ಸಿಎಂ ಆಹ್ವಾನ, ಸಚಿವ ಸ್ಥಾನ ಖಚಿತ: ಸಂತಸ ಹಂಚಿಕೊಂಡ ಶಿವರಾಮ ಹೆಬ್ಬಾರ್
ಕಾರವಾರ, ಆಗಸ್ಟ್ 04: ರಾಜ್ಯದಲ್ಲಿ ಸಚಿವ ಸಂಪುಟ ರಚನೆಯ ಕಸರತ್ತು ಕೊನೆಗೂ ಅಂತಿಮ ಹಂತಕ್ಕೆ ಬಂದಿದ್ದು, ಇಂದು (ಆ.4) ಮಧ್ಯಾಹ್ನ 2.30ಕ್ಕೆ ನೂತನ ಸಚಿವರುಗಳು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಒಟ್ಟು
29
ಶಾಸಕರುಗಳಿಗೆ
ಮೊದಲ
ಹಂತದಲ್ಲಿ
ಸಚಿವರಾಗಲು
ಹೈಕಮಾಂಡ್
ಅನುಮತಿ
ನೀಡಿದ್ದು,
ಮಂಗಳವಾರ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಈ
ಸಂಬಂಧ
ಬಿಜೆಪಿ
ಅಧ್ಯಕ್ಷ
ಜೆ.ಪಿ.
ನಡ್ಡಾ
ಹಾಗೂ
ಗೃಹ
ಸಚಿವ
ಅಮಿತ್
ಶಾರನ್ನು
ದೆಹಲಿಯಲ್ಲಿ
ಭೇಟಿ
ಮಾಡಿ
ಸಮಾಲೋಚನೆ
ನಡೆಸಿದರು.
ಇದಾದ
ನಂತರ
ಸಿಎಂ
ಕರ್ನಾಕಟದತ್ತ
ಮುಖ
ಮಾಡಿದ್ದು,
ಬಿಜೆಪಿ
ಹೈಕಮಾಂಡ್
ನೀಡಿದ
ಪಟ್ಟಿಯನ್ವಯ
ಸಚಿವರಾಗುವವರಿಗೆ
ಪ್ರಮಾಣ
ವಚನ
ಸ್ವೀಕರಿಸಲು
ಬರುವಂತೆ
ತಿಳಿಸಲಾಗಿದೆ
ಎನ್ನಲಾಗಿದೆ.
ಇನ್ನು
ಉತ್ತರ
ಕನ್ನಡ
ಜಿಲ್ಲೆಯ
ಯಲ್ಲಾಪುರ
ಶಾಸಕ
ಶಿವರಾಮ
ಹೆಬ್ಬಾರ್
ಸಚಿವರಾಗುವುದು
ಖಚಿತವಾಗಿದೆ.
ಕಾಂಗ್ರೆಸ್
ಹಾಗೂ
ಜೆಡಿಎಸ್
ಪಕ್ಷವನ್ನು
ತೊರೆದು
ಬಿಜೆಪಿಗೆ
ಬಂದು
ಸಚಿವರಾಗಿದ್ದ
11
ಜನರಲ್ಲಿ
ಶ್ರೀಮಂತ್
ಪಾಟೀಲ್
ಹಾಗೂ
ಆರ್.
ಶಂಕರ್ರನ್ನು
ಕೈ
ಬಿಟ್ಟು
ಉಳಿದರಿಗೆ
ಅವಕಾಶ
ನೀಡಲಾಗಿದೆ.
ಕಾರ್ಮಿಕ ಸಚಿವರಾಗಿದ್ದ ವೇಳೆ ರಾಜ್ಯಾದ್ಯಂತ ತಿರುಗಾಟ ನಡೆಸಿ, ಉತ್ತಮವಾಗಿ ಕೆಲಸವನ್ನು ನಿರ್ವಹಿಸುವ ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದರಿಂದ ಹೆಬ್ಬಾರ್ರಿಗೆ ಸಚಿವ ಸ್ಥಾನ ಖಚಿತವಾಗಿದೆ. ಈ ಬಗ್ಗೆ ಖುದ್ದು ಹೆಬ್ಬಾರ್ ಕೂಡ ಅಭಿಪ್ರಾಯ ವ್ಯಕ್ತಪಡಿಸಿ, ಸಂತಸ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಸಚಿವ ಹೆಬ್ಬಾರ್ ಹೇಳಿದ್ದೇನು? ಮುಂದೆ ಓದಿ...
