ಕಾರವಾರದ ಅಭಿಷೇಕ್ ಕ್ರೂಸ್ ನಲ್ಲಿ ಸುರಕ್ಷಿತ
ಕಾರವಾರ, ಫೆಬ್ರವರಿ 08: ಡೈಮಂಡ್ ಪ್ರಿನ್ಸಸ್ ಕ್ರೂಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರವಾರದ ಯುವಕ ಅಭಿಷೇಕ್ ಸುರಕ್ಷಿತವಾಗಿದ್ದಾರೆ ಎಂದು ಭಾರತದ ಜಪಾನ್ ರಾಯಭಾರಿ ಕಚೇರಿಯಿಂದ ಆತನ ಕುಟುಂಬಕ್ಕೆ ಶನಿವಾರ ಸಂಜೆಯ ಬಳಿಕ ಮಾಹಿತಿ ನೀಡಿದೆ.
ಜಪಾನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ಜಪಾನ್ ಸರ್ಕಾರದ ಆರೋಗ್ಯ ಸಚಿವಾಲಯ ಹಾಗೂ ಕಾರ್ಮಿಕ ಕಲ್ಯಾಣ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಹಾರ- ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಕ್ರೂಸ್ ನಲ್ಲಿ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದೆ.
ಕೊರೊನಾ ವೈರಸ್ ಭೀತಿ: ಸಂಕಷ್ಟದಲ್ಲಿ ಸಿಲುಕಿದ ಕಾರವಾರದ ಯುವಕ
ಭಾರತೀಯ ನೌಕರರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಿರುವುದಾಗಿ ಭಾರತೀಯ ಕುಟುಂಬಗಳಿಗೆ ಭಾರತೀಯ ರಾಯಭಾರಿ ಕಚೇರಿಯಿಂದ ಮಾಹಿತಿ ರವಾನೆಯಾಗಿದೆ ಎಂದು ತಿಳಿದು ಬಂದಿದೆ.
Comments
English summary
Abhishek, a young man working in a Diamond Princess cruise is safe informed Japan's embassy in India on Saturday evening
Story first published: Saturday, February 8, 2020, 18:26 [IST]