ಪ್ರಧಾನಿ ಮೋದಿ ಎದುರು ಭರ್ಜರಿ ಬೇಡಿಕೆ ಇಟ್ಟ ಮುಖ್ಯಮಂತ್ರಿ ಯಡಿಯೂರಪ್ಪ!
ಬೆಂಗಳೂರು, ಫೆ. 20: ಕೇಂದ್ರ ಸರ್ಕಾರದ ಎದುರು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸರ್ಕಾರದಲ್ಲಿನ ಇತರ ಮಂತ್ರಿಗಳು ಖಡಕ್ ಆಗಿ ಬೇಡಿಕೆಗಳನ್ನು ಮಂಡಿಸುವುದಿಲ್ಲ ಎಂದು ವಿರೋಧ ಪಕ್ಷಗಳ ನಾಯಕರು ಆಗಾಗ ಕಿಚಾಯಿಸುತ್ತಲೇ ಇರುತ್ತಾರೆ. ಅದಕ್ಕೆಲ್ಲ ಉತ್ತ ಎಂಬಂತೆ ನೀತಿ ಆಯೋಗದ ಸಭೆಯಲ್ಲಿ ಇವತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಎದುರು ರಾಜ್ಯದ ಹಲವು ಬೇಡಿಕೆಗಳನ್ನು ಮಂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನೀತಿ ಆಯೋಗದ ಆಡಳಿತ ಮಂಡಳಿಯ 6ನೇ ಸಭೆ ನಡೆಯಿತು. ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ವಿವಿಧ ಅಭಿವೃದ್ಧಿ ಕುರಿತ ವಿಷಯಗಳ ಬಗ್ಗೆ ಚರ್ಚೆ ನಡೆಸಿದಿರು. ಜೊತೆಗೆ ನಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ವಿಚಾರ ವಿನಿಮಯವ ನಡೆಸಿ ಬೇಡಿಕೆಗಳ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಲಾಯ್ತು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್!
ಆ ಮೂಲಕ ರಾಜ್ಯದಲ್ಲಿನ ವಿರೋಧ ಪಕ್ಷಗಳ ನಾಯಕರಿಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿರುಗೇಟು ಕೊಟ್ಟರು. ಜೊತೆಗೆ ನೀತಿ ಆಯೋಗದ ಸಭೆಯಲ್ಲಿ ರಾಜ್ಯದ ಬೇಡಿಕೆಗಳನ್ನು ಸೂಕ್ತವಾಗಿಯೇ ಸಿಎಂ ಯಡಿಯೂರಪ್ಪ ಅವರು ಮಂಡಿಸಿದ್ದಾರೆ.
ಅತ್ಯುತ್ತಮ ಹಣಕಾಸು ನಿರ್ವಹಣೆ
ಕೊರೊನಾವೈರಸ್ ಸಂಕಷ್ಟದ ಹೊರತಾಗಿಯೂ ರಾಜ್ಯದ ಹಣಕಾಸು ಸ್ಥಿತಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002 ರಲ್ಲಿ ನಿಗದಿಪಡಿಸಿದ ಮಾನದಂಡದ ಮಿತಿಯಲ್ಲಿಯೇ ಇದೆ ಎಂದು ಪ್ರಧಾನಿ ಮೋದಿ ಅವರಿಗೆ ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೈಗೊಂಡಿರುವ ಕ್ರಮಗಳಲ್ಲಿ ಮುಖ್ಯವಾಗಿ ನೂತನ ಕೈಗಾರಿಕಾ ನೀತಿ 2020-25, ಅಫೀಡವಿಟ್ ಆಧಾರಿತ ಅನುಮೋದನಾ ವ್ಯವಸ್ಥೆ, ರಫ್ತು ಉತ್ತೇಜನಕ್ಕೆ ಕೈಗೊಂಡಿರುವ ಕ್ರಮಗಳು, ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಒದಗಿಸುವ ಕುರಿತು ಅಮೇಜಾನ್ ಹಾಗೂ ಫ್ಲಿಪ್ ಕಾರ್ಟ್ , ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳ ಕುರಿತು ನೀತಿ ಆಯೋಗಕ್ಕೆ ಯಡಿಯೂರಪ್ಪ ಅವರು ವಿವರಿಸಿದ್ದಾರೆ.
ದೇಶದಲ್ಲಿಯೇ ಕಡಿಮೆ ನಿರುದ್ಯೋಗ!
ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಕೈಗಾರಿಕೋದ್ಯಮಿಗಳ ಸಹಯೋಗದೊಂದಿಗೆ ತರಬೇತಿ ವ್ಯವಸ್ಥೆಯ ಉನ್ನತೀಕರಣದ ಮೂಲಕ ನೂತನ ತಂತ್ರಜ್ಞಾನ, ಕೌಶಲ್ಯಗಳ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ನಿರುದ್ಯೋಗ ದೇಶದಲ್ಲೇ ಅತ್ಯಂತ ಕನಿಷ್ಠ ಪ್ರಮಾಣ ಅಂದರೆ ಸುಮಾರು ಶೇ. 3.6 ರಷ್ಟಿದೆ ಎಂದು ಯಡಿಯೂರಪ್ಪ ಅವರು ವಿವರಿಸಿದ್ದಾರೆ. ಜೊತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತು ಕಾರ್ಯಪಡೆ ರಚಿಸಲಾಗಿದ್ದು, ಪೌಷ್ಟಿಕತೆಯ ಮಟ್ಟ ಹೆಚ್ಚಿಸಲು ಸಿರಿ ಧಾನ್ಯಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಆಯಾ
ಪ್ರಾದೇಶಿಕ
ಸಂಪನ್ಮೂಲಗಳಿಗೆ
ಅನುಗುಣವಾಗಿ
ರೈತರಿಗೆ
ಬೆಳೆ
ಬೆಳೆಯಲು
ರೈತ
ಸಂಪರ್ಕ
ಕೇಂದ್ರಗಳ
ಮೂಲಕ
ಮಾಹಿತಿ
ನೀಡಲಾಗುತ್ತಿದೆ.
ಇದರೊಂದಿಗೆ
ಸ್ಥಳೀಯ
ಜಾನುವಾರು
ತಳಿಗಳನ್ನು
ಸಂರಕ್ಷಿಸಲು
ಸಹ
ಉದ್ದೇಶಿಸಲಾಗಿದೆ.
ರೈತರ ಆದಾಯ ಹೆಚ್ಚಿಸಲು ಯೋಜನೆ
ವೈಜ್ಞಾನಿಕ ಮಾರುಕಟ್ಟೆ ಮಾಹಿತಿ ಕೋಶವನ್ನು ಸ್ಥಾಪಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಆದಾಯ ಆಧಾರಿತ ಸಿದ್ಧಾಂತದೆಡೆಗೆ ಗಮನ ಕೇಂದ್ರೀಕರಿಸಲು ಉದ್ದೇಶಿಸಲಾಗಿದೆ. ಆತ್ಮನಿರ್ಭರ್ ಯೋಜನೆಯಡಿ ಹೆಚ್ಚುವರಿಯಾಗಿ ಬೆಳೆದ ಹಣ್ಣು ಮತ್ತು ತರಕಾರಿಗಳಿಗೆ ಆನ್ ಲೈನ್ ಮಾರುಕಟ್ಟೆ ಹಾಗೂ ಪೂರಕ ಮೂಲಸೌಕರ್ಯ ಒದಗಿಸಲು ಉದ್ದೇಶಿಸಲಾಗಿದೆ. ಅಟಲ್ ಭೂ ಜಲ ಯೋಜನೆಯಡಿ ಅಂತರ್ಜಲ ಕೊರತೆ ಇರುವ 41 ತಾಲ್ಲೂಕುಗಳಲ್ಲಿ ಜಲ ಸಂರಕ್ಷಣೆ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ.
ಮೋದಿ ಎದುರು ಇಟ್ಟ ಇತರ ಬೇಡಿಕೆಗಳು
* ರಾಜ್ಯದ 114 ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಯನ್ನು ನೀತಿ ಆಯೋಗದ 49 ಮಹತ್ವಾಕಾಂಕ್ಷೆಯ ಮಾನದಂಡಗಳ ಅನ್ವಯ ಕೈಗೊಳ್ಳಲಾಗುತ್ತಿದೆ.
*ಹಿಂದುಳಿದ
ತಾಲ್ಲೂಕುಗಳು
ಹಾಗೂ
ವಲಯಗಳ
ಅಭಿವೃದ್ಧಿಗೆ
ಕಾರ್ಪೊರೇಟ್
ಸಾಮಾಜಿಕ
ಹೊಣೆಗಾರಿಕೆ
ನಿಧಿಯ
ನೆರವು
ಪಡೆಯಲು
ಆಕಾಂಕ್ಷಾ
ಎಂಬ
ಪೋರ್ಟಲ್
ಪ್ರಾರಂಭಿಸಲಾಗಿದೆ.
*
ಸೇವಾ
ಸಿಂಧು
ಯೋಜನೆಯಡಿ
ಜನತೆಗೆ
750
ಸೇವೆಗಳನ್ನು
ಕಾಗದರಹಿತವಾಗಿ
ಒದಗಿಸಲಾಗುತ್ತಿದೆ.
*
ಪ್ರಧಾನ
ಮಂತ್ರಿ
ಜನ
ಆರೋಗ್ಯ
ಯೋಜನಾ
ದಡಿ
3409
ಆಸ್ಪತ್ರೆಗಳು
ನೋಂದಾಯಿಸಿಕೊಂಡಿದ್ದು,
ಇದು
ದೇಶದಲ್ಲಿಯೇ
ಅತಿ
ಹೆಚ್ಚು.
ಆಯುಷ್ಮಾನ್
ಭಾರತ್
ಯೋಜನೆಯಡಿ
2753
ಕೋಟಿ
ರೂ.
ವೆಚ್ಚದಲ್ಲಿ
13
ಲಕ್ಷ
ಜನರಿಗೆ
ಚಿಕಿತ್ಸಾ
ಸೌಲಭ್ಯ
ಒದಗಿಸಲಾಗಿದೆ.
*
ರಾಜ್ಯದಲ್ಲಿ
4607
ಆರೋಗ್ಯ
ಮತ್ತು
ಕ್ಷೇಮ
ಕೇಂದ್ರಗಳು
ಕಾರ್ಯಾರಂಭ
ಮಾಡಿವೆ.
ಆತ್ಮನಿರ್ಭರ್
ಯೋಜನೆಯಡಿ
ರಾಜ್ಯದ
ಎಲ್ಲ
ಜಿಲ್ಲಾ
ಕೇಂದ್ರಗಳಲ್ಲಿನ
ಸರ್ಕಾರಿ
ಆಸ್ಪತ್ರೆಗಳಲ್ಲಿ
ಸುಪರ್-ಸ್ಪೆಷಾಲಿಟಿ
ಚಿಕಿತ್ಸಾ
ಸೌಲಭ್ಯಗಳನ್ನು
ಒದಗಿಸಲು
ಪ್ರಸ್ತಾಪಿಸಲಾಗಿದೆ.
*
ಆಯುಷ್
ಪದ್ಧತಿಗೆ
ಉತ್ತೇಜನ
ನೀಡುವ
ಸಮಗ್ರ
ಸಾರ್ವಜನಿಕ
ಆರೋಗ್ಯ
ನೀತಿಯನ್ನು
ಜಾರಿಗೆ
ತರಲಾಗಿದೆ.
ಪೌಷ್ಟಿಕತೆ
ಕಡಿಮೆ
ಇರುವ
ರಾಜ್ಯದ
16
ಜಿಲ್ಲೆಗಳ
67
ತಾಲ್ಲೂಕುಗಳಲ್ಲಿ
ಪೌಷ್ಟಿಕತೆ
ಅಭಿವೃದ್ಧಿಗೆ
ಆದ್ಯತೆ
ನೀಡಲಾಗುವುದು
ಎಂದು
ಸಿಎಂ
ಯಡಿಯೂರಪ್ಪ
ತಿಳಿಸಿದರು.
*
ಭದ್ರಾ
ಮೇಲ್ದಂಡೆ
ಮತ್ತು
ಕೃಷ್ಣಾ
ಮೇಲ್ದಂಡೆ
ಯೋಜನೆಗಳನ್ನು
ರಾಷ್ಟ್ರೀಯ
ಯೋಜನೆ
ಎಂದು
ಘೋಷಿಸುವಂತೆ
ಆಗ್ರಹ.
*
ಜೊತೆಗೆ
ನದೀ
ತಿರುವು
ಯೋಜನೆಗಳಿಗೆ
ಅನುದಾನ
ಒದಗಿಸುವಂತೆ
ಹಾಗೂ
ಕಾಲುವೆಗಳ
ಆಧುನೀಕರಣ
ಯೋಜನೆಯಡಿ
ರಾಜ್ಯದಿಂದ
6673
ಕೋಟಿ
ರೂ.
ಗಳ
ಪ್ರಸ್ತಾವನೆ
ಸಲ್ಲಿಸಲಾಗಿದ್ದು,
ಅವುಗಳನ್ನು
ಮಂಜೂರು
ಮಾಡುವಂತೆ
ಮನವಿ.
*
ಖಾಸಗಿ
ಸಹಭಾಗಿತ್ವದಲ್ಲಿ
3
ಬಂದರುಗಳ
ಅಭಿವೃದ್ಧಿ,
ರೈಲ್ವೆಯೊಂದಿಗೆ
ಜಂಟಿ
ಪಾಲುದಾರಿಕೆಯಲ್ಲಿ
ಬೆಂಗಳೂರು
ಉಪ
ನಗರ
ರೈಲು
ಅಭಿವೃದ್ಧಿ
ಯೋಜನೆ
ಜಾರಿಗೊಳಿಸಲಾಗುತ್ತಿದೆ,
ಅದಕ್ಕೆ
ಅನುದಾನಕ್ಕೆ
ಮನವಿ.
*
ಕಾನೂನು
ತೊಡಕುಗಳು
ಮತ್ತು
ಪರಿಸರ
ಹೋರಾಟಗಳ
ಹಿನ್ನೆಲೆಯಲ್ಲಿ
ಮೂಲಸೌಕರ್ಯ
ಯೋಜನೆಗಳು
ವಿಳಂಬವಾಗುತ್ತಿರುವ
ಹಿನ್ನೆಲೆಯಲ್ಲಿ
ನ್ಯಾಯಾಲಯಗಳಲ್ಲಿ
ಇಂತಹ
ವ್ಯಾಜ್ಯಗಳ
ತ್ವರಿತ
ವಿಲೇವಾರಿಗೆ
ವ್ಯವಸ್ಥೆ
ರೂಪಿಸುವಂತೆ
ಮನವಿ.
*
ನೂತನ
ಶಿಕ್ಷಣ
ನೀತಿಯ
ಅನುಷ್ಠಾನಕ್ಕಾಗಿ
ಕೈಗೊಳ್ಳಬೇಕಾಗಿರುವ
ಹಲವು
ಉಪಕ್ರಮಗಳಿಗೆ
ಕೇಂದ್ರ
ಸರ್ಕಾರದ
ಆರ್ಥಿಕ
ನೆರವು
ಒದಗಿಸುವಂತೆ
ಪ್ರಧಾನ
ಮಂತ್ರಿಯವರಿಗೆ
ಮನವಿ.
*
ಎಲ್ಲ
ಸರ್ಕಾರಿ
ಕಚೇರಿಗಳಿಗೆ
ಇಂಟರ್ನೆಟ್
ಸೌಲಭ್ಯ
ಒದಗಿಸಲು
ಒಪ್ಟಿಕಲ್
ಫೈಬರ್
ನೆಟ್
ವರ್ಕ್
ರೂಪಿಸಲು
ನಿರ್ಧರಿಸಲಾಗಿದ್ದು,
ಇದಕ್ಕೆ
ಕೇಂದ್ರ
ಸರ್ಕಾರದಿಂದ
4300
ಕೋಟಿ
ರೂ.
ನೆರವು
ಒದಗಿಸುವಂತೆ
ಕೋರಲಾಗಿದೆ.
ಮೇಲಿನ ಈ ಎಲ್ಲ ಈ ಎಲ್ಲ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸುವಂತೆ ಪ್ರಧಾನಿ ಓದಿ ಅವರಲ್ಲಿ ಸಿಎಂ ಯಡಿಯೂರಪ್ಪ ಅವರು ನೇರವಾಗಿ ಆಗ್ರಹ ಮಾಡಿದರು.