ಆತ್ಮೀಯ ಮತದಾರ ಬಂಧುಗಳೇ...
"ಮಾನ್ಯ
ಮುಖ್ಯಮಂತ್ರಿಗಳಾದ
ಸನ್ಮಾನ್ಯ
ಬಸವರಾಜ
ಬೊಮ್ಮಾಯಿ
ಈಗಷ್ಟೇ
ದೂರವಾಣಿ
ಮೂಲಕವಾಗಿ
ಕರೆ
ಮಾಡಿ
ನನಗೆ
ಅವರ
ನೇತೃತ್ವದ
ಸಚಿವ
ಸಂಪುಟದಲ್ಲಿ
ಸಚಿವನಾಗಿ
ಪ್ರಮಾಣ
ವಚನ
ಸ್ವೀಕರಿಸುವುದಕ್ಕೆ
ಆಹ್ವಾನಿಸಿರುವುದನ್ನು
ನಿಮ್ಮ
ಮುಂದೆ
ಹಂಚಿಕೊಳ್ಳುವುದಕ್ಕೆ
ಅತ್ಯಂತ
ಸಂತಸವಾಗುತ್ತಿದೆ.''
"ಕಳೆದ
1
ವರ್ಷ
5
ತಿಂಗಳ
ಕಾಲ
ರಾಜ್ಯದ
ಕಾರ್ಮಿಕ
ಖಾತೆ
ಸಚಿವನಾಗಿ
ಪಕ್ಷ
ಹಾಗೂ
ಮಾಜಿ
ಮುಖ್ಯಮಂತ್ರಿಗಳಾದ
ಬಿ.ಎಸ್.
ಯಡಿಯೂರಪ್ಪನವರು
ಕೊಟ್ಟ
ಜವಾಬ್ದಾರಿಯನ್ನು
ಶ್ರದ್ಧೆಯಿಂದ
ನಿರ್ವಹಿಸಿ,
ರಾಜ್ಯಾದ್ಯಂತ
ಪ್ರವಾಸ
ಮಾಡಿ
ಶ್ರಮಿಕ
ವರ್ಗಗಳ
ಆರ್ಥಿಕ
ಹಾಗೂ
ಸಾಮಾಜಿಕ
ಭದ್ರತೆಗಾಗಿ
ಹಲವಾರು
ಮಹತ್ವದ
ಯೋಜನೆಗಳನ್ನು
ಜಾರಿಗೆ
ತರಲಾಗಿದೆ,
ನನಗೆ
ನೀಡಿದ
ಜವಾಬ್ದಾರಿಯನ್ನು
ಅತ್ಯಂತ
ಪ್ರಾಮಾಣಿಕತೆಯಿಂದ
ಕಾರ್ಯನಿರ್ವಹಿಸಿದ್ದೇನೆ
ಮುಂದೆಯೂ
ಸಹ
ಕ್ಷೇತ್ರದ,
ರಾಜ್ಯದ
ಜನತೆಗೆ
ಯಾವುದೇ
ಚ್ಯುತಿ
ಬರದಂತೆ
ಕಾರ್ಯನಿರ್ವಹಿಸುತ್ತೆನೆ.''
