ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ಪಾಲಾಗಿದ್ದ ಬಾಲಕ ಶವವಾಗಿ ಪತ್ತೆ
ಕಾರವಾರ, ಅಕ್ಟೋಬರ್ 26: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆ ಪಾಲಾಗಿದ್ದ 15 ವರ್ಷದ ಬಾಲಕ ಎರಡು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ.
ದಾಂಡೇಲಿಯ ವಿನಾಯಕ ನಗರದಲ್ಲಿ ಕಾಳಿ ನದಿಯಲ್ಲಿ ಭಾನುವಾರ ಮೀನು ಹಿಡಿಯಲು ತೆರಳಿದ್ದ ಬಾಲಕ ಮೊಹಿನ್ ಮೆಹಬೂಬ್ ಅಲಿ(15) ಮೃತ ದುರ್ದೈವಿಯಾಗಿದ್ದು, ಮೀನು ಹಿಡಿಯುವಾಗ ಮೊಸಳೆ ದಾಳಿ ಮಾಡಿ ಬಾಲಕನನ್ನು ಹೊತ್ತೊಯ್ದಿತ್ತು.
ದಾಂಡೇಲಿಯ ಕಾಳಿ ನದಿ ದಂಡೆಯಿಂದ ಬಾಲಕನ ಎಳೆದೊಯ್ದ ಮೊಸಳೆ
ಘಟನೆ
ವಿವರ:
ದಾಂಡೇಲಿ
ನಗರದ
ಹಳಿಯಾಳ
ರಸ್ತೆಯ
ಅಲೈಡ್
ಪ್ರದೇಶದ
ನಿವಾಸಿಯಾಗಿರುವ
ಮೆಹಮೂದ್
ಅಲಿಮಿಯಾ
ಗುಲ್ಬರ್ಗ
ಎಂಬುವವರ
ಮಗನಾದ
15
ವರ್ಷದ
ಬಾಲಕ
ಮೊಹಿನ್
ಮೆಹಮೂದ್
ಅಲಿ
ಮಿಯಾ
ಗುಲ್ಬರ್ಗ
ಎಂಬತಾನನ್ನು
ಮೊಸಳೆ
ಎಳೆದೊಯ್ದುಕೊಂಡು
ಹೋದ
ಘಟನೆ
ನಡೆದಿತ್ತು.
ಈ ಘಟನೆ ಅಗುತ್ತಿದ್ದಂತೆಯೇ ಕಾಡ್ಗಿಚ್ಚಿನಂತೆ ಹರಡಿತ್ತು. ನದಿಯ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ಘಟನೆ ನಡೆದ ತಕ್ಷಣವೆ ಅಲ್ಲೆ ಹತ್ತಿರದ ನಿವಾಸಿಯಾಗಿರುವ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದು ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆಯ ಪಿಎಸ್ಐ ಐ.ಆರ್. ಗಡ್ಡೇಕರ ಹಾಗೂ ಪೊಲೀಸ್ ಸಿಬ್ಬಂದಿಗಳು, ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದರು.
