ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ಕಿರವತ್ತಿ ವಲಯ ಅರಣ್ಯಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಜುಲೈ.20: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇರೆಗೆ ಅರಣ್ಯಾಧಿಕಾರಿಯ ಮನೆ ಮತ್ತು ಕಚೇರಿ ಸೇರಿ ಒಟ್ಟು ನಾಲ್ಕು ಕಡೆ ಎಸಿಬಿ ದಾಳಿ ನಡೆದಿದೆ.

ಯಲ್ಲಾಪುರದ ಕಿರವತ್ತಿ ವಲಯ ಅರಣ್ಯಾಧಿಕಾರಿ ಚಂದ್ರಕಾಂತ ನಾಯ್ಕ ಅವರ ಅಂಕೋಲಾದ ಸಕಲಬೇಣದ ಮನೆ, ಕಾರವಾರ ಕಾಜುಬಾಗದ ಮಗಳ ಮನೆ, ಯಲ್ಲಾಪುರದ ಕಿರವತ್ತಿಯಲ್ಲಿನ ಕಚೇರಿ ಹಾಗೂ ಮಾಜಾಳಿಯಲ್ಲಿಯೂ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ದಾಳಿಶಶಿ ತರೂರ್ ಕಚೇರಿ ಮೇಲೆ ಬಿಜೆಪಿ ಯುವ ಮೋರ್ಚಾ ದಾಳಿ

ಎಸಿಬಿ ಮಂಗಳೂರು ಎಸ್ಪಿ ಸುಧೀರ ಹೆಗ್ಡೆ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ACB attacked the Forest officer house

ಮನೆಯಲ್ಲಿದ್ದ ಅಪಾರ ಕಾಗದಪತ್ರಗಳು, ದಾಖಲೆಗಳು, ಒಡವೆಗಳ ಪರಿಶೀಲನೆ ಕಾರ್ಯ ಬೆಳಗ್ಗಿನಿಂದ ಮುಂದುವರೆದಿದೆ.

ಮನೆಯಲ್ಲಿರುವ ಒಡವೆ, ಆಸ್ತಿ ವಿವರ, ಬ್ಯಾಂಕಿನಲ್ಲಿರುವ ಒಡವೆ, ಹಣ ಇನ್ನಿತರ ಎಲ್ಲಾ ದಾಖಲೆಗಳ ಆಮೂಲಾಗ್ರ ಪರಿಶೀಲನೆ ನಡೆಸಲಾಗುತ್ತಿದೆ.

English summary
ACB attacked the Forest officer house. Attack was led by ACB Mangalore DySP Sudheera Hegde.Records and jewelry inspection work continues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X