ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ: ಆರ್.ವಿ.ದೇಶಪಾಂಡೆ
ಕಾರವಾರ, ಡಿಸೆಂಬರ್ 12: ಉತ್ತರ ಕನ್ನಡಜಿಲ್ಲೆ ಉಸ್ತುವಾರಿ ಸಚಿವ ಕಾಂಗ್ರೆಸ್ನ ಆರ್.ವಿ.ದೇಶಪಾಂಡೆ ಅವರು ಪ್ರತಿಭಟನಾ ನಿರತ ಹಿಂದೂ ಕಾರ್ಯಕರ್ತರ ಮೇಲೆ ಹರಿಹಾಯ್ದಿದ್ದಾರೆ.
ಕುಮಟಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ' ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು
ಬಂದ್
ಹೋದ್ಮೇಲೆ
ಗಲಾಟೆ
ಆಗ್ತಿದೆ:
ಸಿದ್ದರಾಮಯ್ಯ
ಅಮಾಯಕರ
ರಕ್ಷಣೆ
ಸರ್ಕಾರದ
ಜವಾಬ್ದಾರಿ.
ಶಾಂತಿ
ಭಂಗ
ತರುವ
ಯಾರೇ
ಆಗಲಿ,
ಎಷ್ಟೇ
ದೊಡ್ಡ
ವ್ಯಕ್ತಿಯಾದರೂ
ಪೊಲೀಸರು
ಕಾನೂನು
ಪ್ರಕಾರ
ಕ್ರಮ
ಕೈಗೊಳ್ಳಲಿದ್ದಾರೆ.
ಸಾರ್ವಜನಿಕರು
ಧೈರ್ಯಗೆಡಬಾರದು.
ನಾಗರೀಕರ
ರಕ್ಷಣೆ
ಸರ್ಕಾರದ
ಹೊಣೆ,
ತನ್ನ
ಹೊಣೆಯನ್ನು
ಸರ್ಕಾರ
ಪರಿಣಾಮಕಾರಿಯಾಗಿ
ನಿಭಾಯಿಸಲಿದೆ
ಎಂದರು.
ಹೊನ್ನಾವರದಲ್ಲಿ ಇತ್ತೀಚೆಗೆ ಮೃತಪಟ್ಟ ವ್ಯಕ್ತಿಯ ಮರಣದ ಮೂಲ ಕಾರಣ ಈವರೆಗೆ ತಿಳಿದಿಲ್ಲ. ಆದರೆ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರಿಗೆ ಪ್ರಶ್ನೋತ್ತರ ಮೂಲಕ ವರದಿ ಪಡೆದಿದ್ದಾರೆ ಅಷ್ಟೆ, ಅದು ಅಂತಿಮ ವರದಿಯಲ್ಲ ಎಂದು ಅವರು ಮಾಹಿತಿ ನೀಡಿದರು.
ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ತಪ್ಪು ಸಂದೇಶಗಳನ್ನು ಹಂಚಿಕೊಳ್ಳುವ ಮೂಲಕ ಶಾಂತಿಗೆ ಭಂಗ ತರುವ ಕಾರ್ಯ ಮಾಡುತ್ತಿದ್ದಾರೆ, ಹೀಗೆ ಮಾಡುತ್ತಿರುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಕುಮಟಾದಲ್ಲಿ ಈ ರೀತಿಯ ಘಟನೆ ನಡೆದದ್ದಂತೂ ಇತಿಹಾಸದಲ್ಲೆ ಮೊದಲು, ಆದರೆ ಸಾರ್ವಜನಿಕರು ವಾತಾವರಣ ತಿಳಿಗೊಳಿಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.