ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಸಾವನ್ನಪ್ಪಿದ ಬಾಲಕ

By ಕಾರವಾರ ಪ್ರತಿನಿಧಿ
|
Google Oneindia Kannada News

Recommended Video

ಕಾರವಾರದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೂ ಮುಂಚೆ ಸಾವನ್ನಪ್ಪಿದ ಬಾಲಕ | Oneindia Kannada

ಕಾರವಾರ, ಏಪ್ರಿಲ್ 30 : ಶನಿವಾರ ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ, ನದಿಯ ಆಳದಲ್ಲಿ ಬಿದ್ದು ಮೃತಪಟ್ಟಿದ್ದ ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗತ್ತಿಯ ದೇವಪ್ಪ ಬಸವಂತಪ್ಪ ಪೂಜಾರಿ (17) ಎಂಬಾತನ ಮೃತದೇಹ ಭಾನುವಾರ ತಾಲೂಕಿನ ಕುರ್ನಪೇಟ ಗ್ರಾಮದ ಅರಣ್ಯ ಇಲಾಖೆ ವಸತಿ ಗೃಹದ ಬಳಿಯ ಕಾಳಿ ನದಿಯಲ್ಲಿ ಪತ್ತೆಯಾಗಿ‌ದೆ.

ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ ದ್ವಿತೀಯ ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

ಶಾಲೆಗೆ ರಜೆಯಿದ್ದ ಕಾರಣ ಇಲ್ಲಿನ ತಮ್ಮ ಸಂಬಂಧಿಕರ ಮನೆಗೆ ಈತ ಬಂದು ವಾಸವಿದ್ದ. ಶನಿವಾರ ತನ್ನಿಬ್ಬರು ಸ್ನೇಹಿತರೊಂದಿಗೆ ಬಂದರು ರಸ್ತೆಯಲ್ಲಿರುವ ಅರಣ್ಯ ಇಲಾಖೆ ವಸತಿ ಗೃಹಕ್ಕೆ ಸಮೀಪದಲ್ಲಿ ಕಾಳಿನದಿಗೆ ಸ್ನಾನಕ್ಕೆಂದು ತೆರಳಿದ್ದ. ಈ ಸಂದರ್ಭದಲ್ಲಿ ನದಿಯ ಪಕ್ಕದಲ್ಲಿದ್ದ ಮರವನ್ನೇರಿ ಟೊಂಗೆಯಿಂದ ನೀರಿಗೆ ಜಿಗಿದಿದ್ದು, ನೀರಿನ ಆಳ ತಿಳಿಯದೆ ಬಿದ್ದಿದ್ದರಿಂದ ಆಳದಲ್ಲಿ ಸಿಲುಕಿ ಸಾವನ್ನಪ್ಪಿದ್ದಾನೆ.

ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರುಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು

ಮೃತದೇಹಕ್ಕೆ ಶೋಧ ಕಾರ್ಯ ನಡೆಸಿದ್ದ ಮಲ್ಲಾಪುರ ಠಾಣೆ ಪೊಲೀಸರು ರವಿವಾರ ಶವವನ್ನು ಪತ್ತೆಹಚ್ಚಿದ್ದು, ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಫಲಿತಾಂಶಕ್ಕೂ ಮುನ್ನವೇ ಇಹಲೋಕ ತ್ಯಜಿಸಿದ ಮೃತ ಬಾಲಕ ದೇವಪ್ಪ ಈ ಬಾರಿಯ ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದಿದ್ದ.

boy dies after falling into a river

ಇನ್ನೊಂದು ವಾರದಲ್ಲಿ ಬರುವ ಫಲಿತಾಂಶಕ್ಕೆ ಕಾಯುತ್ತಿದ್ದ ಈತ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸಂಬಂಧಿಕರ ಮನೆಗೆ ಬಂದು ಉಳಿದುಕೊಂಡಿದ್ದ. ಹೊಟ್ಟೆಪಾಡಿಗೆ ಕೂಲಿ ಮಾಡುತ್ತಿದ್ದ ಈತ ಪೇಂಟಿಂಗ್ ಕೆಲಸಕ್ಕೆ ತೆರಳುತ್ತಿದ್ದ ಎನ್ನಲಾಗಿದೆ. ತನ್ನ ಊರಿನಿಂದ ನೂರಾರು ಕಿ.ಮೀ.ದೂರಕ್ಕೆ ಬಂದು ಭವಿಷ್ಯದ ಕನಸು ಕಾಣುತ್ತಿದ್ದ ಬಾಲಕ ಕಣ್ಮುಚ್ಚಿದ್ದಾನೆ. ಪರೀಕ್ಷೆ ಬರೆದವನು ಫಲಿತಾಂಶವನ್ನೂ ಕಾಣದೆ ಪರಲೋಕಕ್ಕೆ ತೆರಳಿದ್ದಾನೆ.

English summary
Basavanthappa Poojary went to river for swimming. But he died fell into depths of the river. He was waiting for sslc result.His native place was Malagatti in Kuttigi taluk in Koppal district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X