ನೇಕಾರರಿಗೆ, ರೈತರಿಗೆ ಭರ್ಜರಿ ಗಿಫ್ಟ್ ಕೊಟ್ಟ ಸಿಎಂ ಯಡಿಯೂರಪ್ಪ
ಬೆಂಗಳೂರು, ಜುಲೈ 26: ಕರ್ನಾಟಕ ರಾಜಕೀಯ ಅನಿಶ್ಚಿತತೆ ಇನ್ನೂ ಚಾಲ್ತಿಯಲ್ಲಿರುವಾಗಲೇ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಪ್ರಮಾಣ ವಚನ ಸ್ವೀಕರಿಸಲು ಸನದ್ಧರಾಗಿದ್ದಾರೆ.
ಯಡಿಯೂರಪ್ಪ ಹಾಗೂ ಸಂಗಡಿಗರು, ಒಂದು ವರ್ಷ ನಾಲ್ಕು ತಿಂಗಳು ನಡೆಸಿದ ಸತತ ತಂತ್ರದ ಫಲವಾಗಿ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಪತನವಾಗಿದ್ದು, ಕುಮಾರಸ್ವಾಮಿ ಅವರು ತ್ಯಜಿಸಿರುವ ಮುಖ್ಯಮಂತ್ರಿ ಸ್ಥಾನವನ್ನು ಇಂದು ಸಂಜೆ ಯಡಿಯೂರಪ್ಪ ಅವರು ಅಲಂಕರಿಸುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಪರಿಸ್ಥಿತಿಗಿಂತಲೂ ಭಿನ್ನವಾದ ಪರಿಸ್ಥಿತಿಯೇನೂ ಯಡಿಯೂರಪ್ಪ ಅವರಿಗೆ ಇಲ್ಲವೆಂಬುದು ಸ್ಪಷ್ಟ.
ಯಡಿಯೂರಪ್ಪ ಪ್ರಮಾಣ ವಚನ; ಮುಹೂರ್ತವೇ ಸರಿ ಇಲ್ಲ ಅಂತಿದ್ದಾರೆ ಜ್ಯೋತಿಷಿಗಳು
ಇಂದು ಬೆಳಿಗ್ಗೆಯಷ್ಟೆ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಬಳಿ ಬಹುಮತವಿದೆಯೆಂದು ಪತ್ರ ನೀಡಿದ್ದರು, ಅದರಂತೆ ಸರ್ಕಾರ ರಚನೆಗೆ ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದು, ಇಂದು ಸಂಜೆ 6:30 ಕ್ಕೆ ಯಡಿಯೂರಪ್ಪ ಅವರು ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
2018 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಮೂರು ದಿನಗಳ ನಂತರ ಬಹುಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ದರು. ಇಂದೂ ಸಹ ಹೆಚ್ಚು ಬದಲಾದ ಪರಿಸ್ಥಿತಿಗಳು ಯಡಿಯೂರಪ್ಪ ಅವರಿಗೆ ಇಲ್ಲವಾದರೂ ಆಗಿನದ್ದಿಕ್ಕಿಂತಲೂ ಸ್ವಲ್ಪವೇ ವಾಸಿಯಾದ ಪರಿಸ್ಥಿತಿಗಳಿವೆ.
ವ್ಯಕ್ತಿಚಿತ್ರ: "ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ
ಎಲ್ಲವೂ ಅತೃಪ್ತ ಶಾಸಕರು ಹಾಗೂ ಸ್ಪೀಕರ್ ರಮೇಶ್ ಕುಮಾರ್ ಅವರು ತೆಗೆದುಕೊಳ್ಳುವ ನಿರ್ಣಯದ ಮೇಲೆ ನಿಂತಿದೆಯೆಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು. ಇಂದು ಯಡಿಯೂರಪ್ಪ ಅವರೇನೋ ಸುಲಭವಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಒಂದು ವಾರದೊಳಗೆ ಬಹುಮತ ಸಾಬೀತು ಮಾಡುವುದು ಅವರಿಗೆ ನಿಜವಾದ ಅಗ್ನಿ ಪರೀಕ್ಷೆ ಆಗಲಿದೆ.
ನೂತನ ಮುಖ್ಯಮಂತ್ರಿಗಳಾಗಿ ದೇವರ ಹೆಸರಿನಲ್ಲಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರಿಂದ ಪ್ರಮಾಣ ವಚನ ಸ್ವೀಕಾರ#BSYediyurappa #BJP pic.twitter.com/GlhkQAIbxI
— CM of Karnataka (@CMofKarnataka) July 26, 2019