ಕಾರವಾರ: ವನ್ನಳ್ಳಿ ಬೀಚ್ನ ಬಂಡೆ ಮೇಲೆ ಕುಳಿತು ಪೋಸ್ ನೀಡುತ್ತಿದ್ದ ವ್ಯಕ್ತಿ ಸಮುದ್ರಪಾಲು!
ಕಾರವಾರ, ಸೆಪ್ಟೆಂಬರ್ 15: ಸಾವಿನ ಮನೆಯಾಗಿ ಬದಲಾಗಿರುವ ಕಡಲ ತೀರಗಳಲ್ಲಿ ನಿಷೇದಾಜ್ಞೆ ಜಾರಿಯಲ್ಲಿದ್ದರೂ, ಸಾವಿನ ಸರಣಿ ಮಾತ್ರ ನಿಲ್ಲುತ್ತಿಲ್ಲ. ಸ್ನೇಹಿತರ ಜೊತೆ ಕುಮಟಾದ ವನ್ನಳ್ಳಿ ಬೀಚ್ಗೆ ಭೇಟಿ ನೀಡಿದ್ದ ಶಿರಸಿ ಮೂಲದ ವಕೀಲರೊಬ್ಬರು ಅಲೆಯ ಹೊಡೆತಕ್ಕೆ ಸಿಕ್ಕು ಸಮುದ್ರ ಪಾಲಾದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ವಕೀಲಿ ವೃತ್ತಿಯನ್ನು ಮಾಡುತ್ತಿದ್ದ ಶಿರಸಿಯ ಸುಬ್ರಹ್ಮಣ್ಯ ಗೌಡ ಎಂಬಾತ ಬುಧವಾರ ತನ್ನ ಸ್ನೇಹಿತರೊಡಗೂಡಿ ಕುಮಟಾ ತಾಲೂಕಿನ ವನ್ನಳ್ಳಿ ಬೀಚ್ಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಸ್ನೇಹಿತರೊಂದಿಗೆ ಬಂದು ಚೆನ್ನಾಗಿ ಮೋಜು ಮಸ್ತಿಯಲ್ಲಿ ನಿರತವಾಗಿದ್ದಾಗ ಅಲೆಗಳು ಬಂದು ಅಪ್ಪಳಿಸುತ್ತಿದ್ದ ಬಂಡೆಯ ಮೇಲೆ ತಪಸ್ಸಿಗೆ ಕುಳಿತಂತೆ ಪೋಸ್ ನೀಡುತ್ತಿದ್ದರು. ಭಾರೀ ಗಾತ್ರದ ಅಲೆಯೊಂದು ಬಂದು ಅಪ್ಪಳಿಸಿದ ರಭಸಕ್ಕೆ ಬಂಡೆಯ ಮೇಲೆ ಕುಳಿತಿದ್ದವರು ನೀರು ಪಾಲಾಗಿದ್ದಾರೆ ಎನ್ನಲಾಗಿದೆ.
ಹೇಳಿದರೂ
ಕೇಳದವರ
ತಡೆಯುವವರ್ಯಾರು
ಕುಮಟಾ
ಕಡಲತೀರದಲ್ಲಿ
ಇತ್ತೀಚೆಗೆ
ಪ್ರವಾಸಿಗರು
ಸಮುದ್ರಕ್ಕಿಳಿದು
ಸಾವನ್ನಪ್ಪುವ
ಘಟನೆಗಳು
ಹೆಚ್ಚುತ್ತಿರುವ
ಹಿನ್ನಲೆಯಲ್ಲಿ
ತಾಲೂಕಾಡಳಿತ,
ಪೊಲೀಸರು
ರೆಸಾರ್ಟ್
ಮಾಲೀಕರ
ಸಭೆ
ನಡೆಸಿ
ಕಡಲಿಗಿಳಿಯುವವರ
ಮೇಲೆ
ಹದ್ದಿನ
ಕಣ್ಣಿಡಲು
ಸ್ಪಷ್ಟ
ನಿರ್ದೇಶನ
ನೀಡಿದ್ದಾರೆ.
ಅಷ್ಟು
ಸಾಲದೆಂಬಂತೆ
ಕುಮಟಾ
ತಾಲೂಕಿನ
ವ್ಯಾಪ್ತಿಯ
ಕಡಲ
ತೀರದಲ್ಲಿ
144
ಸೆಕ್ಷನ್
ಜಾರಿಯಲ್ಲಿದೆ.
ಇದೆಲ್ಲವನ್ನೂ
ಲೆಕ್ಕಿಸದೇ
ನೀರಿಗಿಳಿದ
ಕಾರಣ
ಇಂದು
ಮತ್ತೊಂದು
ಸಾವಾಗಿದೆ.
