ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ; ಬಸ್ಸುಗಳ ಕೊರತೆ, ಪ್ರಯಾಣಿಕರಿಗೆ ಬೈಎಲೆಕ್ಷನ್ ಬಿಸಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಡಿಸೆಂಬರ್ 5: ಯಲ್ಲಾಪುರ ಮುಂಡಗೋಡ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಹಲವೆಡೆ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು. ಸರ್ಕಾರಿ ಬಸ್‌ಗಳು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು ಗ್ರಾಮೀಣ ಹಾಗೂ ವಿವಿಧ ಮಾರ್ಗಗಳಿಗೆ ತೆರಳಬೇಕಾಗಿದ್ದ ಬಸ್‌ಗಳಿಗೆ ಕೊರತೆಯುಂಟಾಗಿದೆ.

ಇದರಿಂದಾಗಿ ಗಂಟೆಗಳ ವರೆಗೆ ಕಾಯುತ್ತಾ ನಿಂತರೂ ಸೂಕ್ತ ಸಮಯಕ್ಕೆ ಬಸ್‌ಗಳು ಬಾರದೇ ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಯಿತು.

ಯಲ್ಲಾಪುರ ಕ್ಷೇತ್ರ ಮತದಾನ: ವಿಕಲಚೇತನ ಮತದಾರರ ಟ್ರ್ಯಾಕಿಂಗ್ಯಲ್ಲಾಪುರ ಕ್ಷೇತ್ರ ಮತದಾನ: ವಿಕಲಚೇತನ ಮತದಾರರ ಟ್ರ್ಯಾಕಿಂಗ್

ನೆರೆ ಜಿಲ್ಲೆ ಹಾವೇರಿಯಲ್ಲೂ ಉಪಚುನಾವಣೆ ಇರುವ ಹಿನ್ನಲೆ ಶಿರಸಿ ಹಾವೇರಿ ಮಾರ್ಗಮಧ್ಯೆ ಸಂಚರಿಸುವ ಹಾವೇರಿ ವಿಭಾಗದ ಬಸ್ಸುಗಳ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಎರಡು ಗಂಟೆಗಳಿಗೊಮ್ಮೆ ಬರುವ ಬಸ್ಸು ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದರೂ ಅನಿವಾರ್ಯವಾಗಿ ಜನರು ತುಂಬಿದ ಬಸ್‌ಗಳಲ್ಲಿ ನಿಂತುಕೊಂಡೇ ಪ್ರಯಾಣ ಬೆಳೆಸುವಂತಾಗಿತ್ತು.

Passengers Face Bus Problem Due To By Election In Yellapur

ಇನ್ನೂ ಕೆಲವು ಮಂದಿ ಖಾಸಗಿ ವಾಹನಗಳಿಗೆ ಕೈತೋರಿಸಿಕೊಂಡು ತಾವು ಸೇರಬೇಕಾದ ಸ್ಥಳಗಳಿಗೆ ಹರಸಾಹಸಪಟ್ಟು ತೆರಳಿದ್ದು ಚುನಾವಣೆಯ ಬಿಸಿ ಪ್ರಯಾಣಿಕರಿಗೆ ತಟ್ಟುವಂತಾಯಿತು.

English summary
Government buses have been deployed for by election duty in yellapur, so the passengers have faced the problem to travel to various routes
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X