ಕಾರವಾರ ದೋಣಿ ದುರಂತ : ಸರ್ಕಾರದಿಂದ ಪರಿಹಾರ ಘೋಷಣೆ
ಕಾರವಾರ, ಜನವರಿ 21 : ಕಾರವಾರ ಸಮೀಪದ ಕೂರ್ಮಗಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಈ ದುರಂತದಲ್ಲಿ 8 ಜನರು ಮೃತಪಟ್ಟಿದ್ದಾರೆ.
ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಸೋಮವಾರ ದುರಂತದಲ್ಲಿ ರಕ್ಷಣೆ ಮಾಡಿದವರನ್ನು ಭೇಟಿ ಮಾಡಿದರು. ಕಾರವಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
ಕಾರವಾರ: ಭೀಕರ ದೋಣಿ ದುರಂತ 9 ಮಂದಿ ಸಾವು
ಬಳಿಕ
ಮಾಧ್ಯಮಗಳ
ಜೊತೆ
ಮಾತನಾಡಿದ
ಸಚಿವರು,
'8
ಜನರು
ದುರಂತದಲ್ಲಿ
ಮೃತರಾಗಿದ್ದಾರೆ.
ಮೃತರ
ಕುಟುಂಬಕ್ಕೆ
ತಲಾ
2
ಲಕ್ಷ
ಪರಿಹಾರ
ನೀಡಲಾಗುತ್ತದೆ.
ಏಳು
ಜನರನ್ನು
ರಕ್ಷಣೆ
ಮಾಡಲಾಗಿದೆ'
ಎಂದರು.
'ನಾಪತ್ತೆಯಾದವರ
ಪತ್ತೆಗೆ
ಕಾರ್ಯಾಚರಣೆ
ನಡೆಸಲಾಗಿದೆ.
ದುರಂತದ
ಬಗ್ಗೆ
ತನಿಖೆ
ನಡೆಸಲು
ಜಿಲ್ಲಾಧಿಕಾರಿಗಳಿಗೆ
ಸೂಚಿಸಲಾಗಿದೆ.
ಮೃತರ
ಕುಟುಂಬದವರಿಗೆ
ಮೃತದೇಹ
ಕೊಂಡೊಯ್ಯಲು
ಎಲ್ಲ
ರೀತಿಯ
ಅನುಕೂಲ
ಕಲ್ಪಿಸಲು
ಸೂಚಿಸಲಾಗಿದೆ'
ಎಂದು
ಹೇಳಿದರು.
'ನಾಪತ್ತೆಯಾದವರನ್ನು ಹುಡುಕಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ತಟ ರಕ್ಷಣಾ ಪಡೆ, ಕರಾವಳಿ ರಕ್ಷಣಾ ಪಡೆ, ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ' ಎಂದು ಸಚಿವರು ಮಾಹಿತಿ ನೀಡಿದರು.
ಕಾರವಾರ: ದೋಣಿ ಮುಳುಗಿ 9 ಸಾವು, ಸಂಖ್ಯೆ ಹೆಚ್ಚಾಗುವ ಭೀತಿ
'ಜಾತ್ರೆ ಪ್ರತಿ ವರ್ಷ ನಡೆಯುವ ಕಾರ್ಯಕ್ರಮವಾಗಿದೆ. ದೇವರ ದರ್ಶನ ಪಡೆದು ವಾಪಸು ಬರುವಾಗ ಈ ಘಟನೆ ಸಂಭವಿಸಿದೆ. ಇದೊಂದು ಆಕಸ್ಮಿಕ ಘಟನೆಯಾಗಿದೆ. ಘಟನೆಯಲ್ಲಿ ಪಾರಾಗಿರುವ ಬಾಲಕ ಗಣೇಶನ ವಿದ್ಯಾಭ್ಯಾಸ ಮತ್ತು ಇತರ ವಿಷಯಗಳಿಗೆ ಗಮನ ಹರಿಸಲಾಗುವುದು' ಎಂದು ಹೇಳಿದರು.