ಕ್ಷೇತ್ರದ ಮಹಾ ಜನತೆಗೆ ಧನ್ಯವಾದ
"ನನಗೆ ಮತ್ತೊಮ್ಮೆ ಸಚಿವ ಸ್ಥಾನ ಲಭಿಸಲು ಮೂಲ ಕಾರಣಿಕರರ್ತರಾದ ಯಲ್ಲಾಪುರ- ಮುಂಡಗೋಡ- ಬನವಾಸಿ ವಿಧಾನಸಭಾ ಕ್ಷೇತ್ರದ ಮಹಾ ಜನತೆಗೆ, ನನ್ನ ಮೇಲೆ ನಂಬಿಕೆ ಇಟ್ಟು ಮತ್ತೊಮ್ಮೆ ರಾಜ್ಯ ಜನತೆಯ ಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಗೆ, ರಾಜ್ಯ ಮತ್ತು ಕೇಂದ್ರದ ಎಲ್ಲಾ ನಾಯಕರಿಗೂ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸೇತ್ತೆನೆ,'' ಎಂದು ಶಿವರಾಮ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊನೆಯ ಕ್ಷಣದವರೆಗೂ ರೂಪಾಲಿ ನಾಯ್ಕ ಪ್ರಯತ್ನ
ಇನ್ನು ಕಳೆದ ಬಾರಿ ಯಡಿಯೂರಪ್ಪ ಸಂಪುಟದಲ್ಲಿದ್ದ ಜಗದೀಶ್ ಶೆಟ್ಟರ್, ಸಿ.ಸಿ. ಪಾಟೀಲ್, ಲಕ್ಷ್ಮಣ್ ಸವದಿ, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ಹಿರಿಯ ನಾಯಕರನ್ನು ಕೈಬಿಡಲಾಗುತ್ತಿದೆ ಎನ್ನಲಾಗಿದೆ. ಇನ್ನೊಂದೆಡೆ ಶಶಿಕಲಾ ಜೊಲ್ಲೆಯವರನ್ನು ಸಹ ಕೈಬಿಡಲು ತಿರ್ಮಾನಿಸಿದ್ದು, ಈ ಸ್ಥಾನವನ್ನು ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕರಿಗೆ ಕೊಡಬಹುದು ಎನ್ನಲಾಗಿತ್ತು. ಆದರೆ ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಹೆಸರು ಬಹುತೇಕ ಫೈನಲ್ ಆಗಿದೆ ಎನ್ನಲಾಗಿದ್ದು, ಕೊನೆಯ ಕ್ಷಣದವರೆಗೂ ರೂಪಾಲಿ ನಾಯ್ಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಮಧ್ಯಾಹ್ನದ ಒಳಗೆ ಸ್ಪಷ್ಟ ಚಿತ್ರಣ
ಇನ್ನೊಂದೆಡೆ
ಶಿರಸಿ
ಕ್ಷೇತ್ರದ
ಶಾಸಕ,
ಸ್ಪೀಕರ್
ವಿಶ್ವೇಶ್ವರ
ಹೆಗಡೆ
ಕಾಗೇರಿಯವರು
ಸಚಿವರಾಗಲಿದ್ದಾರೆ
ಎನ್ನಲಾಗಿತ್ತು.
ಆದರೆ
ಈ
ಬಗ್ಗೆ
ಯಾವುದೇ
ಮಾಹಿತಿ
ಲಭ್ಯವಾಗಿಲ್ಲ.
ಬಸವರಾಜ
ಬೊಮ್ಮಾಯಿ
ಸಿಎಂ
ಆಗಿ
ಪ್ರಮಾಣ
ವಚನ
ಸ್ವೀಕರಿಸಿದ
ದಿನದಿಂದ
ಸಚಿವ
ಸ್ಥಾನಕ್ಕೆ
ದಂಬಾಲು
ಬಿದ್ದು
ಹಲವು
ಶಾಸಕರು
ಓಡಾಟ
ನಡೆಸಿದ್ದರು.
ಇಂದು
ಮಧ್ಯಾಹ್ನದ
ಒಳಗೆ
ಯಾರೆಲ್ಲ
ಸಚಿವರಾಗುತ್ತಾರೆ
ಎನ್ನುವ
ಸ್ಪಷ್ಟ
ಚಿತ್ರಣ
ಹೊರಬೀಳಲಿದ್ದು,
ಜನರಲ್ಲಿ
ಸೃಷ್ಟಿಯಾಗಿದ್ದ
ಕುತೂಹಲ
ಸಹ
ಕಡಿಮೆಯಾಗಲಿದೆ.
Recommended Video