ದ.ಕನ್ನಡ ಭಾರಿ ಮಳೆ: ಆಗಸ್ಟ್ 11ರಂದು ಶಾಲಾ-ಕಾಲೇಜು ರಜೆ
ದಕ್ಷಿಣ ಕನ್ನಡ, ಆಗಸ್ಟ್ 10: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರ (ಆಗಸ್ಟ್ 10) ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಕಾಲುವೆಗಳು ತುಂಬಿ ಹರಿಯುತ್ತಿವೆ, ರಸ್ತೆಗಳೂ ಸಹ ತುಂಬಿವೆ ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ, ಮಂಗ್ಳೂರಲ್ಲಿ ಹೆಚ್ಚಿದ ಆತಂಕ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಪ್ರಕಟಿಸಿದ್ದು, ಮಳೆಯಿಂದ ಈ ವರೆಗೆ ಯಾವುದೇ ಹಾನಿಯಾಗಿಲ್ಲ ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತಳೆಯಲಾಗಿದೆ ಎಂದಿದ್ದಾರೆ.
ವೈರಲ್ ವಿಡಿಯೋ: ಭೀತಿ ಹುಟ್ಟಿಸುವ ಕೇರಳ ಪ್ರವಾಹದ ರೌದ್ರಾವತಾರ!
ಶನಿವಾರ ಅರ್ಧ ದಿನ ಶಾಲಾ ಕಾಲೇಜುಗಳು ಇರುವ ಕಾರಣ ರಜೆ ಘೋಷಣೆಯಿಂದ ಹೆಚ್ಚಿನ ವ್ಯತ್ಯಾಸವೇನೂ ಆಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Comments
karwar district news rain school college holiday dakshin kannada ಕಾರವಾರ ಜಿಲ್ಲಾಸುದ್ದಿ ಮಳೆ ಶಾಲೆ ಕಾಲೇಜು ರಜೆ ದಕ್ಷಿಣ ಕನ್ನಡ
English summary
School will be closed on August 11 in Dakshin Kannada district due to heavy rain. Dakshin Kannada DC Shashikanth Senthil passed the order.
Story first published: Friday, August 10, 2018, 20:08 [IST]