ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಳಿಯನದ್ದಾಯ್ತು, ಈಗ ಮಾವನ ಸರದಿ; ಕುಮಾರ್ ಬಂಗಾರಪ್ಪ ಬಗ್ಗೆ ಭೀಮಣ್ಣ ನಾಯ್ಕ ಕಿಡಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಯಲ್ಲಾಪುರ, ನವೆಂಬರ್ 20: 'ತಂದೆ- ತಾಯಿ ಬದುಕಿದ್ದಾಗ ಕುಮಾರ್ ಬಂಗಾರಪ್ಪ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದರು ಎನ್ನುವುದು ಜನರಿಗೆ ಗೊತ್ತು. ಅವರು ತನ್ನ ಆತ್ಮ ಸಾಕ್ಷಿಯನ್ನು ನೋಡಿಕೊಂಡು ಮಾತನಾಡಲಿ' ಎಂದು ಬಿಜೆಪಿಯ ರಾಜ್ಯ ಮುಖಂಡ, ಸೋದರ ಅಳಿಯನೂ ಆದ ಕುಮಾರ್ ಬಂಗಾರಪ್ಪನವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಕಿಡಿಕಾರಿದರು.

"ಡಮ್ಮಿ ಕ್ಯಾಂಡಿಡೇಟ್" ಎಂದು ಮಾವನ ಇದಿರಾಗಿ ಪ್ರಚಾರಕ್ಕಿಳಿದ ಕುಮಾರ್ ಬಂಗಾರಪ್ಪ

ಪಟ್ಟಣದ ರವೀಂದ್ರನಗರದಲ್ಲಿ ಮಂಗಳವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 'ಬಂಗಾರಪ್ಪ ಅವರ ಕೊನೆಯುಸಿರು ಇರುವವರೆಗೆ ಮಧು ಬಂಗಾರಪ್ಪ ಹಾಗೂ ನಾನು ಜೊತೆಯಲ್ಲಿದ್ದೆವು. ನನ್ನ ಬಗ್ಗೆ ಕುಮಾರ್ ಬಂಗಾರಪ್ಪ ಅವರಿಗೆ ಮಾತನಾಡುವ ನೈತಿಕತೆ ಇಲ್ಲ. ಅವರಂತೆ ಪಕ್ಷ ಬದಲಿಸುವುದು, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗುವ ಕೆಲಸವನ್ನು ನಾನು ಮಾಡಿಲ್ಲ. ನನ್ನ ಬಳಿ ಹಣ ಇಲ್ಲ. ನಾನು ಕೃಷಿಕ. ನಾನು ಇದುವರೆಗೂ ಯಾವುದೇ ಸರ್ಕಾರಿ ಹುದ್ದೆಗೆ ಹೋಗಿ ಕಾಂಟ್ರಾಕ್ಟ್ ಮಾಡಿ ಹಣ ಮಾಡಿಲ್ಲ' ಎಂದು ಹರಿಹಾಯ್ದರು.

Bhimanna Naik Speaks Against Kumar Bangarappa In Yellapur

ಸೋದರ ಮಾವನ ವಿರುದ್ದವೇ ಕುಮಾರ್ ಬಂಗಾರಪ್ಪ ಭರ್ಜರಿ ಪ್ರಚಾರಸೋದರ ಮಾವನ ವಿರುದ್ದವೇ ಕುಮಾರ್ ಬಂಗಾರಪ್ಪ ಭರ್ಜರಿ ಪ್ರಚಾರ

ಸೋಮವಾರದ ಬಿಜೆಪಿ ಸಮಾವೇಶದಲ್ಲಿ ಭೀಮಣ್ಣ ನಾಯ್ಕ ವಿರುದ್ಧ ಕುಮಾರ್ ಬಂಗಾರಪ್ಪ ಕಿಡಿಕಾರಿದ್ದರು. ಭೀಮಣ್ಣ ಡಮ್ಮಿ ಕ್ಯಾಂಡಿಡೇಟ್ ಎಂದು ವ್ಯಂಗ್ಯವಾಡಿದ್ದರು.

English summary
"People know how well Kumar Bangarappa cared when his father and mother alive" Congress candidate Bhimanna Naik blamed Kumar Bangarappa in yellapur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X