ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೇಷಾದ್ರಿಪುರಂನಲ್ಲಿ ಪುತ್ರನ ಜೊತೆ ದೋಸೆ ಸವಿದ ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಮಾರ್ಚ್ 15 : ಲೋಕಸಭಾ ಚುನಾವಣೆ ಸಿದ್ಧತಾ ಕಾರ್ಯಗಳಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬ್ಯುಸಿಯಾಗಿದ್ದಾರೆ. ಕೆಲಸದ ನಡುವೆಯೇ ಬಿಡುವು ಮಾಡಿಕೊಂಡು ಅವರು ಶೇಷಾದ್ರಿಪುರಂನಲ್ಲಿ ದೋಸೆ ಸವಿದರು.

ಶುಕ್ರವಾರ ಸಂಜೆ ಬಿ.ಎಸ್.ಯಡಿಯೂರಪ್ಪ ಅವರು ಶೇಷಾದ್ರಿಪುರಂನ ಸನ್ಮಾನ್ ಹೋಟೆಲ್‌ಗೆ ಭೇಟಿ ನೀಡಿದದರು. ಬಿ.ವೈ.ವಿಜಯೇಂದ್ರ ಅವರ ಜೊತೆ ಮಾತುಕತೆ ನಡೆಸುತ್ತಲೇ ದೋಸೆ ಸವಿದರು. ಕೆಲವು ಬೆಂಬಲಿಗರು ಈ ಸಮಯದಲ್ಲಿ ಜೊತೆಯಲ್ಲಿದ್ದರು.

ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ಶನಿವಾರ ಅಂತಿಮಚಾಮರಾಜನಗರದ ಬಿಜೆಪಿ ಅಭ್ಯರ್ಥಿ ಶನಿವಾರ ಅಂತಿಮ

Yeddyurappa visits Sanman hotel Seshadripuram

ಇಂದು ಬೆಂಗಳೂರಿನಲ್ಲಿಯೇ ಇದ್ದ ಯಡಿಯೂರಪ್ಪ ಅವರು ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದಲ್ಲಿ ಬೆಳಗ್ಗೆಯಿಂದ ಹಲವು ಸಭೆಗಳನ್ನು ನಡೆಸಿದರು. ವಿ.ಶ್ರೀನಿವಾಸ ಪ್ರಸಾದ್, ಎ.ಮಂಜು ಸೇರಿದಂತೆ ವಿವಿಧ ನಾಯಕರ ಜೊತೆ ಸಭೆಗಳನ್ನು ಮಾಡಿದರು.

7 ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು7 ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿ ಅಂತಿಮಗೊಳಿಸಲು ಬಿಜೆಪಿ ಕಸರತ್ತು

ಸಂಜೆ ಬಿಡುವು ಮಾಡಿಕೊಂಡು ಬಿ.ವೈ.ವಿಜಯೇಂದ್ರ ಅವರ ಜೊತೆ ಸನ್ಮಾನ್ ಹೋಟೆಲ್‌ಗೆ ಭೇಟಿ ಕೊಟ್ಟು ಈರುಳ್ಳಿ ದೋಸೆಯನ್ನು ಸವಿದರು. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯು ಸಿದ್ಧಗೊಂಡಿದ್ದು, ಮಾ.18ರಂದು ಬಿಡುಗಡೆಯಾಗಲಿದೆ.

B.Y.Vijayendra

ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಯಡಿಯೂರಪ್ಪ ದೋಸೆ ತಿನ್ನುತ್ತಿರುವ ಚಿತ್ರವನ್ನು ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ್ದಾರೆ.

English summary
Karnataka BJP president B.S.Yeddyurappa today enjoyed a tasty dosa in Sanman hotel Seshadripuram, Bengaluru along with his son B.Y.Vijayendra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X