ಶಿರಸಿ ಬಳಿ ಜಾನುವಾರು ಅಕ್ರಮ ಸಾಗಣೆ; ಆರು ಜಾನುವಾರುಗಳ ಸಾವು
ಶಿರಸಿ, ಜುಲೈ 23: ಶಿರಸಿ ಬಳಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗಾಡಿಯನ್ನು ತಡೆದ ಶ್ರೀರಾಮ ಸೇನೆಯ ಕಾರ್ಯಕರ್ತರು ವಾಹನ ಸಮೇತ ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮೈಸೂರಿನಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 34 ಜಾನುವಾರುಗಳು ವಶ
ಶಿರಸಿಯ ಗ್ರಾಮೀಣ ಭಾಗ ಇಸ್ಲೂರ್ ಚೆಕ್ ಪೋಸ್ಟ್ ಬಳಿ ಸಂಘಟನೆಯು ಜಾನುವಾರುಗಳ ಅಕ್ರಮ ಸಾಗಾಟವನ್ನು ತಡೆದಿದೆ. ವಾಹನದಲ್ಲಿ 35ಕ್ಕೂ ಹೆಚ್ಚು ಎಮ್ಮೆ, ಕೋಣಗಳನ್ನು ಇಕ್ಕಟ್ಟಾಗಿ ತುಂಬಲಾಗಿತ್ತು. ಈ ಹಿಂಸಾತ್ಮಕ ಸಾಗಾಟದಲ್ಲಿ ಆರು ಜಾನುವಾರುಗಳು ಸಾವನ್ನಪ್ಪಿವೆ.
ವಾಹನ ಹಾಗೂ ಜಾನುವಾರುಗಳನ್ನು ಶಿರಸಿಯ ಗ್ರಾಮೀಣ ಠಾಣೆಗೆ ತರಲಾಗಿದ್ದು, ಪ್ರಕರಣವನ್ನು ದಾಖಲಿಸಲಾಗಿದೆ.
Comments
English summary
Activists of Srirama Sena stopped the illegal cattle transport and handed over to the police in sirsi. Six cattles died during the transportation.
Story first published: Tuesday, July 23, 2019, 17:42 [IST]