 11 ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಈ ಸಂದರ್ಭದಲ್ಲಿ ಶಾಲೆಯ ಕೊಠಡಿಯಲ್ಲಿ ತರಗತಿ ನಡೆಯುತ್ತಿತ್ತು. ಮರದ ಟೊಂಗೆ ಕಿತ್ತು ಬರುವುದನ್ನು ಕಂಡ ಶಾಲೆಯ ಪಕ್ಕದ ನಿವಾಸಿಗಳು. ಕೂಡಲೇ ಶಾಲೆಯೆಡೆಗೆ ಧಾವಿಸಿ ಬೊಬ್ಬೆ ಹಾಕಿ ಮಕ್ಕಳನ್ನು ಓಡಿ ಹೋಗಲು ಪ್ರಚೋದಿಸಿದ್ದಾರೆ.

ಎಲ್ಲಾ ಮಕ್ಕಳು, ಶಿಕ್ಷಕರು ಶಾಲೆಯಿಂದ ಹೊರಗೆ ಓಡಿ ಬಂದಿದ್ದು, ಅದೇ ಸಮಯಕ್ಕೆ ಮರದ ಟೊಂಗೆ ಶಾಲೆಯ ಮೇಲೆ ಬಿದ್ದಿದೆ. ಶಾಲೆಯ ಅಕ್ಕಪಕ್ಕದ ನಿವಾಸಿಗಳು, ಚರ್ಚ್ ಕೆಲಸಗಾರನ ಮುಂಜಾಗ್ರತೆಯಿಂದಾಗಿ ಶಾಲೆಯಲ್ಲಿ ಸಂಭವಿಸಬಹುದಾದ ಅಪಾಯ ತಪ್ಪಿದಂತಾಗಿದೆ.

ಪ್ರವಾಹದ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆಯು ಆ.16ರವರೆಗೆ ರಾಜ್ಯದ ಕರಾವಳಿ ಭಾಗದಲ್ಲಿ ಪ್ರವಾಹ ಉಂಟಾಗಬಹುದೆಂಬ ಮುನ್ಸೂಚನೆ ರವಾನಿಸಿದೆ. ಅದರಂತೆ, ಆ.17ರ ವರೆಗೆ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ರವಾನಿಸಿದೆ.

English summary
Heavy rains have been reported in Uttara Kannada district over the last three days. As a precaution, Tuesday vacation has been announced for three Taluk schools in Uttara Kannada District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X