ಮೃತ ಸುಬ್ರಹ್ಮಣ್ಯ ಗೌಡ ಮೊದಲ ಮಡದಿಗೆ ವಿಚ್ಛೇದನ ನೀಡಿ ಇನ್ನೊಂದು ವಿವಾಹವಾಗಿದ್ದ. ಎರಡನೇ ಹೆಂಡತಿಗೆ 7 ತಿಂಗಳ ಮಗು ಇರುವ ಮಾಹಿತಿ ಲಭ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Recommended Video
ಕುಮಟಾ
ಕಡಲತೀರದಲ್ಲಿ
ನಿಷೇಧಾಜ್ಞೆ
ಜಾರಿ
ಪ್ರವಾಸಿಗರ
ಸುರಕ್ಷತೆ
ದೃಷ್ಟಿಯಿಂದ
ಉತ್ತರ
ಕನ್ನಡ
ಜಿಲ್ಲೆ
ಕುಮಟಾ
ತಾಲೂಕಿನ
ಪ್ರಸಿದ್ಧ
ಪ್ರಮುಖ
ಕಡಲತೀರಗಳಲ್ಲಿ
ದಂಡ
ಪ್ರಕ್ರಿಯಾ
ಸಂಹಿತೆ
1973ರ
ಕಲಂ
144ರನ್ವಯ
ನಿಷೇಧಾಜ್ಞೆ
ಜಾರಿಗೊಳಿಸಿ,
ಮೀನುಗಾರಿಕೆಗೆ
ಹೊರತುಪಡಿಸಿ
ಉಳಿದ
ಚಟುವಟಿಕೆಗಳನ್ನು
ಅಕ್ಟೋಬರ್
9ರವರೆಗೆ
ಸಂಪೂರ್ಣ
ಸ್ಥಗಿತಗೊಳಿಸಬೇಕು
ಎಂದು
ತಹಶೀಲ್ದಾರ
ವಿವೇಕ
ಶೇಣ್ವಿ
ಆದೇಶಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ತಹಶೀಲ್ದಾರ ವಿವೇಕ ಶೇಣ್ವಿ, ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ, ಗುಡೇಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ ಹಾಗೂ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಬೀಚ್, ಕುಡ್ಲೆ ಬೀಚ್, ಮೇನ್ ಬೀಚ್ ಮತ್ತು ಹಾಪ್ ಮೂನ್ ಬೀಚ್ಗಳು ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ದಿನ ಸಾವಿರಾರು ಪ್ರವಾಸಿಗರು ಆಗಮಿಸಿ, ಕಡಲ ಸೌಂದರ್ಯಗಳನ್ನು ಸವಿಯುತ್ತಾರೆ. ಹೀಗೆ ಬಂದವರಲ್ಲಿ ಕೆಲ ಪ್ರವಾಸಿಗರು ಆಕಸ್ಮಿಕವಾಗಿ ಸಮುದ್ರ ಅಲೆಗೆ ಸಿಲುಕಿ ಅಥವಾ ಈಜಲು ಸಮುದ್ರದಲ್ಲಿ ಇಳಿದು ಅಲೆಯ ಸೆಳೆತಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವುದು ಪೊಲೀಸ್ ಇಲಾಖಾ ವರದಿಯಿಂದ ತಿಳಿದು ಬಂದಿದೆ.
ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2010ನೇ ಸಾಲಿನಿಂದ ಈವರೆಗೂ ಬೀಚ್ಗಳಲ್ಲಿ ಈಜಲು ಹೋಗಿ ಹಾಗೂ ಆಕಸ್ಮಿಕ ಸಮುದ್ರದ ಅಲೆ ಅಪ್ಪಳಿಸಿ ಮುಳಗಿ ಮೃತಪಟ್ಟ ಪ್ರಕರಣಗಳ ಅಂಕಿ-ಅಂಶ ಮಾಹಿತಿಯಂತೆ 2020 ಡಿಸೆಂಬರ್ವರೆಗೆ ಸುಮಾರು 67 ಮತ್ತು 2021 ಜನವರಿಯಿಂದ ಈವರೆಗೆ ಸುಮಾರು 9 ಜನರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಕುಮಟಾ ತಾಲೂಕಿನ ಬೀಚ್ಗಳಲ್ಲಿ ಘಟಿಸಿದ ಅಸಹಜ, ಅಸ್ವಾಭಾವಿಕ ದುರ್ಮರಣಗಳ ಪ್ರಕರಣಗಳ ಕುರಿತು ಸಂಬಂಧಿಸಿದ ಕಂದಾಯ ಇಲಾಖಾ, ಪೊಲೀಸ್ ಇಲಾಖಾ, ಸ್ಥಳೀಯ ಸಂಸ್ಥೆ, ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಮತ್ತು ಬೀಚ್ಗಳಿಗೆ ಲಗತ್ತಿರುವ ರೆಸಾರ್ಟ್ ಮಾಲೀಕರಿಗೆ ಪ್ರವಾಸಿಗರ ಆಕಸ್ಮಿಕ ಮರಣಗಳ ಹಾಗೂ ಅಹಿತಕರ ಘಟನೆಯನ್ನು ತಪ್ಪಿಸಲು ಸಲಹೆ- ಸೂಚನೆಯನ್ನು ಪಾಲಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ.