ವೈಲ್ಡ್ ಕರ್ನಾಟಕ ಕಿರುಚಿತ್ರ ನೋಡಿದ ಯಡಿಯೂರಪ್ಪ
ಬೆಂಗಳೂರು, ಜನವರಿ 28 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ 'ವೈಲ್ಡ್ ಕರ್ನಾಟಕ' ಕಿರುಚಿತ್ರವನ್ನು ವೀಕ್ಷಿಸಿದರು. ಕರ್ನಾಟಕದ ವನ್ಯಜೀವಿ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಲು ಯುವಕರ ತಂಡ ಈ ಕಿರುಚಿತ್ರವನ್ನು ರೂಪಿಸಿದೆ.
ಬೆಂಗಳೂರಿನ ಓರಾಯನ್ ಮಾಲ್ನಲ್ಲಿ ಯಡಿಯೂರಪ್ಪ 'ವೈಲ್ಡ್ ಕರ್ನಾಟಕ' ಕಿರುಚಿತ್ರ ವೀಕ್ಷಿಸಿದರು. ಅರಣ್ಯ ಸಚಿವ ಸಿ. ಸಿ. ಪಾಟೀಲ್, ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅರಣ್ಯ ಇಲಾಖೆ ವಾಹನದ ಮೇಲೆ ಒಂಟಿ ಸಲಗದ ದಾಳಿ: ಎದೆ ನಡುಗಿಸುವ ವಿಡಿಯೋ
ರಾಜ್ಯದ ವನ್ಯಜೀವಿ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸಲು ಯುವಕರ ತಂಡ ಈ ಕಿರುಚಿತ್ರವನ್ನು ರೂಪಿಸಿದೆ. ಭಾರತದ ಪ್ರಥಮ 4ಕೆ ಬ್ಲ್ಯೂ ಚಿಪ್ ಕಿರುಚಿತ್ರ ಎಂಬ ಹೆಗ್ಗಳಿಗೆ ವೈಲ್ಡ್ ಕರ್ನಾಟಕಕ್ಕಿದೆ.
ಚಿತ್ರದುರ್ಗದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಾಪತ್ತೆ; ಚಿರತೆಗೆ ಬಲಿಯಾಗಿರುವ ಶಂಕೆ
ಅತ್ಯಾಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು, ರಾಜ್ಯದ ಮೂಲೆ ಮೂಲೆ ತಿರುಗಾಡಿ ಅಪರೂಪದ ದೃಶ್ಯಾವಳಿಗಳನ್ನು ಸೆರೆ ಹಿಡಿದು ಈ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ.
ಕಾಡು ಪ್ರಾಣಿ ನಾಡಿಗೆ ಬರುವುದ ತಡೆಯುವುದೇ ಈ ಆಸ್ಟ್ರೇಲಿಯಾ ತಂತ್ರಜ್ಞಾನ?
ಅಮೋಘವರ್ಷ, ಕಲ್ಯಾಣ ವರ್ಮ, ಶರತ್ ಚಂಪಾಟಿ 'ವೈಲ್ಡ್ ಕರ್ನಾಟಕ' ಕಿರುಚಿತ್ರದ ರೂವಾರಿಗಳು. ಕಿರುಚಿತ್ರದ ಟೀಸರ್ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕಿರುಚಿತ್ರದ ಚಿತ್ರೀಕರಣಕ್ಕಾಗಿ ಸುಮಾರು ಸುಮಾರು 2 ಕೋಟಿ ವೆಚ್ಚದ ದ್ರೋಣ್ ಬಳಕೆ ಮಾಡಲಾಗಿದೆ.
ಛಾಯಾಗ್ರಹಣವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ಬೆಂಗಳೂರು ಮೂಲದ ಅಮೋಘವರ್ಷ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್. ಸಂಪೂರ್ಣವಾಗಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.