ಸ್ಥಳೀಯರು ಎರಡ್ಮೂರು ತೆಪ್ಪದ ಮೂಲಕ ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಇತ್ತ ಜಂಗಲ್ ಲಾಡ್ಜಸ್ ಹಾಗೂ ಗಣೇಶಗುಡಿ ರ್ಯಾಪ್ಟಿಂಗಿನವರಿಗೆ ಮಾಹಿತಿ ನೀಡಿ ರ್ಯಾಪ್ಟ್ ಜೊತೆಗೆ ಸ್ಥಳಕ್ಕೆ ಕರೆಸಿ, ಅವರಿಂದಲೂ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಪ್ರವಾಸೋದ್ಯಮಿಗಳಾದ ಸ್ಟ್ಯಾನ್ಲಿ, ರವಿ ನಾಯಕ ಮೊದಲಾದವರ ತಂಡ ರ್ಯಾಪ್ಟ್ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಎರಡು ದಿನಗಳ ಕಾರ್ಯಾಚರಣೆ ನಂತರ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಘಟನೆ ನಡೆದ ದಿನದಂದು ಸ್ಥಳದಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ, ನಗರಸಭಾ ಸದಸ್ಯರುಗಳಾದ ಪ್ರೀತಿ ನಾಯರ್, ದಶರಥ ಬಂಡಿವಡ್ಡರ ಹಾಗೂ ನಗರದ ವಿವಿಧ ಸಂಘಟನೆಗಳ ಮುಖಂಡರುಗಳು ಮೊಕ್ಕಾಂ ಹೂಡಿದ್ದರು. ಗಣೇಶಗುಡಿ ಕೆಪಿಸಿಯವರಿಗೆ ಮಾಹಿತಿ ನೀಡಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಸಂಜೆ ನಾಲ್ಕುವರೆ ಗಂಟೆ ಸುಮಾರಿಗೆ ಎರಡು ಸಲ ಬಾಲಕನನ್ನು ಮೇಲಕ್ಕೆತ್ತಿ ನೀರಿನ ಕೆಳಗಡೆ ಮೊಸಳೆ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ನಂತರ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ
ಮೊದಲ
ಪ್ರಕರಣ
ಮೊಸಳೆ
ಬಾಲಕನನ್ನು
ಎಳೆದುಕೊಂಡು
ಹೋಗಿರುವುದು
ದಾಂಡೇಲಿ
ನಗರದಲ್ಲಿ
ಇದು
ಮೊದಲ
ಪ್ರಕರಣವಾಗಿ
ದಾಖಲಾಗಿದೆ.
ಮಾಹಿತಿಯ
ಪ್ರಕಾರ
ಮೊಸಳೆ
ಈವರೆಗೆ
ನರಬಲಿಯನ್ನು
ಪಡೆದುಕೊಂಡಿರಲಿಲ್ಲ.
ಮೊಸಳೆ
ಜೀವಂತವಾಗಿ
ಯಾವುದನ್ನು
ತಿನ್ನುವುದಿಲ್ಲ.
ಕೊಳೆತ
ನಂತರದಲ್ಲಿ
ತಿನ್ನುವ
ಸಾಧ್ಯತೆಯಿದೆ
ಎಂಬ
ಮಾತುಗಳು
ಕೇಳಿ
ಬರಲಾರಂಭಿಸಿದೆ.
ಹಾಗಾಗಿ
ಬಾಲಕನನ್ನು
ಅವಿತಿಟ್ಟರಬಹುದೆಂದು
ಶಂಕಿಸಲಾಗಿತ್ತು.
ಆದರೆ
ಮೊಸಳೆ
ತಿನ್ನದೆ
ಸಾಯಿಸಿರುವ
ಸಾಧ್ಯತೆ
ಇದೆ.
ಮುಂದಿನ
ದಿನಗಳಲ್ಲಿ
ಇಂತಹ
ಪ್ರಕರಣಗಳು
ಮರುಕಳಿಸದಂತೆ
ಮುನ್ನೆಚ್ಚರಿಕೆ
ಈಗಾಗಲೆ
ನಗರಸಭೆಯಿಂದ
ಬಹಳಷ್ಟು
ಬಾರಿ
ಇಲ್ಲಿ
ಸ್ವಚ್ಛತಾ
ಕಾರ್ಯವನ್ನು
ಕೈಗೊಳ್ಳಲಾಗಿದೆ.
ಮುಂದಿನ
ದಿನಗಳಲ್ಲಿ
ಇಂತಹ
ಪ್ರಕರಣ
ಮರುಕಳಿಸದಂತೆ
ಅರಣ್ಯ
ಇಲಾಖೆಯವರು
ಹೆಚ್ಚಿನ
ಮುತುವರ್ಜಿ
ವಹಿಸಿ
ಅಗತ್ಯ
ಕ್ರಮವನ್ನು
ಕೈಗೊಳ್ಳಬೇಕೆಂದು
ನಗರಸಭೆಯ
ಅಧ್ಯಕ್ಷೆ
ಸರಸ್ವತಿ
ರಜಪೂತ್
ಮಾಧ್ಯಮಕ್ಕೆ
ತಿಳಿಸಿದ್ದಾರೆ.
Recommended Video