ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಮಳೆ; ರದ್ದಾಯ್ತು ಸಿಎಂ ಯಡಿಯೂರಪ್ಪ ಕಾರವಾರ ಪ್ರವಾಸ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಆಗಸ್ಟ್ 31: ಮಳೆಯಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಂದಿನ ಕಾರವಾರ ಪ್ರವಾಸ ರದ್ದಾಗಿದೆ.

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಮತ್ತೆ ವರುಣನ ಆರ್ಭಟಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಾದ್ಯಂತ ಮತ್ತೆ ವರುಣನ ಆರ್ಭಟ

ಮಳೆಯ ಕಾರಣದಿಂದಾಗಿ ಹೆಲಿಕಾಪ್ಟರ್ ಇಳಿಯಲು ಅನನುಕೂಲ ವಾತಾವರಣವಿರುವುದರಿಮದ ಸಿಎಂ ಶಿವಮೊಗ್ಗದಿಂದ ನೇರವಾಗಿ ಹಾವೇರಿಗೆ ಪ್ರವಾಸ ಬೆಳೆಸಲಿದ್ದಾರೆ. ಕಾರವಾರಕ್ಕೆ ಸಿಎಂ ಬರುತ್ತಾರೆ ಎಂದು ಪೊಲೀಸರು, ಜಿಲ್ಲಾಡಳಿತ ಎಲ್ಲ ವ್ಯವಸ್ಥೆಗಳನ್ನು ಮಾಡಿತ್ತು. ಪಕ್ಷದ ಕಾರ್ಯಕರ್ತರು, ಮುಖಂಡರು ಕೂಡ ಬೆಳಿಗ್ಗಿನಿಂದ ಕಾದು ಕುಳಿತಿದ್ದರು. ಕೊನೆಗೂ ಸಿಎಂ ಬರದೇ ಹಾವೇರಿಗೆ ತೆರಳಿರುವುದರಿಂದ ಎಲ್ಲರಿಗೂ ನಿರಾಸೆ ಉಂಟು ಮಾಡಿದೆ.

CM Visit To Karwar Cancelled Due To Rain

 ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ ಗೌರಿ-ಗಣೇಶ ಹಬ್ಬಕ್ಕೆ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ

ಈ ಮೊದಲು ಕುಮಟಾ, ನಂತರ ಕಾರವಾರ ಎಂದು ಸಿಎಂ ಪ್ರವಾಸದ ವೇಳಾಪಟ್ಟಿ ನಿಗದಿಯಾಗಿತ್ತು. ಈ‌ ಪಟ್ಟಿ ಕೂಡ ಕೊನೆ ಕ್ಷಣದಲ್ಲಿ ಬದಲಾಗಿ ಕಾರವಾರ ಪ್ರವಾಸವನ್ನು ಮಾತ್ರ ಇಡಲಾಗಿತ್ತು. ಇದೀಗ ಈ ಪ್ರವಾಸವೂ ರದ್ದುಗೊಂಡಿದೆ. ಆದರೆ, ಈವರೆಗೂ ಅಧಿಕೃತವಾಗಿ ಪ್ರವಾಸ ರದ್ದಾದ ಬಗ್ಗೆ ಘೋಷಣೆ ಆಗಿಲ್ಲ.

English summary
Chief Minister BS Yeddyurappa tour to Karwar cancelled due to rain. CM traveled to Haveri directly from Shimoga because of the inconvenience of the helicopter landing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X