ಬೆಂಗಳೂರು-ಕರಾವಳಿ ನಡುವೆ ಹೊಸ ರೈಲು ಘೋಷಣೆ
ಬೆಂಗಳೂರು, ಫೆಬ್ರವರಿ 11 : ಕರ್ನಾಟಕದ ಬೆಂಗಳೂರು-ಕರಾವಳಿ ನಡುವೆ ಹೊಸ ರೈಲನ್ನು ಘೋಷಣೆ ಮಾಡಿದೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಯಶವಂತಪುರ-ಕಾರವಾರ-ವಾಸ್ಕೋ ನಡುವೆ ಈ ರೈಲು ಪ್ರತಿದಿನ ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ಹೇಳಿದೆ. ಬೆಂಗಳೂರು ಮತ್ತು ಕರಾವಳಿಯನ್ನು ಈ ರೈಲು ಸಂಪರ್ಕಿಸಲಿದೆ.
ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ರೈಲು ನಂಬರ್ 06587/06588 ರೈಲು ಪ್ರತಿ ದಿನ ರಾತ್ರಿ ಸಂಚರಿಸಲಿದೆ. ಈ ರೈಲು ಹಾಸನ-ಸುಬ್ರಮಣ್ಯ ರೋಡ್-ಪಡೀಲ್-ಉಡುಪಿ-ಕುಂದಾಪುರ-ಬೈಂದೂರು-ಭಟ್ಕಳ-ಮುರುಡೇಶ್ವರ-ಕುಮಟಾ-ಗೋಕರ್ಣ ರಸ್ತೆ-ಅಂಕೋಲಾ-ಕಾರವಾರ-ಮಡಗಾಂವ್ ಮೂಲಕ ವಾಸ್ಕೋಗೆ ತಲುಪಲಿದೆ.
ಕ್ಯಾಂಟೀನ್ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿ
ಒಟ್ಟು 14 ಬೋಗಿಗಳನ್ನು ಹೊಂದಿರುವ ರೈಲು ಇದಾಗಿದೆ. 696 ಕಿ. ಮೀ. ದೂರವನ್ನು ಈ ರೈಲು ಕ್ರಮಿಸಲಿದೆ. ರೈಲಿಗೆ ವಿಶೇಷವಾದ ದರವನ್ನು ರೈಲ್ವೆ ಇಲಾಖೆ ನಿಗದಿ ಮಾಡಿದೆ. ಕರಾವಳಿ-ಬೆಂಗಳೂರು ಜನರಿಗೆ ಇದು ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ಹೊಸ ರೈಲನ್ನು ಘೋಷಣೆ ಮಾಡಿದ ಸುರೇಶ್ ಅಂಗಡಿಯವರಿಗೆ ಹಾಗೂ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.