ಚುನಾವಣೆಗೂ ಒಂದು ದಿನ ಮುನ್ನ ವಿವಿಧೆಡೆ IT, EC ದಾಳಿ
ಅಂಕೋಲಾ, ಮೇ 11: ಕಾರವಾರ ಕಾಂಗ್ರೆಸ್ ಅಭ್ಯರ್ಥಿ ಆಪ್ತ ಮಂಗಲ್ ದಾಸ್ ಎಂಬುವವರ ಮೇಲೆ ಇಂದು(ಮೇ 11) ಬೆಳಿಗ್ಗೆ ಐಟಿ(ಆದಾಯ ತೆರಿಗೆ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೇ 12 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಐಟಿ ದಾಳಿ ನಡೆಯುತ್ತಿದ್ದು, ಇದೀಗ ಅಂಕೋಲಾದ ಆವರ್ಸಾ ಎಂಬಲ್ಲಿ ಐಟಿ ದಾಳಿ ನಡೆದಿದೆ.
ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಎದ್ದಲಬೊಮ್ಮನಹಟ್ಟಿಯಲ್ಲೂ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದು, ಸ್ಕಾರ್ಪಿಯೋ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 2 ಕೋಟಿಗೂ ಅಧಿಕ ಹಣವನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
#Karnataka: Income Tax Department conducted raids at house of Congress candidate Satish Sail's close associate Mangaldas Kamat in Ankola. pic.twitter.com/mqeMPpyDNo
— ANI (@ANI) May 11, 2018
ಗಂಗಾವತಿ ಬಿಜೆಪಿ ಅಭ್ಯರ್ಥಿ ಸಹೋದರನಿಗೆ ಸೇರಿದ ಖಾಸಗಿ ಹೊಟೇಲ್ ಮೇಲೂ ನಿನ್ನೆ ರಾತ್ರಿ (ಮೇ 10) ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ.